ಬೆಂಗಳೂರು: ಸಾಮಾನ್ಯವಾಗಿ ಜಾನಪದ ಕಲೆ ಎಂದರೆ ನಮ್ಮ ಬಹುತೇಕ ಯುವಕರಿಗೆ ಅದರ ಗಂಭೀರತೆಗಿಂತ ಹಾಸ್ಯ ಹಾಗೂ ವಿಡಂಭನಾತ್ಮಕವಾಗಿ ಬಳುತ್ತಿರುವವರೆ ಹೆಚ್ಚು. ಆದರೆ ಇದಕ್ಕೆ ಜಾನಪದ ಬಾಲಾಜಿ ತದ್ವಿರುದ್ಧ. ಕನ್ನಡ ಜಾನಪದ ಪರಿಷತ್ ಸಂಘಟನೆ ಮೂಲಕ ರಾಜ್ಯದ ಜಾನಪದ ಕಲಾವಿದರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ಕನ್ನಡ ಜಾನಪದ ಯುವ ಬ್ರಿಗೇಡಿನ ಮೂಲಕ ಯುವ ಜನಾಂಗವನ್ನು ಎಚ್ಚರಿಸುವ ಹಾಗೂ ಅವರನ್ನು ಜಾನಪದ ಕಲೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲೂ ಆಪ್ ಸಹಾಯದಿಂದ ಯುವಕರನ್ನು ಸೇರಿಸಿ ಅವರಿಗೆ ಜಾನಪದ ಕಲೆಯ ಸೊಗಡು ಉಣ ಬಡಿಸುವ ಕಾರ್ಯ ಮಾಡುತ್ತಿದ್ದಾರೆ.

ಇಂದು ಆನ್ಲೈನ್ ಮೂಲಕ ನಡೆಸಿದ ಸಭೆಯಲ್ಲಿ 200 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇದರಲ್ಲಿ ಮೂಲ ಜಾನಪದ ಕಲಾವಿದರು, ಆಸಕ್ತರು ಭಾಗವಹಿಸಿದ್ದರು. ಇದೇ ವೇಳೆ ಯುವಕರಿಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಮೂಲ ಜಾನಪದ ಕಲಾ ಪ್ರಕಾರಗಳ ಪ್ರದರ್ಶನವನ್ನು ಕೂಡ ಏರ್ಪಡಿಸಿದ್ದರು.

ಹಿರಿಯ ಉಪನ್ಯಾಸಕರು, ವಿದ್ಯಾಂಸರ, ಜನಪರ ಹೋರಾಟಗಾರರನ್ನು ಅತಿಥಿಗಳಾಗಿ ಸೇರಿಸಿಕೊಂಡಿದ್ದರೂ ಒಂದು ಗಂಟೆಗೂ ಅಧಿಕ ಸಮಯದವರೆಗೆ ಸಭೆ ನಡೆಯಿತು.

ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಕಲಾವಿದರು ಭಾಗವಹಿಸಿ ತಮ್ಮ ಕಲಾಪ್ರದರ್ಶನ ನೀಡಿದರು. ಗದಗ ಜಿಲ್ಲೆಯಿಂದಲೂ ಕೂಡ ಕಲಾವಿದ ಶಿವು ಭಜಂತ್ರಿ ಭಾಗವಹಿಸಿದ್ದರು. ಉತ್ತರ ಕರ್ನಾಟಕ ಮಹಾಸಭಾ ಹಾಗೂ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ರವಿಕಾಂತ ಅಂಗಡಿ ಅತಿಥಿಗಳಾಗಿ ಪಾಲ್ಗೊಂಡು ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯದೇ ಜಾನಪದ ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಡಾ.ಬಾಲಾಜಿ ಅವರಂಥ ವ್ಯಕ್ತಿಗಳನ್ನು ಪಕ್ಷ ಬೇಧ ಮರೆತು ಅಕಾಡೆಮಿಗೆ ಅಧಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

1 comment
  1. Dr ಬಾಲಾಜಿ ಸರ್ ಅಂತವರನ್ನ ದೀಪ ಹಚ್ಚಿ ಹುಡಿಕಿದರು ಸಿಗೋದಿಲ್ಲ, ಯಾಕೆಂದರೆ ಅವರ ಸೇವೆ ಅಪಾರ ವಾದುದು, ಜಾನಪದದಲ್ಲಿ, ಝಲಕ್ ಮೂಡಿಸುತ್ತಿರುವ ಬಾಲಾಜಿ ಸರ್ ಹೀಗೆ, ಸುಖವಾಗಿ, ಸಂತೋಷದಿಂದ ಹೀಗೆ ಜಾನಪದವನ್ನ ಮುಂದುವರೆಸಿ.
    ಇಂತಿ ನಿಮ್ಮ, :ಶಿವಯೋಗಿ ಹಾವೇರಿ. ????

Leave a Reply

Your email address will not be published. Required fields are marked *

You May Also Like

ಗ್ರಾಪಂ ಚುನಾವಣೆ: ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

ಗ್ರಾಪಂ ಚುನಾವಣೆ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಗಳಿಗೆ ಸ್ಥಳೀಯ ಎಫ್ ಎಂ.ಡಬಾಲಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು.

ದಿ. ಮಲ್ಲನಗೌಡ ಫ ಪಾಟೀಲ ಅವರ ದ್ವೀತಿಯ ಪುಣ್ಯಸ್ಮರಣೆಯಲ್ಲಿ ಪೂಜ್ಯ ಕಲ್ಲಯ್ಯಜ್ಜನವರ ತುಲಾಭಾರ

ಪುಣ್ಯಾಶ್ರಮದ ಗುರುಬಂಧುಗಳಾದ ಸಾಸರವಾಡ ಗ್ರಾಮದ ಮಲ್ಲನಗೌಡ ಪಾಟೀಲರು ಉತ್ತಮ ಸಂಗೀತ ಕಲಾವಿದರಾಗಿದ್ದರು. ಜೊತೆಗೆ ಸಾತ್ವಿಕ ಗುಣವುಳ್ಳವರಾಗಿದ್ದರು. ಅವರು ಸರಳತೆ ಹಾಗೂ ಆದರ್ಶಪ್ರಾಯ ವ್ಯಕ್ತಿತ್ವ ಉಳ್ಳವರಾಗಿದ್ದರು. ಅವರ ಪುಣ್ಯಸ್ಮರಣೆಯ ನಿಮಿತ್ಯವಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧೀಪತಿ ಪೂಜ್ಯ ಕಲ್ಲಯ್ಯಜ್ಜನವರು ಹೇಳಿದರು.

ಅಡರಕಟ್ಟಿ ವಿಎಸ್ಎಸ್ ಸಂಘಕ್ಕೆ ಅವಿರೋಧ ಆಯ್ಕೆ

ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ ಮಾಡಲಾಯಿತು.

ಕೋವಿಡ್ ಮೊದಲ ಸಾವು : ಕೈ ಸೇರದ ಪಾಸಿಟಿವ್ ವರದಿ

ದೇಶದಲ್ಲೇ ಮೊದಲಬಾರಿಗೆ ಕೋರೊನಾ ಸಂಕಿನಿಂದ ಮೃತಪಟ್ಟ ಮೊಹಮದ್ದ ಹುಸೇನ್ ಸಿದ್ದಿಕ (76) ಅವರ ಕೊವಿಡ್ ಪಾಸಿಟಿವ್ ವರದಿ ಇನ್ನೂ ಅವರ ಕುಟುಂಬದ ಕೈಗೆ ತಲುಪಿಲ್ಲ.