ಉತ್ತರಪ್ರಭ
ಗದಗ:
ಗದಗದಿಂದ ಮುಂಡರಗಿ ಹೋಗುವ ಮಾರ್ಗ ಮಧ್ಯೆ ಬರುವ ಪಾಪನಾಶಿ ಗ್ರಾಮದ ಹತ್ತಿರವಿರುವ ಅನಧಿಕೃತ ಟೊಲ್ ತೇರವುಗೋಳಿಸಬೇಕೆಂದು ಸಾರ್ವಜನಿಕರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಸುಮಾರು ನಾಲ್ಕನೇಯ ದಿನಕ್ಕೆ ಕಾಲಿಟ್ಟಿದೆ. ಧರಣಿ ನಡೆಯುತ್ತಿರುವುದರಿಂದ ಟೋಲ್ ಅಧಿಕಾರಿಗಳು ಯಾವೊಂದು ವಾಹನಗಳಿಂದ ಟೋಲನ್ನು ವಸೂಲಿ ಮಾಡುತ್ತಿರುವುದಿಲ್ಲಾ.

ಕೆಆರ್‌ಡಿಸಿಎಲ್ ಅಧಿಕಾರಿಗಳಿಗೆ ರೂಮ್‌ನಲ್ಲಿ ಕೂಡಿ ಹಾಕಿ ಸಾರ್ವಜನಿಕರಿಂದ ಧರಣಿ


ಸುಮಾರು ವರ್ಷಗಳಿಂದ ಸಾರ್ವಜನಿಕರಿಂದ ಅನಧಿಕೃತ ಟೋಲ್‌ನ್ನು ಕಟ್ಟಿ, ವಸೂಲಿ ಮಾಡುತ್ತಾ ಬಂದಿದ್ದು. ಆದರೆ ಯಾವೋಬ್ಬ ಟೋಲ್ ಅಧಿಕಾರಿಗಳು ಇನ್ನೂವರೆಗೂ ಟೋಲ್ ಸಂಬoಧಿಸಿದ ದಾಖಲೆಗಳನ್ನು ತೋರಿಸಿಲ್ಲ, ಹಾಗಾಗಿ ಸಾರ್ವಜನಿಕರು ಟೋಲ್‌ನಿಂದ ಬೆಸತ್ತು ಅಹೋ ರಾತ್ರಿ ಧರಣಿಯನ್ನು ಮಾಡುತ್ತಿದ್ದಾರೆ. 4ನೇ ದಿನದ ಅಹೋರಾತ್ರಿ ಧರಣಿಯ ಒತ್ತಡಕ್ಕೆ ಮಣಿದ ಕೆಆರ್‌ಡಿಸಿಎಲ್ ಅಧಿಕಾರಿಗಳು ಧರಣಿ ಸ್ಥಳಕ್ಕೆ ಆಗಮಿಸಿದಾಗ ರೊಚ್ಚಿಗೆದ್ದ ಸಾರ್ವಜನಿಕರು ಅಧಿಕಾರಿಗಳನ್ನು ರೂಮ್‌ನೋಳಗೆ ಕೂಡಿ ಹಾಕಿ ಧರಣಿ ಮುಂದುವರಿಸಿದರು.
ಧರಣಿ ನಿರತರಿಗೆ ಅಧಿಕಾರಿಗಳು ಸಮಾಜಾಯಿಷಿ ನೀಡಲು ಮುಂದಾದಾಗ ಸಾರ್ವಜನಿಕರು ಅಧಿಕಾರಿಗಳಿಗೆ ನಾಲ್ಕು ದಿನzದಿಂದ ಧರಣಿ ಮಾಡುತ್ತಿದ್ದು, ಯಾವೋಬ್ಬ ಅಧಿಕಾರಿಗಳು ಬರದೆ ಇರುವುದು ಅಧಿಕಾರಿಗಳ ಬೇಜಬ್ದಾರಿ ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಂಡ ಪ್ರಸಂಗವು ನಡೆಯಿತು.
ಈ ಸಂದರ್ಭದಲ್ಲಿ ಲಾರಿ ಮಾಲಿಕರ ಸಂಘದ ಸದಸ್ಯರು, ಜಯಕರ್ನಾಟಕ ಸಂಘಟನೆಯ ಸದಸ್ಯರು, ಕೆ ಆರ್ ಎಸ್ ಪಕ್ಷದ ಪದಾಧಿಕಾರಿಗಳು ಮತ್ತು ಸಾರ್ವಜನಿಕರಿದ್ದರು.

Leave a Reply

Your email address will not be published. Required fields are marked *

You May Also Like

ಮೋದಿ ಸರ್ಕಾರ ಜನರಿಗೆ ಬೆಲೆ ಏರಿಕೆ ಬರೆ ನೀಡುತ್ತಿದೆ: ತಾಹೀರ್ ಹುಸೇನ್

ಕೇಂದ್ರ ಸರ್ಕಾರ ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದ್ದನ್ನು ತೀರ್ವವಾಗಿ ಖಂಡಿಸುತ್ತದೆ ಎಂದು ವೆಲ್ವೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಹೇಳಿದರು.

5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ

ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು, 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ. ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹೊನ್ನಪ್ಪ ವಡ್ಡರ ಹೇಳಿದರು.

ಪ್ರತಿ ಗ್ರಾಮಕ್ಕೂ ಜಲಜೀವನ್ ಮಿಷನ್ ಉಪಯುಕ್ತ: ಶಾಸಕ ರಾಮಣ್ಣ

ಲಕ್ಷ್ಮೇಶ್ವರ: ತಾಲೂಕಿನ ಉಂಡೇನಹಳ್ಳಿ ಒಡೆಯರ ಮಲ್ಲಾಪೂರ ಗ್ರಾಮಗಳಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಶಾಸಕ ರಾಮಣ್ಣ ಲಮಾಣಿ ಭೂಮಿ ಪೂಜೆ ನೆರವೇರಿಸಿದರು.

ಗದಗ ಜಿಲ್ಲಾಡಳಿತಕ್ಕೆ 40 ಲಕ್ಷ ವೈದ್ಯಕೀಯ ಸಾಮಾಗ್ರಿ ನೆರವು ನೀಡಿದ ಐಪಿಎಸ್ ಅಧಿಕಾರಿ ಸಜ್ಜನ್.

ಗದಗ: ಮೂಲತಃ ಗದಗ ಜಿಲ್ಲೆಯವರಾದ ತೆಲಂಗಾಣ ರಾಜ್ಯದ ಸೈಬರ್ ಪೋಲಿಸ್ ಆಯುಕ್ತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ಅವರು ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯವಾಗಿರುವ ಅಂದಾಜು 40 ಲಕ್ಷ ಮೌಲ್ಯದ ವೈಧ್ಯಕೀಯ ಔಷಧಿ ಸಾಮಾಗ್ರಿಗಳನ್ನು ಗದಗ ಜಿಲ್ಲಾಡಳಿತಕ್ಕೆ ಕಳುಹಿಸುವ ಮೂಲಕ ನೆರವು ನೀಡಿದ್ದಾರೆ.