ಉತ್ತರಪ್ರಭ
ಗದಗ:
ಯುವ ಬ್ರಿಗೆಡ್ ಕರ್ನಾಟಕ ಹಾಗೂ ಗದಗ ತಂಡದ ಸಹಯೋಗದೊಂದಿಗೆ 75ನೆಯ ಸ್ವಾತಂತ್ರ‍್ಯ ಸಂಗ್ರಾಮದ ನಿಮಿತ್ಯ ಸ್ವರಾಜ್ಯಕ್ಕೆ ಮುಕ್ಕಾಲು ನೂರು ಸಂಭ್ರಮಕ್ಕೆ ‘ಕನ್ನಡ ತೇರು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕರ್ನಾಟಕ ರಾಜ್ಯದ ಸ್ವಾತಂತ್ರ‍್ಯ ಹೋರಾಟಗಾರರು ಮತ್ತು ರಾಜ-ಮಹಾರಾಜರು ಹಾಗೂ ಜನಸಾಮಾನ್ಯರು ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದ ಸಾಧನೆಗಳ ಕುರಿತು ನಗರದ ಹಲವೆಡೆ ತೆರಿನ ಮುಖಾಂತರ ವೀಡಿಯೊ ಪ್ರದರ್ಶಿಸುವ ಮೂಲಕ ಸಂಭ್ರಮಿಸಿಲಾಯಿತು.


ದಿ. 8/7/2022 ರಂದು ಗದಗ ನಗರದಲ್ಲಿ ಶ್ರೀ ರಾಚೋಟೆಶ್ವರ ದೆವಸ್ತಾನ ದಿಂದ ತೋಂಟದಾರ್ಯ ಮಠದ ವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು. ದಿ. 9/7/2022 ರಂದು ಗದಗ ನಗರದ ಕೆ.ಎಸ್.ಎಸ್ ಕಾಲೇಜ್, ಮದರ ತೆರೆಸಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆಂಡ್ ಸೈನ್ಸ್ ಕಾಲೇಜ್, ಆರ್ಯಭಟ ಕಾಲೇಜ್ ಗದಗ, ಬಸವೇಶ್ವರ ಶಾಲೆ ಗದಗ, ಸರ್ಕಾರಿ ಪ್ರೌಢಶಾಲೆ ಗದಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಕೊನೆಯದಾಗಿ ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗದಲ್ಲಿ, ಭೈರನಹಟ್ಟಿಯ ಶ್ರೀ ಶಾಂತಲಿoಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ‘ಕನ್ನಡ ತೇರು’ ಕಾರ್ಯಕ್ರಮ ನಡೆಸಲಾಯಿತು.


ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ತಂಡದ ಗದಗ ಸಂಚಾಲಕರಾದ ವಿಜಯಕುಮಾರ ಎಸ್ ಎನ್, ಪ್ರಮುಖರಾದ ಸಂಜಯರೆಡ್ಡಿ, ರಾಚಣ್ಣ ಜಕ್ಕಲಿ, ಮಂಜುನಾಥ, ಕಪಿಲ, ರವೀಂದ್ರ, ದರ್ಶನ, ಗಿರೀಶ, ಬಸವರಾಜ, ಪ್ರಕಾಶ ಸೇರಿದಂತೆ ಕಾರ್ಯಕರ್ತರು ಹಾಗೂ ಎಲ್ಲ ಶಾಲಾ-ಕಾಲೇಜುಗಳ ಪ್ರಾಚಾರ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನ 07 ವಿದ್ಯಾರ್ಥಿಗಳು ಟಿಸಿಎಸ್ ಕಂಪನಿಗೆ ಆಯ್ಕೆ

ಗದಗ: ನಗರದ ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನ 07 ವಿದ್ಯಾರ್ಥಿಗಳು ಟಿಸಿಎಸ್ ಕಂಪನಿಗೆ ಆಯ್ಕೆಯಾಗಿದ್ದು. ಪ್ರತಿಷ್ಠಿತ ಬಹುರಾಷ್ಟಿಯ…

ದೇಶ ಸೇವೆಗೆ ಮುಂದಾದ ಯುವ ಪಡೆಗೆ ತರಬೇತಿ ಅತ್ಯಾವಶ್ಯ :ಜಿ ಎಸ್ ಪಾಟೀಲ

ಉತ್ತರ ಪ್ರಭ ಸುದ್ದಿರೋಣ : ತಾಲೂಕಿನ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಪುರ ಸಭೆ ಉಪಾಧ್ಯಕ್ಷ ಮಿಥುನ್ ಜಿ…

ಮೊರಾರ್ಜಿ ವಸತಿ ಶಾಲೆಯಲ್ಲಿ 10 ವಿದ್ಯಾರ್ಥಿಗಳಿಗೆ ಕೋವಿಡ್ ಧೃಡ

ಮುಳಗುಂದ : ಇಲ್ಲಿನ ಯಳವತ್ತಿ ರಸ್ತೆಗೆ ಹೊಂದಿಕೊಂಡಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10 ವಿದ್ಯಾರ್ಥಿಗಳು…

ಲಕ್ಷ್ಮೇಶ್ವರದಲ್ಲಿ ಆಹಾರ ಕಿಟ್ ವಿತರಿಸಿದ ಶಾಸಕ ಲಮಾಣಿ

ಲಕ್ಷ್ಮೇಶ್ವರ: ಶಾಸಕ ರಾಮಣ್ಣ ಲಮಾಣಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರು ಬೇಗ ಗುಣಮುಖರಾಗಲೆಂದು ಪೌಷ್ಟಿಕ ಆಹಾರ ಕಿಟ್ ಹಾಗೂ ಮಾಸ್ಕ್ ವಿತರಣೆ ಮಾಡಿದರು.