ಹಾವೇರಿ: ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ..? ಇಂಥದ್ದೊಂದು ಪ್ರಶ್ನೆ ಹಾವೇರಿ ಜಿಲ್ಲೆಯಲ್ಲಿ ಉದ್ಭವವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸಿಪಿಐ ಒಬ್ಬರು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ವಿರೋಧಕ್ಕೆ ಕಾರಣವಾಗಿದೆ.

ಲಾಕ್ ಡೌನ್ ನಿಯಮ ಪಾಲಿಸದಿದ್ದರೆ ಬಿಸಿ, ಬಿಸಿ ಕಜ್ಜಾಯ ನೀಡಿ ಜನರಿಗೆ ಬುದ್ದಿ ಹೇಳಿದ ಪೊಲೀಸ್ ಅಧಿಕಾರಿಯೇ ಈಗ ಲಾಕ್ ಡೌನ್ ನಿಯಮ ಪಾಲಿಸದಿದ್ದರೇ ಹೇಗೆ? ಎನ್ನುವ ಪ್ರಶ್ನೆ ಹಾವೇರಿ ಜಿಲ್ಲೆಯಾದ್ಯಂತ ಚರ್ಚೆಯಾಗುತ್ತಿದೆ.

ಲಾಕ್ ಡೌನ್ ಸಮಯದಲ್ಲೂ ಬರ್ತಡೇ ಆಚರಿಸಿಕೊಂಡ ಸಿಪಿಐ ಸುರೇಶ್ ಸಗರಿ

ಹಾವೇರಿ ಜಿಲ್ಲೆ ರಾಣೆಬೆನ್ನೂರು ಗ್ರಾಮೀಣ ಸಿಪಿಐ ಸುರೇಶ್ ಸಗರಿ ಲಾಕ್ ಡೌನ್ ಮದ್ಯದಲ್ಲೂ ಜನರ ಗುಂಪಿನ ಮದ್ಯೆ ನಿಂತು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಮೂಲಕ ಕಾನೂನು ಪಾಲಿಸಬೇಕಾದ ಪೊಲೀಸ್ ಅಧಿಕಾರಿಯೇ ನಿಯಮ ಉಲ್ಲಂಘಿಸಿದಂತಾಗಿದೆ. ರಾಣೆಬೆನ್ನೂರು ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಿಪಿಐ ಸುರೇಶ, ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡದೆ ಇರುವುದು ಕೂಡ ವಿಪರ್ಯಾಸ.

ಪೂರ್ವ ವಲಯ ಐಜಿಪಿಗೆ ಗ್ರಾಮಸ್ಥರು ನೀಡಿದ ದೂರು

ಇನ್ನು ಸಿಪಿಐ ಸುರೇಶ್ ಅವರ ಈ ಹುಟ್ಟು ಹಬ್ಬದಲ್ಲಿ ರೌಡಿ ಶೀಟರ್ ಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರೊಂದಿಗೆ ಅಕ್ರಮ ಚಟುವಟಿಕೆಗಳಲ್ಲಿ ಸಿಪಿಐ ಸುರೇಶ್ ಕೂಡ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ಗ್ರಾಮಸ್ಥರು ಪೂರ್ವ ವಲಯ ಐಜಿಪಿಗೆ ದೂರು ನೀಡಿ ಲಾಕ್ ಡೌನ್ ನಿಯಮ ಉಲ್ಲಘಿಸಿರುವ ಕುರಿತು ಸಿಪಿಐ  ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಜನರಿಗೆ ಆತಂಕ: ಮುಂಡರಗಿಗೆ ಕೊರೊನಾ ಕಾಟ..!

ಮುಂಡರಗಿ: ಈಗಾಗಾಗಲೇ ಕೆಲದಿನಗಳಿಂದ ಕೊರೊನಾ ಕಾಟ ಹೆಚ್ಚಾಗಿದ್ದರಿಂದ ಗದಗ ಜಿಲ್ಲೆಯ ಮುಂಡರಗಿ ಜನರಿಗೆ ಆತಂಕ ಹೆಚ್ಚಾಗುತ್ತಲೇ…

ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ನಿಯಮಕ್ಕೆ ಆಕ್ಷೇಪಣೆ

ಶಿಕ್ಷಕರ ವರ್ಗಾವಣಾ ಕಾಯ್ದೆಯನ್ನು ಸಂಪೂರ್ಣ ಶಿಕ್ಷಕ ಸ್ನೇಹಿ ವರ್ಗಾವಣಾ ಕಾಯ್ದೆಯಾಗಿ ರೂಪಗೊಳ್ಳಬೇಕಾದರೆ ಕೆಲವು ಅಂಶಗಳನ್ನು ಅಳವಡಿಸಿಕೊಂಡು ಅಂತಿಮ ನಿಯಮಗಳನ್ನು ಹಾಗೂ ಮಾರ್ಗಸೂಚಿಗಳನ್ನು ಪ್ರಕಟಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈ ಕುರಿತು ಇಂದು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಗೋವಾದಿಂದ ಬಂದ ಕೂಲಿ ಕಾರ್ಮಿಕ: ಕೊರೊನಾ ಸೋಂಕಿನಿಂದ ಸಾವು!

ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದೆ. ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಹಾನಾಪೂರ ಎಲ್.ಟಿ ತಾಂಡಾ ಗ್ರಾಮದ…