ಆತ್ಮಿಯರೇ,

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕಾವ್ಯ ಕಳುಹಿಸಿದವರು ಡಾ.ಸಂಗಯ್ಯ ಶೇ ಶಿರೂರಮಠ ಅವರು. ಪುಣೆಯ ಡಿಫೆನ್ಸ್ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದಾ ಓದು ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಂಡ ಡಾ.ಸಂಗಯ್ಯ ಅವರ, ಓದಿನ ಅಭಿರುಚಿಗೆ ತಕ್ಕ ಇಲಾಖೆಯೇ ಸಿಕ್ಕಿದೆ. ಸಾಹಿತ್ಯದಲ್ಲಿ ಭಾವಗೀತೆ, ಕಥಾ ಪ್ರಕಾರಗಳಲ್ಲಿ ಇವರ ಸಂಕಲನಗಳು ಪ್ರಕಟಗೊಂಡಿವೆ. ಹೃದಯ ಸಂಗಮ, ಭಾವಬಿಂಬ ಎನ್ನುವ ಎರಡು ಸಂಕಲ ಹಾಗೂ ಬದುಕಿನಂಗಳ ಎಂಬ ಕಥಾ ಸಂಕಲನಗಳನ್ನು ಈಗಾಗಲೇ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಒಂದು ಕಾದಂಬರಿ ಕೂಡ ಅಚ್ಚಿನಲ್ಲಿದೆ. ಮೂಲತಃ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಡಾ.ಸಂಗಯ್ಯ ಭಯದ ಗೂಡಿನಲ್ಲಿ ಒಂದಾದ ಜೀವಗಳ ತಲ್ಲಣವನ್ನು ಕಾವ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ.

ಕೊರೋನಾ

ಮಾರಿ ಹೆಮ್ಮಾರಿ ಮಹಾಮಾರಿ ಎಂದು ಹೆದರುತ

ಗೂಡಿನಲ್ಲಿ ಒಂದಾಗಿ ನೋವಿನಲ್ಲಿ ಬದುಕುತಿಹರು ಜನರು

ಬಾಳೆಲ್ಲ ಬಂಧನವಾಗಿ ಜೀವ ಜೀವಗಳು ಹೆದರುತ್ತಾ

ದಾರಿ ಕಾಣದೆ ಕಂಗಾಲಾಗಿ ಕಣ್ಣು ಕಣ್ಣು ಬಿಡುತಿಹರು.

ಕೊರೋನಾ ಸೋಂಕಿನ ಋದ್ರ ತಾಂಡವ ನಿಯಂತ್ರಿಸಲು

ಯುಕ್ತಿಯ ವೃತ್ತಿ ಬಾಂಧವರು ಸೇವೆಯ ಗೈಯುತಿಹರು

ಅಣು ಅಣು ತೃಣಕಾಷ್ಟದ ಭಾಗವಾಗಿ ಕಣ್ಣಿಗೆ ಕಾಣದೆ ದೇಶ

ವಿದೇಶದ ಜನಜಂಗುಳಿಯಿಂದ ಅಂಟುತಿದೆ ಈ ಸೋಂಕು

ಹಸಿವನು ನೀಗಿಸಲು ಶ್ರಮಜೀವಿಗಳು ಕಾರ್ಮೋಡದ

ಕರಿನೆರಳಿನ ಭಯದಲ್ಲಿ ಮಂತ್ರಮುಗ್ಧರಾಗಿ ಕುಳಿತಿಹರು

ಪ್ರಜಾಪ್ರತಿನಿಧಿಗಳು ಆಡಳಿತ ಮಂಡಳಿ ಕೈಮುಗಿದು

ಬೇಡುತ್ತಿಹರು ನಮ್ಮನಿಮ್ಮೆಲ್ಲರ ಜೀವದ ರಕ್ಷಣೆಗಾಗಿ

         ಡಾ.ಸಂಗಯ್ಯ ಶೇ ಶಿರೂರಮಠ(ಮುಂಬೈ), ಅಳವಂಡಿ, ಕೊಪ್ಪಳ

1 comment
Leave a Reply

Your email address will not be published. Required fields are marked *

You May Also Like

ಚೀನಾ – ಭಾರತೀಯ ಸೈನಿಕರ ನಡುವೆ ಸಂಘರ್ಷ – 76 ಸೈನಿಕರಿಗೆ ಗಾಯ!

ಹೊಸದೆಹಲಿ: ಲಡಾಖ್‌ನ ಗಲ್ವಾನ್‌ ಕಣಿವೆ ಭಾರತ ಹಾಗೂ ಚೀನಾ ಸೈನಿಕರ ನಡುವೆ ನಡೆದ ಕಾಳಗದಲ್ಲಿ 76…

ಮಣಿಪುರ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ..!

ಇಂಫಾಲ: ಮಣಿಪುರದಲ್ಲಿ ಆಡಳಿತಾರೂಢ ಬಿಜೆಪಿಯ ಮೂವರು ಶಾಸಕರು ಮತ್ತು ಎನ್.ಪಿ.ಪಿ.ಯ ಒಬ್ಬ ಶಾಸಕ ರಾಜೀನಾಮೆ ನೀಡಿದ್ದಾರೆ.…

ಅನುದಾನ ರಹಿತ ಶಿಕ್ಷಕರು ಶಾಪಗ್ರಸ್ಥರೇ? ನಿಕೃಷ್ಟರೇ? ದೌರ್ಭಾಗ್ಯವಂತರೇ?

ಕೊರೋನಾ ವೈರಸ್ ಎಲ್ಲರಿಗೂ ಸರಿಸಮಾನವಾಗಿ ಬಿಡದೆ ಬೆನ್ನತ್ತಿದೆ. ಸರ್ಕಾರೇತರ ಶಿಕ್ಷಕರಿಗೆ ಅದರಲ್ಲೂ ಅಸಂಖ್ಯಾತ ಅನುದಾನರಹಿತ ಶಿಕ್ಷಕರಿಗೆ…

ಸಕ್ಕರೆ ನಾಡಿನಲ್ಲಿ ಸಿಹಿಯಾದ ಮಾತಿಗೆ ಮರುಳಾಗಿ 20 ಕೋಟಿ ಮೌಲ್ಯದ ಚಿನ್ನ ಕಳೆದುಕೊಂಡ ನಾರಿಯರು!!

ಬೆಂಗಳೂರು : ಸಕ್ಕರೆ ನಾಡಿನಲ್ಲಿ ಸಿಹಿಯಾದ ಆಮಿಷಕ್ಕೆ ಮಹಿಳೆಯರು ಬಲಿಯಾಗಿ, ಬರೋಬ್ಬರಿ ರೂ. 20 ಕೋಟಿ ಮೌಲ್ಯದ ಚಿನ್ನ ಕಳೆದುಕೊಂಡಿರುವ ಘಟನೆ ನಡೆದಿದೆ.