ಉತ್ತರಪ್ರಭ

ಗದಗ: ಒಂದು ತಿಂಗಳಿನಿಂದ ಗದುಗಿಗೆ ಜಿಲ್ಲಾಧಿಕಾರಿಗಳ ನೇಮಕಾತಿಯನ್ನು ಸರ್ಕಾರ ಹೋರಡಿಸಿದ್ದು ಈ ತಿಂಗಳಲ್ಲೇ ಮೂರನೇಯದಾಗಿ ಶಿವಮೊಗ್ಗ ಜಿಲ್ಲೆಯ ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ (ಐ.ಎ.ಎಸ್) ವೈಶಾಲಿ ಎಮ್.ಎಲ್ (KN 2013) ರನ್ನು ಇಂದು ಗದಗ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಸರ್ಕಾರ ಆದೇಶ ಹೋರಡಿಸಿದೆ.

ಇನ್ನು ಮೂರು ದಿನದಲ್ಲಿ ಕೇಂದ್ರ ಸರಕಾರದ ಆದೇಶದಂತೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಪ್ರತಿ ಮನೆ ಮನೆಗೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಅದ್ದುರಿಯಾಗಿ ಸಂಭ್ರಮಿಸಲು ತಿಳಿಸಿದ್ದು, ಒಂದೆಡೆ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಚಿತ್ರದುರ್ಗ ಹಾಗೂ ಗದಗ ಇವೆರಡು ಜಿಲ್ಲೆಗೆ ಉಸ್ತುವಾರಿಯ ಜವಾಬ್ದಾರಿ ನೀಡಿದ್ದು. ಆ. 15ರಂದು ಚಿತ್ರದುರ್ಗದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ್ದು, ಅಲ್ಲದೆ ಜಿಲ್ಲಾದ್ಯಂತ ವಿಪರಿತ ಮಳೆಯಿಂದಾಗಿ ರೈತನು ತನ್ನ ಜೀವನೋಪಾಯಕ್ಕೆ ನಂಬಿ ಬೆಳೆದ ಬೆಳೆ ನಾಶವಾಗಿದ್ದು ಮತ್ತು ವಾಸಿಸುವ ಮನೆಗಳು ಮಳೆಗೆ ಹಾನಿಯಾಗಿದ್ದು, ಸಮಯಕ್ಕೆ ಸರಿಯಾಗಿ ಪರಿಶೀಲನೆ ನಡೇಸದ ಅಧಿಕಾರಿಗಳಿಗು ಯಾರು ಕೇಳುವರಿಲ್ಲದಂತಾಗಿದೆ. ಗದಗ ಜಿಲ್ಲೆಯು ಒಂತರಾ ತಾಯಿ ಇಲ್ಲದ ತಬ್ಬಲಿಯಂತಾಗಿದೆ.

👆ಜಿಲ್ಲೆಯ ಹಲವೆಡೆ ಬೆಳೆ ಹಾನಿಯಾಗಿರು ದೃಶ್ಯಗಳು

ನಮ್ಮ ಜಿಲ್ಲೆಗೆ ಏಕೆ ಸರ್ಕಾರ ಬೇಜವಾಬ್ದಾರಿ ತೋರುತ್ತಿದೆ ಎನ್ನುವದು ಜಿಲ್ಲೆಯ ಜನರಲ್ಲಿ ಯಕ್ಷ ಪ್ರಶ್ನೆಯಾಗಿದೆ. ಈಗಲಾದರು ನಮ್ಮ ಜಿಲ್ಲೆಯ ಸ್ಥಿತಿ ಗತಿ ನೋಡಿಕೊಳ್ಳಲು ಅಧಿಕೃತವಾಗಿ ಒಬ್ಬ ಉಸ್ತುವಾರಿ ಸಚಿವರನ್ನು ಹಾಗೂ ಜಿಲ್ಲಾಧಿಕಾರಿಯನ್ನು ಸರ್ಕಾರ ನೇಮಕ ಮಾಡಲೆಂದು ಇಲ್ಲಿಯ ಜನರ ಮಾತಾಗಿದೆ.

Leave a Reply

Your email address will not be published. Required fields are marked *

You May Also Like

ಟೈರ್ ಗೆ ಬೆಂಕಿ ಹಚ್ಚಲು ಪೊಲೀಸರ ವಿರೋಧ: ಕರವೇ ಕಾರ್ಯಕರ್ತರ ಆಕ್ರೊಶ

ಕರ್ನಾಟಕ ಬಂದ್ ಹಿನ್ನಲೆ, ಮುಳಗುಂದ ನಾಕಾ ಬಳಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಟೈರ್ ಗೆ ಬೆಂಕಿ ಹಚ್ಚಲು ಪ್ರತಿಭಟನಾಕಾರರು ಮುಂದಾದರು.

ಸರ್ಕಾರಗಳ ಸಾಧನೆ ಮನೆ-ಮನೆಗೆ ತಲುಪಿಸಿ- ಲಿಂಗರಾಜ ಪಾಟೀಲ್

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಮನೆ-ಮನೆಗೆ ತಲುಪಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಧಾರವಾಡ ವಿಭಾಗೀಯ ಬಿಜೆಪಿ ಸಂಘಟನಾ ಪ್ರಭಾರಿ ಲಿಂಗರಾಜ್ ಪಾಟೀಲ್ ಹೇಳಿದರು.

ಉತ್ತರಪ್ರಭ ಫಲಶೃತಿ: ಏನರಾ ಆಗ್ಲಿ ಧೂಳಿಗೆ ತೆರಿಗೆ ಕಟ್ಟೊ ಕಾಟ ತಪ್ಪಿದ್ರ ಸಾಕು..!

ಮನೆ, ಜಾಗೆ, ನೀರು, ಕಟ್ಟಡ ಹೀಗಿಲ್ಲ ತೆರಿಗೆ ಕಟ್ಟುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಅಷ್ಟೆ ಏಕೆ ಸ್ವತಃ ಕಟ್ಟಿದ್ದೇವೆ. ಆದರೆ ಇದ್ಯಾವುದಿದು ಧೂಳಿಗೆ ಕರ ಕಟ್ಟುವುದು ಅಂದ್ಕೊಂಡ್ರಾ?

ದಿಂಗಾಲೇಶ್ವರ ಶ್ರೀ ಆಕ್ಷೇಪಾರ್ಹ ಹೇಳಿಕೆಗೆ ಸಚಿವ ಸಿ.ಸಿ.ಪಾಟೀಲ ತೀವ್ರ ಖಂಡನೆ

ಉತ್ತರಪ್ರಭಆಲಮಟ್ಟಿ: ಅಸಂಖ್ಯ ಭಕ್ತರ ಆರಾಧ್ಯ ದೈವ ಗದುಗಿನ ತೋಂಟದ ಲಿಂಗೈಕ್ಯ ಡಾ. ಸಿದ್ದಲಿಂಗ ಶ್ರೀಗಳ ಜನ್ಮದಿನವನ್ನು…