ಕೊರೋನಾ ಕಾವ್ಯ ಸರಣಿಗೆ ಕವನ ಬರೆದವರು ಮುತ್ತು.ಹೆಚ್.ಬಿ(ಶಿಕ್ಷಕರು), ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಬಡತನದ ಬೇಗೆಯಲ್ಲಿ ಬೆಂದು ಬೆಳೆದ ಮುತ್ತು, ಭವಿಷ್ಯದ ಭರವಸೆಯ ಶಿಕ್ಷಕ ಮತ್ತು ಬರಹಗಾರ. ಅವರಲ್ಲಿನ ಜನಪರ ಮತ್ತು ಜೀವಪರ ಕಾಳಜಿಯೇ ಈ ಕಾವ್ಯದಲ್ಲಿ ಅಕ್ಷರ ರೂಪದಲ್ಲಿ ಹೊರಹೊಮ್ಮಿದೆ. ಸದಾ ಸಾಮಾಜಿಕ ಕಾಳಜಿ, ಕ್ರೀಯಾಶೀಲತೆ ಇವರ ಗುಣ ಸ್ವಭಾವ. ಮುತ್ತು ಅವರ ಸಾಧನೆಯ ಹಾದಿ ಸುಗಮವಾಗಲಿ. ಜೊತೆಗೆ ಸಮಾಜಕ್ಕೆ ಅವರಿಂದ ಹೆಚ್ಚಿನ ಸೇವೆ ಸಿಗಲಿ ಎಂದು ಹಾರೈಸೋಣ.

ಇದಕ್ಕೆ ಮದ್ದೆಲ್ಲಿ…?
ಅಲ್ಲೆಲ್ಲೋ ದೇವರು
ಮಲಗಿದ್ದಾನೆ
ನಿಮ್ಮ
ಮಂದಿರ ಮಸೀದಿ ಚರ್ಚುಗಳಲ್ಲಿ,
ಕೊರೊನಾ ಎಂಬ ವೈರಸ್ ಗೆ
ಹೆದರಿ
ಅವಿತು ಕೂತಿದ್ದಾನೆ
ಮಂದಿರಗಳ ಮೂಲೆಗಳಲ್ಲಿ
ಮಸೀದಿಗಳ ಪಡಸಾಲೆಗಳಲ್ಲಿ
ಚರ್ಚುಗಳ ಚಾವಣಿಗಳಲ್ಲಿ......
 
ನಿತ್ಯವೂ
ದೇವಾಲಯಗಳ ಮುಂದೆ
ಕ್ಯೂ ನಿಂತು ದರ್ಶನ
ಪಡೆದು ತೀರ್ಥ
ಕುಡಿಯುತ್ತಿದ್ದ ಜನ ಈಗ
ದಾವಾಖಾನೆಗಳ ಕದ ತಟ್ಟಿದ್ದಾರೆ,
ದೇವರೇ ಕಾಪಾಡು
ಎಂದವರೀಗ
ಆಕ್ಸಿಜನ್ನು, ಮಾಸ್ಕು,
ವೆಂಟಿಲೇಟರ್ ಗಳ ಮೊರೆ ಹೋಗಿದ್ದಾರೆ......
 
ದುಡ್ಡಿದ್ದವರು
ದೊಡ್ಡವರು
ಆಕಾಶದಲ್ಲಿ ಹಾರಾಡುವವರು ತಂದ
ಈ ವೈರಸ್ ಗೆ
ಬಡವರು ಬೆಲೆ ತೆರುತ್ತಿದ್ದಾರೆ,
ಮನೆ ಮಠ ಕಿಟಕಿ ಬಾಗಿಲು
ಬಾಲ್ಕನಿಗಳೇ ಇಲ್ಲದ
ಬಡವರು
ಬೀದಿಗಿಳಿದು
ಗಂಟೆ ಜಾಗಟೆ ತಾಟುಗಳ ಬಾರಿಸಿ
ಚಪ್ಪಾಳೆ ತಟ್ಟಿದ್ದಾರೆ......
 
ಮೊನ್ನೆ ಮೊನ್ನೆ
ಮೆರೆದವರು
ಥೂ ನೀಚ ಎಂದವರು
ಮಾನವೀಯತೆ
ಮರೆತವರಿಂದು ಹೆದರಿ
ಮನೆಯಲ್ಲೇ ಇದ್ದಾರೆ,
ಸ್ಟೆಥಸ್ಕೋಪ್ ಹಿಡಿದವರು
ಶುಶ್ರೂಷೆ ಮಾಡೋರು
ಕಸ ಬಳಿವ ಕಾರ್ಮಿಕರು
ಕಾನೂನು ಕಾಯ್ವವರು
ಜೀವವ ಲೆಕ್ಕಿಸದೇ
ಎದೆಗೊಟ್ಟು ನಿಂತಾರೆ......
 
