ನಿಡಗುಂದಿ: ಪಟ್ಟಣದ ಹೊರವಲಯದ ಕಮದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಯಿಪಲ್ಯೆ ಹಾಗೂ ಧಾನ್ಯಗಳಲ್ಲಿ ಪೋಷಣೆಯ ಜಾಗೃತಿ ಮೂಡಿಸುವ ಕಲಾಕೃತಿಗಳ ಪ್ರದರ್ಶನ ಶುಕ್ರವಾರ ಜರುಗಿತು.
ಪೋಷಣಾ ಅಭಿಯಾನ ಜಾಗೃತಿ ಅಂಗವಾಗಿ ವಿದ್ಯಾರ್ಥಿಗಳ ಪಾಲಕರಿಗೆ. ಗ್ರಾಮಸ್ಥರಿಗೆ ಪೋಷಣೆಗಳ ಮಹತ್ವ ಸಾರುವ ಹಾಗೂ ಸುಲಭವಾಗಿ ಯಾವ ಆಹಾರದಲ್ಲಿ ಯಾವ ಜೀವಸತ್ವ, ಅದರಿಂದಾಗುವ ಪ್ರಯೋಜನವನ್ನು ವಿವರಿಸುವ ಉದ್ದೇಶದಿಂದ ವಿಜ್ಞಾನ ಶಿಕ್ಷಕ ಮುರಗೇಂದ್ರ ಯಳಮೇಲಿ ಮಾರ್ಗದರ್ಶನದಲ್ಲಿ ವಿವಿಧ ವಿದ್ಯಾರ್ಥಿಗಳು ರಚಿಸಿ ಇಡೀ ದಿನ ಪ್ರದರ್ಶಿದರು.


ಗ್ರಾಮದ ಜನರು ಬಂದು ತರಕಾರಿಗಳಲ್ಲಿ ಅರಳಿದ ವಿವಿಧ ರಚನೆಗಳನ್ನು ವೀಕ್ಷಿಸುವುದರ ಜತೆ ಪೋಷಣೆಯ ಮಹತ್ವವನ್ನು ತಿಳಿದರು.


ಎಲ್ಲಾ ರೀತಿಯ ತರಕಾರಿ, ಸಿರಿಧಾನ್ಯಗಳು, ನಟ್ಸ್, ಗೋಡಂಬಿ, ಒಣದ್ರಾಕ್ಷಿ, ಹಣ್ಣುಗಳು, ಹಾಲು, ಮೊಸರು, ತುಪ್ಪ, ಬೆಣ್ಣೆ, ವಿವಿಧ ರೀತಿಯ ಪುಷ್ಪಗಳು ಸೇರಿ ನಾನಾ ಸಾಮಗ್ರಿಗಳನ್ನು ಬಳಸಿ ಪೋಷಣಾ ಕಲಾಕೃತಿಗಳನ್ನು ಮಾಡಲಾಗಿತ್ತು.
ಮಣಗೂರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಆರ್.ಜಿ. ಬುಲಾತಿ ಮಾತನಾಡಿ, ಹಳ್ಳಿಗಳಲ್ಲಿ ಕಾಯಿಪಲ್ಯೆಗಳ ಬಳಕೆ ಕಡಿಮೆ, ಕಾಳು ಕಡಿಗಳ ಬಳಕೆ ಹೆಚ್ಚು, ಹೀಗಾಗಿ ವಾರದ ಸಂತೆಯನ್ನು ಹಳ್ಳಿಗಳಲ್ಲಿ ಏರ್ಪಡಿಸುವುದರಿಂದ ಕಾಯಿಪಲ್ಯೆಗಳ ಲಭ್ಯತೆ ಹೆಚ್ಚಾಗುತ್ತದೆ ಎಂದರು.


