ಉತ್ತರಪ್ರಭ ಸುದ್ದಿ

ನಿಡಗುಂದಿ: ನೇಪಾಳದ ಪೊಖರಾದಲ್ಲಿ ನಡೆದ ಇಂಡೋ-ನೇಪಾಳ ಇಂಟರ್ ನ್ಯಾಷನಲ್ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿಯ ಕ್ರಿಕೆಟ್ ತಂಡ ಚಿನ್ನದ ಪದಕ ಗಳಿಸಿದೆ. ನಿಡಗುಂದಿಯ ಕ್ರಿಕೆಟ್ ತರಬೇತುದಾರ ಪವಾಡೆಪ್ಪ ಗುಂಡಿನಪಾಳ್ಯ ಅವರ ಮಾರ್ಗದರ್ಶನದಲ್ಲಿ ಈ ಕ್ರಿಕೆಟ್ ತಂಡ ಈ ಸಾಧನೆ ಮಾಡಿದೆ. ತಂಡದಲ್ಲಿ ನಿಡಗುಂದಿ ಪಟ್ಟಣದ ಯುವ ಪ್ರತಿಭೆಗಳಾದ ಶಿವಾನಂದ ಮಹಾದೇವಪ್ಪ ಗುಡಿಮನಿ, ಕಿರಣ ಮೋತಿಲಾಲ್ ಚವ್ಹಾಣ, ಸಂಪತ್ ಸಂಗಮೇಶ ಗೂಗಿಹಾಳ, ಪವನ ಕನಕಪ್ಪ ಪೂಜಾರಿ, ಪರಶುರಾಮ ಸುರೇಶ ಭಾಂಡವಳಕರ, ಖಲೀಲ್ ಬಾಬಾಜಾನ್ ಪೀರಜಾದೆ, ಅರವಿಂದ ಜವಾರಾಮ್ ಚೌಧರಿ, ಸುಮಿತ ಪರಶುರಾಮ ಕೇಳವಾಡಿ, ಸಮೀರ್ ಜಾವೀದ್ ಮನ್ನಿಕೇರಿ, ಅಕ್ಷಯಕುಮಾರ ಯಲಗೂರೇಶ, ಕಿರಣ ಚೌಧರಿ ಕ್ರಿಕೆಟ್ ತಂಡದಲ್ಲಿದ್ದರು. ಇವರೆಲ್ಲರ ಸಾಂಘಿಕ ಆಟದ ಪ್ರದರ್ಶನದಿಂದ ನಿಡಗುಂದಿ ಕ್ರಿಕೆಟ್ ತಂಡ ಪಂದ್ಯಾವಳಿಯಲ್ಲಿ ಮಿಂಚಿ ಪ್ರಶಸ್ತಿ ಪಡೆದಿದೆ.

Leave a Reply

Your email address will not be published. Required fields are marked *

You May Also Like

ಮಸ್ಕಿ: ಕಾರ್ಮಿಕ ಕಾಯ್ದೆ ಹಿಂಪಡೆಯುವಂತೆ ಒತ್ತಾಯ

ಕಾರ್ಮಿಕ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಇಲ್ಲಿನ ಕರ್ನಾಟಕ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.

ಮಗುವಿಗಾಗಿ ಆಹಾರ ಅರಸಿದ ತಾಯಿ..! ಇದು ಮಂಗಗಳ ಮಂಕಿಬಾತ್!

ದೇಶದೊಳಗ ಲಾಕ್ ಡೌನ್ ಶುರುವಾಗಿ 42 ದಿನದ ಹೊತ್ತಾಯಿತು. ಇಂಥಾದ್ರಾಗ, ಬಾಯಿದ್ದ ಮನುಷಾರಾ ಅನ್ನಕ್ಕಾಗಿ ಬಾಯಿ ಬಿಡುವಂಗಾಗೈತಿ. ಪಾಪ ಆ ತಾಯಿ ಹೃದಯ ತನ್ನ ಮಗಿವಿನ ಅನ್ನಕ್ಕಾಗಿ ಎಷ್ಟು ಪರದಾಡ್ತು ಅಂತಿರಿ. ಈ ದೃಷ್ಯ ಎಂಥವರ ಕರಳು ಹಿಂಡುತ್ತೆ..!

ಭಾನುವಾರ ಮದುವೆಗೆ ಅವಕಾಶ ರಾಜ್ಯ ಸರ್ಕಾರದ ಆದೇಶ

ರಾಜ್ಯಾಧ್ಯಂತ ಪ್ರತಿ ಭಾನುವಾರದಂದು ಬೆಳಿಗ್ಗೆ 7ಗಂಟೆಯಿಂದ ಸಂಜೆಯ 7 ಗಂಟೆಯವರೆಗೆ ಕರ್ಪ್ಯೂ ಜಾರಿ ಮಾಡಿದ್ದರಿಂದಾಗಿ, ಮದುವೆ ಸಮಾರಂಭ ಕೂಡ ನಡೆಸಬಾರದಾ ಎಂಬ ಗೊಂದಲಕ್ಕೆ ರಾಜ್ಯದ ಜನತೆ ಒಳಗಾಗಿದ್ದರು. ಇದೀಗ ಮದುವೆ ಸಮಾರಂಭವನ್ನು ನಡೆಸುವುದಕ್ಕೆ ಅವಕಾಶ ನೀಡಿ, ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ.