ಉತ್ತರಪ್ರಭ ಸುದ್ದಿ
ಮುಳಗುಂದ: ಪಟ್ಟಣ ಸೇರಿದಂತೆ ಬಸಾಪೂರ, ಶೀತಾಲಹರಿ ಗ್ರಾಮಗಳ ವ್ಯಾಪ್ತಿಯಲ್ಲಿ ಬುಧವಾರವೂ ಸಹ ಸಂಜೆ ಜೋರಾದ ಗಾಳಿ, ಗುಡುಗು ಸಹಿತ ಭಾರಿ ಮಳೆ ಸುರಿತು.
ಮಂಗಳವಾರವು ಮಳೆ ಆಗಿದ್ದು ಮುಂಜಾನೆ ಬಿಸಿಲು ಇತ್ತು ಮದ್ಯಾಹ್ನದಿಂದ ಮೋಡಕವಿದು ಸಂಜೆ ವೇಳೆಗೆ ಧೀಡಿರನೆ ಮಳೆ ಸುರಿದಿದ್ದರಿಂದ ವಾರದ ಸಂತೆಗೆ ಬಂದಿದ್ದ ಹಳ್ಳಿ ಜನರು, ತರಕಾರಿ ವ್ಯಾಪಾರಸ್ಥರು ಪರದಾಡಿದರು. ಅರ್ಧಗಂಟೆಗೂ ಹೆಚ್ಚುಕಾಲ ಭಾರಿ ಮಳೆ ಸುರಿದು ಚರಂಡಿಗಳು ತುಂಬಿಹರಿದವು. ಕಟಾವು ಮಾಡಿದ್ದ ಬಳ್ಳಿ ಶೇಂಗಾ ಬಣವಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ ರಕ್ಷಣೆ ಮಾಡಿದ್ದು ಇನ್ನೂ ಮಳೆ ಮಂದು ವರೆದರೆ ಕಟಾವು ಮಾಡದೇ ಇರುವ ಗೋವಿನ ಜೋಳ, ಶೇಂಗಾ, ಮೆಣಸಿನಕಾಯಿ ಫಸಲು ಕೊಳೆಯುವ ಆತಂಕ ರೈತರಿಗೆ ಎದುರಾಗಿದೆ.