ಭಾರತಕ್ಕೀ ಸೋಂಕು
ಹೊಸತೇನಲ್ಲ
ಸಾವಿರ ಸಾವಿರ
ವರ್ಷಗಳಿಂದಲೂ
ಆ ಬೀದಿ ಈ ಬೀದಿ
ಊರಗಸಿಯ ಮುಂಬದಿ
ಸುಳಿಯುತ್ತಲೇ ಇದೆ
ನಮ್ಮಲ್ಲೇ
ನಮ್ಮೊಳಗೇ
ಜಾತಿ, ಅತ್ಯಾಚಾರ,
ಭ್ರಷ್ಟಾಚಾರ, ಅಸ್ಪೃಶ್ಯತೆ,
ಅಸಮಾನತೆಯ ರೂಪದಲಿ
ಹೌದು
ಇದಕ್ಕೆಲ್ಲ ಮದ್ದೆಲ್ಲಿ.....?
 
✍ಮುತ್ತು.ಹೆಚ್.ಬಿ, ಶಿಕ್ಷಕರು.
2 comments
Leave a Reply

Your email address will not be published. Required fields are marked *

You May Also Like

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಬೆಳಗಾವಿ : ರಾಯಬಾಗ ರೈಲ್ವೆ ನಿಲ್ದಾಣದ ಬಳಿ ಒಂದೇ ಕುಟುಂಬದ ನಾಲ್ವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

“ತಿಳಿಗೊಳ”ಅಭಿನಂದನ ಗ್ರಂಥದ ಲೋಕಾರ್ಪಣೆ ಹಾಗೂ ಗುರುವಂದನ ಕಾರ್ಯಕ್ರಮ”

ಉತ್ತರಪ್ರಭ ರಾಯಬಾಗ: ತಾಲ್ಲೂಕಿನ ಹಾರೂಗೇರಿಯ ಬಿ.ಆರ್. ದರೂರ ಪ್ರಥಮದರ್ಜೆ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರು, ಕನ್ನಡ ಪ್ರಾಧ್ಯಾಪಕರು,…

ಕೊರೋನಾ ಕಾವ್ಯ-4

ಇವತ್ತಿನ ಕೊರೋನಾ ಕಾವ್ಯ ಸರಿಣಿಗೆ ಕವನ ಕಳುಹಿಸಿದವರು ಮಂಗಳಗೌರಿ ಹಿರೇಮಠ, ಮಂಗಳಗೌರಿ ಹಿರೇಮಠ ಇವರು ಗದಗನ ಬಸವೇಶ್ವರ ನಗರದವರು, ಸಾಹಿತ್ತಿಕವಾಗಿ ಅಭಿರುಚಿ ಉಳ್ಳ ಮಂಗಳಗೌರಿ ಅವರು ಸಾಕಷ್ಟು ಕವತೆಗಳನ್ನು ರಚಿಸಿದ್ದಾರೆ. ಊಹಿಸದೇ ಬಂದ ಘಳಿಗೆಯನ್ನು ಕೊರೋನಾದ ಈ ಸಂಕಷ್ಟ ಕಾಲದಲ್ಲಿ ಹದವಾಗಿ ಕಟ್ಟಿಕೊಟ್ಟಿದ್ದಾರೆ.

ಶಾಸಕ ಎಚ್.ಕೆ.ಪಾಟೀಲ್ ಅವರಿಗೆ ಕೊರೊನಾ ಪಾಸಿಟಿವ್!

ಕಾಂಗ್ರೆಸ್ ಮುಖಂಡ, ಶಾಸಕ ಎಚ್.ಕೆ.ಪಾಟೀಲ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. ನನಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಲಕ್ಷಣ ರಹಿತ ಸೋಂಕಾಗಿದ್ದು, ಇದರಿಂದ ನಾನು ಹೋಂ ಕ್ವಾರಂಟೈನ್ ಆಗಿದ್ದೇನೆ. ನಾನೀಗ ಆರೋಗ್ಯವಾಗಿದ್ದೇನೆ. 10 ದಿನಗಳ ಕಾಲ ಕ್ವಾರೈಂಟೈನ್ ನಲ್ಲಿರಲಿದ್ದೇನೆ. ನನ್ನ ಪ್ರಾಥಮಿಕ ಸಂಪರ್ಕದಲ್ಲಿರುವವರು ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಪರೀಕ್ಷೆಗೊಳಗಾಗಲು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.