ಮುಖ್ಯ ಶಿಕ್ಷಕ ಬಿ.ಬಿ. ಉಣ್ಣಿಭಾವಿ, ಸಿಆರ್ ಪಿ ಭಾಷಾಸಾಬ್ ಮನಗೂಳಿ, ಆರ್.ಜಿ. ಬುಲಾತಿ, ಎಂ.ಎಸ್. ಯಳಮೇಲಿ, ಬಿ.ಆರ್. ಪಾಟೀಲ, ಡಿ.ಕೆ. ಪಾಟೀಲ, ಅಕ್ಕಮಹಾದೇವಿ ಪಟ್ಟಣಶೆಟ್ಟಿ, ಸುನಂದಾ ಬಡಿಗೇರ, ಎಲ್.ಪಿ. ಬಿದ್ನಾಳ, ಭುವನೇಶ್ವರಿ ಮಠ ಇದ್ದರು.
ವಿವಿಧ ಜೀವಸತ್ವಗಳು ಹಾಗೂ ಸ್ವಚ್ಛತೆಯ ಮಹತ್ವ ಸಾರುವ ಐದು ಕಿರು ನಾಟಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಸಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *

You May Also Like

ಅಮ್ಮನ ಮೃತದೇಹದ ಎದುರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪುತ್ರ

ತೆಲಂಗಾಣ: ವಿಧಿ ಎಂಥ ಕ್ರೂರಿ ಅಲ್ಲವೇ..? ಯಾರ ಬಾಳಲ್ಲಿ ಹೇಗೆಲ್ಲಾ ಆಟ ಆಡುತ್ತೋ ಗೊತ್ತೇ ಆಗುವುದಿಲ್ಲ. ಅದರಲ್ಲೂ ಕೊರೊನಾದ ಈ ದಿನಗಳಲ್ಲಿ ಇಂದು ಮಾತಾಡಿದವರು ನಾಳೆ ಇಲ್ಲವಾಗುತ್ತಿದ್ದಾರೆ. ಈಗ ಮಾತಾಡಿದವರು ಆ ಕ್ಷಣಕ್ಕೆ ಇಲ್ಲವಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯುವಕನೋರ್ವ ತಾಯಿಯ ಮೃತದೇಹದ ದುರಿಗೆ ದಾಂಪತ್ಯಕ್ಕೆ ಕಾಲಿಟ್ಟು ಸಪ್ತಪದಿ ತುಳಿದ ಘಟನೆ ನಡೆದಿದೆ. ಈ ಮನಕಲಕುವ ಘಟನೆ ಕಂಡ ಗ್ರಾಮಸ್ಥರು ದೂರದಿಂದಲೇ ಕಣ್ಣೀರಿಟ್ಟಿದ್ದಾರೆ.

ಕೊರೋನಾ ಸೋಂಕಿತ ಮಹಿಳೆ ಸಾವು

ಕೊರೋನಾ ಸೋಂಕಿತ ಮಹಿಳೆ ಸಾವುವಿಜಯಪುರ : ಕೊರೊನಾ ಪೀಡಿತ ಮಹಿಳೆ ಸಾವನ್ನಪ್ಪಿದ ಘಟನೆ ಇಜಯಪುರ ಜಿಲ್ಲೆಯಲ್ಲಿ…

ಹಳಕಟ್ಟಿ ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ ಸಡಗರ

ಸೋಲು-ಗೆಲುವು ಸಮನಾಗಿ ಸ್ವೀಕರಿಸಿ: ಜಿ.ಎಂ.ಕೋಟ್ಯಾಳ ಉತ್ತರಪ್ರಭಆಲಮಟ್ಟಿ : ಚುನಾವಣೆ ಎಂದ ಮೇಲೆ ಸೋಲು,ಗೆಲುವು ಇದಿದ್ದೆ. ಸೋತವರು…

17 ರಂದು ಎಂ.ಎಚ್.ಎಂ.ಪ್ರಾಥಮಿಕ ಶಾಲೆಯ 19ನೇ ವಾಷಿ೯ಕ ಸ್ನೇಹ ಸಮ್ಮೇಳನ

ಉತ್ತರಪ್ರಭ ಆಲಮಟ್ಟಿ: ಇಲ್ಲಿನ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಮಂಜಪ್ಪ ಹಡೇ೯ಕರ ಸ್ಮಾರಕ ಹಿರಿಯ…