ಉತ್ತರಪ್ರಭ ಸುದ್ದಿ

ನಿಡಗುಂದಿ: ನೇಪಾಳದ ಪೊಖರಾದಲ್ಲಿ ನಡೆದ ಇಂಡೋ-ನೇಪಾಳ ಇಂಟರ್ ನ್ಯಾಷನಲ್ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿಯ ಕ್ರಿಕೆಟ್ ತಂಡ ಚಿನ್ನದ ಪದಕ ಗಳಿಸಿದೆ. ನಿಡಗುಂದಿಯ ಕ್ರಿಕೆಟ್ ತರಬೇತುದಾರ ಪವಾಡೆಪ್ಪ ಗುಂಡಿನಪಾಳ್ಯ ಅವರ ಮಾರ್ಗದರ್ಶನದಲ್ಲಿ ಈ ಕ್ರಿಕೆಟ್ ತಂಡ ಈ ಸಾಧನೆ ಮಾಡಿದೆ. ತಂಡದಲ್ಲಿ ನಿಡಗುಂದಿ ಪಟ್ಟಣದ ಯುವ ಪ್ರತಿಭೆಗಳಾದ ಶಿವಾನಂದ ಮಹಾದೇವಪ್ಪ ಗುಡಿಮನಿ, ಕಿರಣ ಮೋತಿಲಾಲ್ ಚವ್ಹಾಣ, ಸಂಪತ್ ಸಂಗಮೇಶ ಗೂಗಿಹಾಳ, ಪವನ ಕನಕಪ್ಪ ಪೂಜಾರಿ, ಪರಶುರಾಮ ಸುರೇಶ ಭಾಂಡವಳಕರ, ಖಲೀಲ್ ಬಾಬಾಜಾನ್ ಪೀರಜಾದೆ, ಅರವಿಂದ ಜವಾರಾಮ್ ಚೌಧರಿ, ಸುಮಿತ ಪರಶುರಾಮ ಕೇಳವಾಡಿ, ಸಮೀರ್ ಜಾವೀದ್ ಮನ್ನಿಕೇರಿ, ಅಕ್ಷಯಕುಮಾರ ಯಲಗೂರೇಶ, ಕಿರಣ ಚೌಧರಿ ಕ್ರಿಕೆಟ್ ತಂಡದಲ್ಲಿದ್ದರು. ಇವರೆಲ್ಲರ ಸಾಂಘಿಕ ಆಟದ ಪ್ರದರ್ಶನದಿಂದ ನಿಡಗುಂದಿ ಕ್ರಿಕೆಟ್ ತಂಡ ಪಂದ್ಯಾವಳಿಯಲ್ಲಿ ಮಿಂಚಿ ಪ್ರಶಸ್ತಿ ಪಡೆದಿದೆ.

Leave a Reply

Your email address will not be published. Required fields are marked *

You May Also Like

ಕಾಲುವೆಗೆ ಉರುಳಿ ಬಿದ್ದ ಕಾರು: ಇಬ್ಬರು ಸ್ಥಳದಲ್ಲೆ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ನಡೆದಿದೆ.

ಸಸ್ಯ ಪ್ರೇಮ ನಿತ್ಯ ಮೂಡಲಿ-ಶಿವಾನಂದ ಪಟ್ಟಣಶೆಟ್ಟರ

ವರದಿ : ಗುಲಾಬಚಂದ ಜಾಧವಆಲಮಟ್ಟಿ: ಸಕಲ ಜೀವ ಸಂಕುಲಗಳಿಗೆ ಪ್ರಕೃತಿ ಮಾತೆಯೆ ಆಧಾರ.ಪ್ರಕೃತಿ ಸೃಷ್ಟಿಯಿಂದಲೇ ನಮಗೆಲ್ಲ…

ಅಸ್ವಸ್ಥಗೊಂಡ ರಾಘವೇಂದ್ರ ರಾಜ್‌ಕುಮಾರ್ ಆಸ್ಪತ್ರೆಗೆ ದಾಖಲು

ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಮಂಗಳವಾರ ಸಂಜೆ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಿಂಧನೂರು: ಬಾಬುಗೌಡ ಬಾದರ್ಲಿ ನೇತೃತ್ವದಲ್ಲಿ ಕೊರೋನ್ ಜಾಗೃತಿ

ಜಿಲ್ಲಾ ಪಂಚಾಯತ ಸದಸ್ಯ ಕಾಂಗ್ರೆಸ್ ಪಕ್ಷದ ಮುಖಂಡ ಬಾಬುಗೌಡ ಬಾದರ್ಲಿ ನೇತೃತ್ವದಲ್ಲಿ ಕೊರೋನ್ ವೈರಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾಸ್ಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.