ಇಂಡೋ-ನೇಪಾಳ ಕ್ರಿಕೆಟ್ ಟ್ರೋಫಿ “ನಿಡಗುಂದಿ ತಂಡಕ್ಕೆ ಚಿನ್ನದ ಪದಕ”

ಉತ್ತರಪ್ರಭ ಸುದ್ದಿ

ನಿಡಗುಂದಿ: ನೇಪಾಳದ ಪೊಖರಾದಲ್ಲಿ ನಡೆದ ಇಂಡೋ-ನೇಪಾಳ ಇಂಟರ್ ನ್ಯಾಷನಲ್ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿಯ ಕ್ರಿಕೆಟ್ ತಂಡ ಚಿನ್ನದ ಪದಕ ಗಳಿಸಿದೆ. ನಿಡಗುಂದಿಯ ಕ್ರಿಕೆಟ್ ತರಬೇತುದಾರ ಪವಾಡೆಪ್ಪ ಗುಂಡಿನಪಾಳ್ಯ ಅವರ ಮಾರ್ಗದರ್ಶನದಲ್ಲಿ ಈ ಕ್ರಿಕೆಟ್ ತಂಡ ಈ ಸಾಧನೆ ಮಾಡಿದೆ. ತಂಡದಲ್ಲಿ ನಿಡಗುಂದಿ ಪಟ್ಟಣದ ಯುವ ಪ್ರತಿಭೆಗಳಾದ ಶಿವಾನಂದ ಮಹಾದೇವಪ್ಪ ಗುಡಿಮನಿ, ಕಿರಣ ಮೋತಿಲಾಲ್ ಚವ್ಹಾಣ, ಸಂಪತ್ ಸಂಗಮೇಶ ಗೂಗಿಹಾಳ, ಪವನ ಕನಕಪ್ಪ ಪೂಜಾರಿ, ಪರಶುರಾಮ ಸುರೇಶ ಭಾಂಡವಳಕರ, ಖಲೀಲ್ ಬಾಬಾಜಾನ್ ಪೀರಜಾದೆ, ಅರವಿಂದ ಜವಾರಾಮ್ ಚೌಧರಿ, ಸುಮಿತ ಪರಶುರಾಮ ಕೇಳವಾಡಿ, ಸಮೀರ್ ಜಾವೀದ್ ಮನ್ನಿಕೇರಿ, ಅಕ್ಷಯಕುಮಾರ ಯಲಗೂರೇಶ, ಕಿರಣ ಚೌಧರಿ ಕ್ರಿಕೆಟ್ ತಂಡದಲ್ಲಿದ್ದರು. ಇವರೆಲ್ಲರ ಸಾಂಘಿಕ ಆಟದ ಪ್ರದರ್ಶನದಿಂದ ನಿಡಗುಂದಿ ಕ್ರಿಕೆಟ್ ತಂಡ ಪಂದ್ಯಾವಳಿಯಲ್ಲಿ ಮಿಂಚಿ ಪ್ರಶಸ್ತಿ ಪಡೆದಿದೆ.

Exit mobile version