ಉತ್ತರಪ್ರಭ ಸುದ್ದಿ
ಆಲಮಟ್ಟಿ:
ಆಲಮಟ್ಟಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿಯ ವಿವಿಧ ಸ್ಪಧೆ೯ಗಳಲ್ಲಿ ಸ್ಥಳೀಯ ಎಂ.ಎಚ್.ಎಂ.ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲಾ ಮಕ್ಕಳು ಮಿಂಚಿ ಸಾಧನೆ ಗೈದಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯತ ವಿಜಯಪುರ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾಯಾ೯ಲಯ ಬಸವನ ಬಾಗೇವಾಡಿ ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಆಲಮಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಈಚೆಗೆ ನಡೆದ ಆಲಮಟ್ಟಿ ಕ್ಲಸ್ಟರ್ ಮಟ್ಟದ 2022-23 ನೇ ಸಾಲಿನ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವಿಧ ಸ್ಪಧೆ೯ಗಳಲ್ಲಿ ಇಲ್ಲಿನ ಎಂ.ಎಚ್.ಎಂ.ಆಂಗ್ಲ ಪ್ರಾಥಮಿಕ ಶಾಲಾ ಚಿಣ್ಣರು ತಮ್ಮ ಪ್ರತಿಭಾ ಕೌಶಲ್ಯ ಉತ್ಕಟ ರೀತಿಯಲ್ಲಿ ಪ್ರದಶಿ೯ಸಿ ಸಾಂಸ್ಕೃತಿಕ ಪ್ರಿಯರ ಗಮನ ಸೆಳೆದಿದ್ದಾರೆ.

1ರಿಂದ 4 ನೇ ತರಗತಿ ವಿಭಾಗದ ಕಥೆ ಹೇಳುವ ಸ್ಪಧೆ೯ಯಲ್ಲಿ ಪವನ ಜಾಲಿಬೆಂಚಿ ಪ್ರಥಮ ಸ್ಥಾನ ಪಡೆದರೆ, 1ರಿಂದ 6 ನೇ ತರಗತಿ ವಿಭಾಗದಲ್ಲಿ ಸೃಷ್ಟಿ ಹಿರೇಮಠ ಧಾಮಿ೯ಕ ಪಠಣ (ಸಾಂಸ್ಕೃತಿ) ಸ್ಪಧೆ೯ಯಲ್ಲಿ ಪ್ರಥಮ,ಇಂಗ್ಲಿಷ್ ಕಂಠಪಾಠ ಸ್ಪಧೆ೯ಯಲ್ಲಿ ದ್ವೀತಿಯ ಸ್ಥಾನ ಪಡೆದು ಮಿನುಗಿದ್ದಾಳೆ. ಅದರಂತೆ ಸೋಮಲಿಂಗ ಬಿಂಗಿ ಚಿತ್ರಕಲೆ, ಅಕ್ಷತಾ ತಳವಾರ ಲಘ ಸಂಗೀತ, ಶಂಕರ ರಾಠೋಡ ಕ್ಲೇ ಮಾಡಲಿಂಗ್, ಪವಿತ್ರಾ ಲಮಾಣಿ ಭಕ್ತಿಗೀತೆ, 6 ರಿಂದ 7 ನೇ ತರಗತಿ ವಿಭಾಗದಲ್ಲಿ ಶೃತಿ ಲಮಾಣಿ ಛದ್ಮವೇಷ, ಬಸವರಾಜ ಸಾತಿಹಾಳ ಹಾಸ್ಯ, ವಿಜಯಲಕ್ಷ್ಮಿ ಸೌದಿ ಕನ್ನಡ ಕಂಠಪಾಠ ಸ್ಪಧೆ೯ಗಳಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಚಿಣ್ಣರ ಕಾರಂಜಿಯಲ್ಲಿ ಮಿಂಚಿ ನಲಿದಿದ್ದಾರೆ.


ಪುಟ್ಟ ಮಕ್ಕಳು ತಮ್ಮಲ್ಲಿ ಹುದಗಿರುವ ಸೂಪ್ತ ಪ್ರತಿಭಾ ಕೌಶಲ್ಯ ಹೊರಹಾಕಿ ಶಾಲೆಗೆ ಕೀತಿ೯ ತಂದಿದ್ದಾರೆ. ಪ್ರತಿಭಾ ಕಾರಂಜಿಯಲ್ಲಿ ಮಿಂಚಿ ಸಾಧನೆ ಮಾಡಿರುವ ಪುಟಾಣಿಗಳಿಗೆ ಸಂಸ್ಥೆಯ ಅಧ್ಯಕ್ಷ ತೋಂಟದ ಡಾ. ಸಿದ್ದರಾಮ ಶ್ರೀಗಳು, ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ, ಶಾಲಾ ಉಸ್ತುವಾರಿ ಜಿ.ಎಂ.ಕೋಟ್ಯಾಳ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಮುಖ್ಯ ಶಿಕ್ಷಕಿ ತನುಜಾ ಪೂಜಾರಿ ಮಾರ್ಗದರ್ಶನದಲ್ಲಿ ಗುರುಮಾತೆಯರಾದ ಸಿದ್ದಮ್ಮ ಅಂಗಡಿ, ಕವಿತಾ ಮರಡಿ,ಸರೋಜಾ ಕಬ್ಬೂರ, ಶೈನಾಬಾನು ಬಾಗಲಕೋಟ, ಕಾಂಚನಾ ಕುಂದರಗಿ, ಶಂಕ್ರಮ್ಮ ಗುಳೇದಗುಡ್ಡ, ಸುನೀತಾ ಮಹೇಂದ್ರಕರ, ಮಂಜುಳಾ ಸಂಗಾಪುರ ಮಕ್ಕಳಿಗೆ ಸೂಕ್ತ ತರಬೇತಿ ನೀಡಿ ಪ್ರತಿಭಾ ಕಾರಂಜಿ ಸ್ಪಧೆ೯ಗೆ ಸನ್ನದ್ಧ ಗೊಳಿಸಿದ್ದರು. ಅದರ ಪ್ರತಿಫಲ ಚಿಣ್ಣರು ಸ್ಪಧೆ೯ಗಳಲ್ಲಿ ಜಯಶಾಲಿಗಳಾಗುವ ಮುಖೇನ ತೋರ್ಪಡಿಸಿದ್ದಾರೆ. ಅಲ್ಲದೇ ಶಾಲೆಯ ಕೀತಿ೯ ಹೆಚ್ಚಿಸುವಲ್ಲಿ ಯಶಸ್ವಿಯಾಗಿ ಮೆರೆದಿದ್ದಾರೆ.

Leave a Reply

Your email address will not be published. Required fields are marked *

You May Also Like

ಮಕ್ಕಳ ಕಲಿಕಾ ಮೇಳ ಸಂಭ್ರಮ…ವೈವಿಧ್ಯ ಪರಿಕಲ್ಪನೆ ಕೌಶಲ್ಯ ಅನಾವರಣ..!

ಆಲಮಟ್ಟಿ: ಅಲ್ಲಿ ಗಣಿತ, ಭಾಷೆ ಸೇರಿ ನಾನಾ ವಿಷಯಗಳ ಕಠಿಣ ಪರಿಕಲ್ಪನೆಗಳನ್ನು ನಾನಾ ಹೊಸ ಹೊಸ…

ಶೇ 40 ರಷ್ಟು ಮಧ್ಯಂತರ ಪರಿಹಾರಕ್ಕೆ ಆಗ್ರಹ : ಮಾ.1 ರಿಂದ ನೌಕರರ ಮುಷ್ಕರ-ದಳವಾಯಿ

ಆಲಮಟ್ಟಿ: ಶೇ 40 ರಷ್ಟು ಮಧ್ಯಂತರ ಪರಿಹಾರಕ್ಕೆ ಆಗ್ರಹಿಸಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ…

ಓದುವ ಬೆಳಕು : ಸ್ಪರ್ಧಾ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ

ಮುಳಗುಂದ : ಸಮೀಪದ ಚಿಂಚಲಿ ಗ್ರಾಮ ಪಂಚಾಯ್ತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಕಾಂದಬರಿ…

ಗೋವಿನ ಪ್ರತಿ ಅಂಗಳದಲ್ಲಿಯೂ ದೇವ- ದೇವತೆಗಳು ನೆಲೆಸಿವೆ- ಸತ್ಯಾರ್ಥತೀರ್ಥ ಶ್ರೀ

“ಯಲಗೂರ ಗೋಶಾಲೆ ಪ್ರೇರಕ ಶಕ್ತಿ ಸುಧಾಮೂತಿ೯ ಕರುನಾಡಿಗೆ ಸ್ಪೂರ್ತಿ” ಉತ್ತರಪ್ರಭ ಆಲಮಟ್ಟಿ: ಗೋವುಗಳನ್ನು ಕಸಾಯಿಕಾನೆಗೆ ಕಳುಹಿಸಲು…