ರಾಜ್ಯದಲ್ಲಿನ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಕುರಿತು ನಾಳೆ ಸಾಮಾಜಿಕ ಜಾಲತಾಣಗಳ ಮೂಲಕ ಹ್ಯಾಶ್ ಟ್ಯಾಗ್ ಪ್ರತಿಭಟನೆಗೆ ರಾಜ್ಯದ ಜನಪರ,ರೈತಪರ,ಕಾರ್ಮಿಕ ಹಾಗೂ ಜೀವಪರ ಸಂಘಟನೆಗಳು ಮುಂದಾಗಿವೆ. ಪೋಸ್ಟರ್ ಪ್ರತಿಭಟನೆಯ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ ಟ್ಯಾಗ್ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸಕ್ಕೆ ಸಂಘಟನೆಗಳು ಮುಂದಾಗಿವೆ. ಈ ಕುರಿತಾದ ನಾಳೆಯ ಪ್ರತಿಭಟನೆಗೆ ವಿವಿಧ ಕಾರ್ಮಿಕ ಹಾಗೂ ಜೀವಪರ ಸಂಘಟನೆಗಳು ಜನರಲ್ಲಿ ಮಾಡಿಕೊಂಡ ಮನವಿ ಇಲ್ಲಿದೆ ನೋಡಿ..

ಸ್ನೇಹಿತರೆ…

ಕರ್ನಾಟಕ ಸರ್ಕಾರ ಬಿಲ್ಡರ್ ಲಾಬಿಯಾ ಒತ್ತಡಕ್ಕೆ ಒಳಗಾಗಿ, ವಲಸೆ ಕಾರ್ಮಿಕರನ್ನು, ಅವರ ಹಕ್ಕುಗಳನ್ನು ಬಲಿ ಕೊಡಲು ಹೊರಟಿದೆ.
ಕಳೆದ ಒಂದುವರೆ ತಿಂಗಳಿಂದ ವಲಸೆ ಕಾರ್ಮಿಕರು ಊಟ ಇಲ್ಲದೆ, ವೇತನ ವಿಲ್ಲದೆ ಹೇಳಲಾರದ ಕಷ್ಟ ಅನುಭವಿಸಿದ್ದಾರೆ. ಹಾಗಾಗಿ ಅವರೆಲ್ಲ ಮನೆಗೆ ಹೋಗಲು ಬಯಸುತ್ತಿದ್ದಾರೆ. ಆದರೆ ನಮ್ಮ ಕ್ರೂರ ಸರ್ಕಾರ, ರೈಲುಗಳನ್ನು ನಿಲ್ಲಿಸಿ, ಅಮಾನೀಯವಾಗಿ ಕಾರ್ಮಿಕರನ್ನು ಇಲ್ಲಿಯೇ ಬಂಧಿಸಿ, ನಮ್ಮ ರಾಜ್ಯವನ್ನ ಬಹಿರಂಗ ಜೈಲು ಮಾಡಲು ಹೊರಟಿದೆ. ಇದು ಜೀತದ ಪದ್ಧತಿ ಇದ್ದಂತೆ. ಇದು ಸಂವಿಧಾನದ ಅನುಚ್ಛೇದ 23 ರ ಉಲ್ಲಂಘನೆ. ಹೀಗಾಗಿ ಕರ್ನಾಟಕದ ಜನರೆಲ್ಲ ಇದನ್ನು ವಿರೋಧಿಸಬೇಕೆಂದು ಕರೆ ನೀಡುತ್ತಿದ್ದೇವೆ.

ನಾಳೆ ಬೆಳಗ್ಗೆ (ಗುರುವಾರ 07 ಮೇ) , 9 ಘಂಟೆಗೆ ದಯವಿಟ್ಟು ನಿಮ್ಮ ನಿಮ್ಮ ಮನೆಗಳ ಮುಂದೆ ಪ್ಲಕಾರ್ಡ್ ಗಳು ಹಿಡಿದು ವಲಸಕ್ಕಿ ಕಾರ್ಮಿಕರಿಗೆ ಸಾಥ್ ನೀಡಿ. ಮನೆಗೆ ಹೋಗುವುದು, ಪ್ರತಿ ಕಾರ್ಮಿಕರ ಹಕ್ಕು. ಆ ಹಕ್ಕನ್ನು ಉಲ್ಲಂಘಿಸುವ ಬದಲು, ಆ ಹಕ್ಕನ್ನು ಪೂರೈಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕೋಣ.

