ನಿಡಗುಂದಿ: ಪಟ್ಟಣದ ಹೊರವಲಯದ ಕಮದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಯಿಪಲ್ಯೆ ಹಾಗೂ ಧಾನ್ಯಗಳಲ್ಲಿ ಪೋಷಣೆಯ ಜಾಗೃತಿ ಮೂಡಿಸುವ ಕಲಾಕೃತಿಗಳ ಪ್ರದರ್ಶನ ಶುಕ್ರವಾರ ಜರುಗಿತು.
ಪೋಷಣಾ ಅಭಿಯಾನ ಜಾಗೃತಿ ಅಂಗವಾಗಿ ವಿದ್ಯಾರ್ಥಿಗಳ ಪಾಲಕರಿಗೆ. ಗ್ರಾಮಸ್ಥರಿಗೆ ಪೋಷಣೆಗಳ ಮಹತ್ವ ಸಾರುವ ಹಾಗೂ ಸುಲಭವಾಗಿ ಯಾವ ಆಹಾರದಲ್ಲಿ ಯಾವ ಜೀವಸತ್ವ, ಅದರಿಂದಾಗುವ ಪ್ರಯೋಜನವನ್ನು ವಿವರಿಸುವ ಉದ್ದೇಶದಿಂದ ವಿಜ್ಞಾನ ಶಿಕ್ಷಕ ಮುರಗೇಂದ್ರ ಯಳಮೇಲಿ ಮಾರ್ಗದರ್ಶನದಲ್ಲಿ ವಿವಿಧ ವಿದ್ಯಾರ್ಥಿಗಳು ರಚಿಸಿ ಇಡೀ ದಿನ ಪ್ರದರ್ಶಿದರು.


ಗ್ರಾಮದ ಜನರು ಬಂದು ತರಕಾರಿಗಳಲ್ಲಿ ಅರಳಿದ ವಿವಿಧ ರಚನೆಗಳನ್ನು ವೀಕ್ಷಿಸುವುದರ ಜತೆ ಪೋಷಣೆಯ ಮಹತ್ವವನ್ನು ತಿಳಿದರು.


ಎಲ್ಲಾ ರೀತಿಯ ತರಕಾರಿ, ಸಿರಿಧಾನ್ಯಗಳು, ನಟ್ಸ್, ಗೋಡಂಬಿ, ಒಣದ್ರಾಕ್ಷಿ, ಹಣ್ಣುಗಳು, ಹಾಲು, ಮೊಸರು, ತುಪ್ಪ, ಬೆಣ್ಣೆ, ವಿವಿಧ ರೀತಿಯ ಪುಷ್ಪಗಳು ಸೇರಿ ನಾನಾ ಸಾಮಗ್ರಿಗಳನ್ನು ಬಳಸಿ ಪೋಷಣಾ ಕಲಾಕೃತಿಗಳನ್ನು ಮಾಡಲಾಗಿತ್ತು.
ಮಣಗೂರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಆರ್.ಜಿ. ಬುಲಾತಿ ಮಾತನಾಡಿ, ಹಳ್ಳಿಗಳಲ್ಲಿ ಕಾಯಿಪಲ್ಯೆಗಳ ಬಳಕೆ ಕಡಿಮೆ, ಕಾಳು ಕಡಿಗಳ ಬಳಕೆ ಹೆಚ್ಚು, ಹೀಗಾಗಿ ವಾರದ ಸಂತೆಯನ್ನು ಹಳ್ಳಿಗಳಲ್ಲಿ ಏರ್ಪಡಿಸುವುದರಿಂದ ಕಾಯಿಪಲ್ಯೆಗಳ ಲಭ್ಯತೆ ಹೆಚ್ಚಾಗುತ್ತದೆ ಎಂದರು.


ಮುಖ್ಯ ಶಿಕ್ಷಕ ಬಿ.ಬಿ. ಉಣ್ಣಿಭಾವಿ, ಸಿಆರ್ ಪಿ ಭಾಷಾಸಾಬ್ ಮನಗೂಳಿ, ಆರ್.ಜಿ. ಬುಲಾತಿ, ಎಂ.ಎಸ್. ಯಳಮೇಲಿ, ಬಿ.ಆರ್. ಪಾಟೀಲ, ಡಿ.ಕೆ. ಪಾಟೀಲ, ಅಕ್ಕಮಹಾದೇವಿ ಪಟ್ಟಣಶೆಟ್ಟಿ, ಸುನಂದಾ ಬಡಿಗೇರ, ಎಲ್.ಪಿ. ಬಿದ್ನಾಳ, ಭುವನೇಶ್ವರಿ ಮಠ ಇದ್ದರು.
ವಿವಿಧ ಜೀವಸತ್ವಗಳು ಹಾಗೂ ಸ್ವಚ್ಛತೆಯ ಮಹತ್ವ ಸಾರುವ ಐದು ಕಿರು ನಾಟಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಸಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *

You May Also Like

ಇನ್ಮುಂದೆ ಕಸ ಸಂಗ್ರಹ ತೊಂದರೆಗೆ ಮುಕ್ತಿ ? ಗ್ರಾಪಂ ಯತ್ನ ! ಕಸವಿಲೇವಾರಿ 2 ನೇ ಹೊಸ ವಾಹನಕ್ಕೆ ಚಾಲನೆ

ಉತ್ತರಪ್ರಭಆಲಮಟ್ಟಿ: ಗಾಡಿವಾಲಾ ಆಯಾ ಜರಾ ಕಚರಾ ನಿಕಾಲ್ ಸದ್ದಿನೊಂದಿಗೆ ಕಸವಿಲೇವಾರಿಯ ಹೊಸದಾದ ವಾಹನವೊಂದು ರಸ್ತೆಗೆ ಇಳಿಯಲಿದೆ.…

ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ ಶಿಕ್ಷಣ ಸಚಿವ

ಖಾಸಗಿ ಶಿಕ್ಷಣ ಸಂಸ್ಥೆಗಳ ವರ್ತನೆಯಿಂದ ಆತಂಕಗೊಂಡಿರುವ ಶಿಕ್ಷಣ ಇಲಾಖೆ, ಇದೀಗ ಮಕ್ಕಳ ಹಿತ ಕಾಪಾಡಲು ಮುಂದಾಗಿದೆ. ಹೀಗಾಗಿ ಶಾಲಾ ಶುಲ್ಕದ ವಿಚಾರವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಠಿಣ ಎಚ್ಚರಿಕೆ ನೀಡಿದ್ದಾರೆ.

ವಚನ ಸಾಹಿತ್ಯಕ್ಕಾಗಿ ಬೆಂದ ಜೀವ ಹಳಕಟ್ಟಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅಭಿಮತ

ಸಚಿತ್ರ ವರದಿ ಗುಲಾಬಚಂದ ಜಾಧವಆಲಮಟ್ಟಿ : ವಚನ ಸಾರ ಜಗತ್ತಿನಾದ್ಯಂತ ಫಸರಿಸಿದ ಡಾ.ಫ.ಗು.ಹಳಕಟ್ಟಿ ವಚನ ಸಾಹಿತ್ಯದ…

ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಭೆ ಸಮಾರಂಭಗಳನ್ನು ಮುಂದೂಡಲು ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಒಂದು ವಾರದ ಹಿಂದೆ ಧಾರವಾಡ ಎಸ್ ಡಿ ಎಮ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೊರೋನಾ…