ನಿಡಗುಂದಿ: ಪಟ್ಟಣದ ಹೊರವಲಯದ ಕಮದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಯಿಪಲ್ಯೆ ಹಾಗೂ ಧಾನ್ಯಗಳಲ್ಲಿ ಪೋಷಣೆಯ ಜಾಗೃತಿ ಮೂಡಿಸುವ ಕಲಾಕೃತಿಗಳ ಪ್ರದರ್ಶನ ಶುಕ್ರವಾರ ಜರುಗಿತು.
ಪೋಷಣಾ ಅಭಿಯಾನ ಜಾಗೃತಿ ಅಂಗವಾಗಿ ವಿದ್ಯಾರ್ಥಿಗಳ ಪಾಲಕರಿಗೆ. ಗ್ರಾಮಸ್ಥರಿಗೆ ಪೋಷಣೆಗಳ ಮಹತ್ವ ಸಾರುವ ಹಾಗೂ ಸುಲಭವಾಗಿ ಯಾವ ಆಹಾರದಲ್ಲಿ ಯಾವ ಜೀವಸತ್ವ, ಅದರಿಂದಾಗುವ ಪ್ರಯೋಜನವನ್ನು ವಿವರಿಸುವ ಉದ್ದೇಶದಿಂದ ವಿಜ್ಞಾನ ಶಿಕ್ಷಕ ಮುರಗೇಂದ್ರ ಯಳಮೇಲಿ ಮಾರ್ಗದರ್ಶನದಲ್ಲಿ ವಿವಿಧ ವಿದ್ಯಾರ್ಥಿಗಳು ರಚಿಸಿ ಇಡೀ ದಿನ ಪ್ರದರ್ಶಿದರು.


ಗ್ರಾಮದ ಜನರು ಬಂದು ತರಕಾರಿಗಳಲ್ಲಿ ಅರಳಿದ ವಿವಿಧ ರಚನೆಗಳನ್ನು ವೀಕ್ಷಿಸುವುದರ ಜತೆ ಪೋಷಣೆಯ ಮಹತ್ವವನ್ನು ತಿಳಿದರು.


ಎಲ್ಲಾ ರೀತಿಯ ತರಕಾರಿ, ಸಿರಿಧಾನ್ಯಗಳು, ನಟ್ಸ್, ಗೋಡಂಬಿ, ಒಣದ್ರಾಕ್ಷಿ, ಹಣ್ಣುಗಳು, ಹಾಲು, ಮೊಸರು, ತುಪ್ಪ, ಬೆಣ್ಣೆ, ವಿವಿಧ ರೀತಿಯ ಪುಷ್ಪಗಳು ಸೇರಿ ನಾನಾ ಸಾಮಗ್ರಿಗಳನ್ನು ಬಳಸಿ ಪೋಷಣಾ ಕಲಾಕೃತಿಗಳನ್ನು ಮಾಡಲಾಗಿತ್ತು.
ಮಣಗೂರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಆರ್.ಜಿ. ಬುಲಾತಿ ಮಾತನಾಡಿ, ಹಳ್ಳಿಗಳಲ್ಲಿ ಕಾಯಿಪಲ್ಯೆಗಳ ಬಳಕೆ ಕಡಿಮೆ, ಕಾಳು ಕಡಿಗಳ ಬಳಕೆ ಹೆಚ್ಚು, ಹೀಗಾಗಿ ವಾರದ ಸಂತೆಯನ್ನು ಹಳ್ಳಿಗಳಲ್ಲಿ ಏರ್ಪಡಿಸುವುದರಿಂದ ಕಾಯಿಪಲ್ಯೆಗಳ ಲಭ್ಯತೆ ಹೆಚ್ಚಾಗುತ್ತದೆ ಎಂದರು.


ಮುಖ್ಯ ಶಿಕ್ಷಕ ಬಿ.ಬಿ. ಉಣ್ಣಿಭಾವಿ, ಸಿಆರ್ ಪಿ ಭಾಷಾಸಾಬ್ ಮನಗೂಳಿ, ಆರ್.ಜಿ. ಬುಲಾತಿ, ಎಂ.ಎಸ್. ಯಳಮೇಲಿ, ಬಿ.ಆರ್. ಪಾಟೀಲ, ಡಿ.ಕೆ. ಪಾಟೀಲ, ಅಕ್ಕಮಹಾದೇವಿ ಪಟ್ಟಣಶೆಟ್ಟಿ, ಸುನಂದಾ ಬಡಿಗೇರ, ಎಲ್.ಪಿ. ಬಿದ್ನಾಳ, ಭುವನೇಶ್ವರಿ ಮಠ ಇದ್ದರು.
ವಿವಿಧ ಜೀವಸತ್ವಗಳು ಹಾಗೂ ಸ್ವಚ್ಛತೆಯ ಮಹತ್ವ ಸಾರುವ ಐದು ಕಿರು ನಾಟಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಸಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *

You May Also Like

ಮೋದಿ ಸರ್ಕಾರಕ್ಕೆ ಒಂದು ವರ್ಷ: ದೇಶವಾಸಿಗಳಿಗೆ ಪ್ರಧಾನಿ ಪತ್ರ

ಕೇಂದ್ರದ ನರೇಂದ್ರ ಮೋದಿ ನರೆತೃತ್ವದ ಸರ್ಕಾರ ಒಂದು ವರ್ಷ ಅವಧಿ ಪೂರ್ಣಗೊಳಿಸಿದೆ. ಈ ಹಿನ್ನೆಲೆ ಪ್ರಧಾನಿ…

ಜಾನಪದ ಸಾಹಿತ್ಯ ವಿಶ್ವದಲ್ಲೇ ಶ್ರೇಷ್ಠ ಸಾಹಿತ್ಯ -ಡಾ.ಎಸ್ ಬಾಲಾಜಿ

ಗದಗ: ವಿಶ್ವವಿದ್ಯಾಲಯಗಳು ಜಾನಪದಕ್ಕೆ ಸಂಬಂಧಿಸಿದ ಕ್ಷೇತ್ರಕಾರ್ಯ ಹಾಗೂ ದಾಖಲೀಕರಣದ ಕಾರ್ಯಗಳನ್ನು ನಿಲ್ಲಿಸಿರುವುದು ವಿಷಾದನೀಯ ಎಂದು ರಾಜ್ಯಾಧ್ಯಕ್ಷ…

ನಿಡಗುಂದಿ: 23 ರಂದು ಉಚಿತ ಆರೋಗ್ಯ, ರಕ್ತದಾನ ಶಿಬಿರ

ನಿಡಗುಂದಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಹಾಗೂ…

ಚಿತ್ರಕಲಾ ಶಿಕ್ಷಕರ ಕಾಯಾ೯ಗಾರ ಉದ್ಘಾಟನೆ

ಬೋಧನಾ ಸಾಮಥ್ರ್ಯ ಹೆಚ್ಚಳಕ್ಕೆ ಕಾಯಾ೯ಗಾರ ಸಹಕಾರಿ: ಮಂಜುನಾಥ್ ಮಾನೆ ಉತ್ತರಪ್ರಭವಿಜಯಪುರ: ಶಿಕ್ಷಕ ವೃತ್ತಿಯ ಬೋಧನಾ ಸಾಮಥ್ರ್ಯ…