ನಾಳೆ ಬೆಳಗ್ಗೆ 10 ಘಂಟೆಯಿಂದ ಮಧ್ಯಾಹ್ನ 12 ಘಂಟೆಯವರೆಗೆ, ಟ್ವಿಟ್ಟರ್ ಸ್ಟಾರ್ಮ್ ನಲ್ಲಿ ಸಹ ಭಾಗವಹಿಸಿ. #trainsformigrantsnow ಹಾಗೂ #ವಲಸಿಗರಿಗೆ ರೈಲು ನೀಡಿ ಎನ್ನುವ ಹ್ಯಾಶ ಟ್ಯಾಗ್ ಉಪಯೋಗಿಸಿ. ಹಾಗೆಯೇ ಈ ಅನ್ಯಾಯದ ವಿರುದ್ಧ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಿರಿ – cm@karnataka.gov.in ಎಂದು ಕರೆ ನೀಡಲಾಗಿದೆ.

Leave a Reply

Your email address will not be published. Required fields are marked *

You May Also Like

ದೆಹಲಿಗೆ ಆಮ್ಲಜನಕ ಕಳುಹಿಸಲು ಸಿದ್ಧತೆ ನೆಡಸಿದ ಕೇರಳ

ರಾಷ್ಟ್ರ ರಾಜಧಾನಿಯಲ್ಲಿ ವೈದ್ಯಕೀಯ ಆಮ್ಲಜನಕದ ದಾಸ್ತಾನು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕೇರಳವು ದೆಹಲಿಗೆ ಸಹಾಯ ಹಸ್ತ ಚಾಚಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಮಲಯಾಳಿ ಸಂಘಟನೆಗಳ ಮನವಿಗಳಿಗೆ ಸ್ಪಂದಿಸಿ ನೆರವು ನೀಡಲು ಕೇರಳ ಸರ್ಕಾರ ಸಿದ್ಧತೆ ನಡೆಸಿದೆ.

ವಲಸೆ ಕಾರ್ಮಿಕರಿಗೆ ವಸತಿ ಸೌಕರ್ಯ: 2 ಎಕರೆ ನಿವೇಶನ ವ್ಯವಸ್ಥೆಗೆ ಚಿಂತನೆ

ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಉದ್ಯೋಗ ಅರಸಿ ಮಂಗಳೂರಿಗೆ ಆಗಮಿಸುವ ಕಾರ್ಮಿಕರಿಗೆ ಸೂಕ್ತ ವಸತಿ ವ್ಯವಸ್ಥೆಯನ್ನು ಸರಕಾರದ ವತಿಯಿಂದಲೇ ಮಾಡಿ ಕೊಡಲು ನಿರ್ಧರಿಸಲಾಗಿದ್ದು, ಯೋಜನೆ ಸಿದ್ಧಪಡಿಸಲಾಗುತ್ತಿದೆ.

ಇಂದು ಕೊರೋನಾ ಸೋಂಕಿತರ ಸಂಖ್ಯೆ ಶತಕ..! ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು?

ಇಂದು ಕೂಡ ರಾಜ್ಯಾದ್ಯಂತ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆದಿದೆ. ಈ ಮೂಲಕ ರಾಜ್ಯದಲ್ಲಿ ಇಂದು 100 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ.

ಬಿಎಸ್‌ವೈ ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯಪಾಲ ವಜುಭಾಯಿ ವಾಲಾ

ಮಹಾಮಾರಿ ಕರೊನಾ ವೈರಸ್‌ನಿಂದ ಉಂಟಾದ ಕಠಿಣ ಪರಿಸ್ಥಿತಿನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶ್ವಿಯಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಮೆಚ್ಚುಗೆ ವ್ಯಕ್ತಪಡಿಸಿದರು.