ಕೊರೋನಾ ಕಾವ್ಯ ಸರಣಿಗೆ ಕವನ ಬರೆದವರು ಮುತ್ತು.ಹೆಚ್.ಬಿ(ಶಿಕ್ಷಕರು), ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಬಡತನದ ಬೇಗೆಯಲ್ಲಿ ಬೆಂದು ಬೆಳೆದ ಮುತ್ತು, ಭವಿಷ್ಯದ ಭರವಸೆಯ ಶಿಕ್ಷಕ ಮತ್ತು ಬರಹಗಾರ. ಅವರಲ್ಲಿನ ಜನಪರ ಮತ್ತು ಜೀವಪರ ಕಾಳಜಿಯೇ ಈ ಕಾವ್ಯದಲ್ಲಿ ಅಕ್ಷರ ರೂಪದಲ್ಲಿ ಹೊರಹೊಮ್ಮಿದೆ. ಸದಾ ಸಾಮಾಜಿಕ ಕಾಳಜಿ, ಕ್ರೀಯಾಶೀಲತೆ ಇವರ ಗುಣ ಸ್ವಭಾವ. ಮುತ್ತು ಅವರ ಸಾಧನೆಯ ಹಾದಿ ಸುಗಮವಾಗಲಿ. ಜೊತೆಗೆ ಸಮಾಜಕ್ಕೆ ಅವರಿಂದ ಹೆಚ್ಚಿನ ಸೇವೆ ಸಿಗಲಿ ಎಂದು ಹಾರೈಸೋಣ.

ಇದಕ್ಕೆ ಮದ್ದೆಲ್ಲಿ…?
ಅಲ್ಲೆಲ್ಲೋ ದೇವರು
ಮಲಗಿದ್ದಾನೆ
ನಿಮ್ಮ
ಮಂದಿರ ಮಸೀದಿ ಚರ್ಚುಗಳಲ್ಲಿ,
ಕೊರೊನಾ ಎಂಬ ವೈರಸ್ ಗೆ
ಹೆದರಿ
ಅವಿತು ಕೂತಿದ್ದಾನೆ
ಮಂದಿರಗಳ ಮೂಲೆಗಳಲ್ಲಿ
ಮಸೀದಿಗಳ ಪಡಸಾಲೆಗಳಲ್ಲಿ
ಚರ್ಚುಗಳ ಚಾವಣಿಗಳಲ್ಲಿ......
 
ನಿತ್ಯವೂ
ದೇವಾಲಯಗಳ ಮುಂದೆ
ಕ್ಯೂ ನಿಂತು ದರ್ಶನ
ಪಡೆದು ತೀರ್ಥ
ಕುಡಿಯುತ್ತಿದ್ದ ಜನ ಈಗ
ದಾವಾಖಾನೆಗಳ ಕದ ತಟ್ಟಿದ್ದಾರೆ,
ದೇವರೇ ಕಾಪಾಡು
ಎಂದವರೀಗ
ಆಕ್ಸಿಜನ್ನು, ಮಾಸ್ಕು,
ವೆಂಟಿಲೇಟರ್ ಗಳ ಮೊರೆ ಹೋಗಿದ್ದಾರೆ......
 
ದುಡ್ಡಿದ್ದವರು
ದೊಡ್ಡವರು
ಆಕಾಶದಲ್ಲಿ ಹಾರಾಡುವವರು ತಂದ
ಈ ವೈರಸ್ ಗೆ
ಬಡವರು ಬೆಲೆ ತೆರುತ್ತಿದ್ದಾರೆ,
ಮನೆ ಮಠ ಕಿಟಕಿ ಬಾಗಿಲು
ಬಾಲ್ಕನಿಗಳೇ ಇಲ್ಲದ
ಬಡವರು
ಬೀದಿಗಿಳಿದು
ಗಂಟೆ ಜಾಗಟೆ ತಾಟುಗಳ ಬಾರಿಸಿ
ಚಪ್ಪಾಳೆ ತಟ್ಟಿದ್ದಾರೆ......
 
ಮೊನ್ನೆ ಮೊನ್ನೆ
ಮೆರೆದವರು
ಥೂ ನೀಚ ಎಂದವರು
ಮಾನವೀಯತೆ
ಮರೆತವರಿಂದು ಹೆದರಿ
ಮನೆಯಲ್ಲೇ ಇದ್ದಾರೆ,
ಸ್ಟೆಥಸ್ಕೋಪ್ ಹಿಡಿದವರು
ಶುಶ್ರೂಷೆ ಮಾಡೋರು
ಕಸ ಬಳಿವ ಕಾರ್ಮಿಕರು
ಕಾನೂನು ಕಾಯ್ವವರು
ಜೀವವ ಲೆಕ್ಕಿಸದೇ
ಎದೆಗೊಟ್ಟು ನಿಂತಾರೆ......
 
ಭಾರತಕ್ಕೀ ಸೋಂಕು
ಹೊಸತೇನಲ್ಲ
ಸಾವಿರ ಸಾವಿರ
ವರ್ಷಗಳಿಂದಲೂ
ಆ ಬೀದಿ ಈ ಬೀದಿ
ಊರಗಸಿಯ ಮುಂಬದಿ
ಸುಳಿಯುತ್ತಲೇ ಇದೆ
ನಮ್ಮಲ್ಲೇ
ನಮ್ಮೊಳಗೇ
ಜಾತಿ, ಅತ್ಯಾಚಾರ,
ಭ್ರಷ್ಟಾಚಾರ, ಅಸ್ಪೃಶ್ಯತೆ,
ಅಸಮಾನತೆಯ ರೂಪದಲಿ
ಹೌದು
ಇದಕ್ಕೆಲ್ಲ ಮದ್ದೆಲ್ಲಿ.....?
 
✍ಮುತ್ತು.ಹೆಚ್.ಬಿ, ಶಿಕ್ಷಕರು.
2 comments
Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರ: ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯ

ಲಕ್ಷ್ಮೇಶ್ವರ: ಪಟ್ಟಣದ ಕರೇಗೋರಿ ಆಶ್ರಯ ಕಾಲೊನಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ…

ಕೊರೊನಾ: ಒಂದೇ ದಿನ 2,003 ಸಾವು, 10,974 ಹೊಸ ಪ್ರಕರಣ

ಕಳೆದ 24 ಗಂಟೆಗಳಲ್ಲಿ ಕೊರೊನಾ ರೋಗಕ್ಕೆ 2,003 ನಾಗರಿಕರು ಬಲಿಯಾಗಿದ್ದು, ಇದೇ ಅವಧಿಯಲ್ಲಿ ಹೊಸದಾಗಿ 10,974 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.

ಗದಗ ಜಿಲ್ಲೆಯಲ್ಲಿ ಸೋಂಕಿನ ಸರಣಿ ಸ್ಪೋಟ!: ಇಂದು 40 ಪಾಸಿಟಿವ್..!

ದಿನಕ್ಕೆ ಗದಗ ಜಿಲ್ಲೆಯಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ನಗರಕ್ಕೆ ಸೀಮಿತವಾಗಿದ್ದ ಸೋಂಕು ಗ್ರಾಮೀಣ ಭಾಗಕ್ಕೂ ವ್ಯಾಪಿಸಿದ್ದು ತೀವ್ರ ಆತಂಕ ಸೃಷ್ಟಿಸಿದೆ.

ಗದಗ ಜಿಲ್ಲೆಯಲ್ಲಿಂದು 05 ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 5 ಕೊರೊನಾ ಪಾಸಿಟಿವ್ ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 237…