ಉತ್ತರಪ್ರಭ ಸುದ್ದಿ

ನರೇಗಲ್: ಸಮೀಪದ ಕಳಕಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಯ ನೀರು 50ಕ್ಕೂ ಹೆಚ್ಚಿನ ಮನೆಗಳಿಗೆ ನುಗ್ಗಿದೆ. ಗ್ರಾಮದಲ್ಲಿ ಗುತ್ತಿಗೆದಾರರು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಚರಂಡಿ ಕಾರಣ ಮಳೆ ನೀರು ಮನೆಗಳಿಗೆ ನುಗ್ಗಿ ಹಾನಿ ಮಾಡಿದೆ ಎಂದು ಸ್ಥಳೀಯರಾದ ರಮಜಾನಬಿ ಗಾಣದ, ಯಲ್ಲಪ್ಪ ಶಿರಗುಂಪಿ, ಪಡಿಯವ್ವ ಮಾದರ, ಬನ್ನೆಪ್ಪ ಕಟ್ಟಿಮನಿ, ಯಮನೂರಸಾಬ ಮಾರನಬಸರಿ ಆರೋಪ ಮಾಡಿದರು.

ಗ್ರಾಮ ಪಂಚಾಯ್ತಿಯ ಸದಸ್ಯರು ಕಮಿಷನ್ ಆಸೆಗೆ ಬೇಕಾಬಿಟ್ಟಿ ಚರಂಡಿ ನಿರ್ಮಾಣ ಮಾಡಿರುವ ಕಾರಣ ಜುಮಾ ಮಸೀದಿ ಯಿಂದ ಕನಕದಾಸರ ಮೂರ್ತಿವರೆಗಿನ ಎಲ್ಲಾ ಮನೆಗಳಿಗೆ ಮಳೆ ನೀರು ನುಗ್ಗಿದೆ. ಚರಂಡಿ ತೆರುವು ಮಾಡುವಂತೆ ಗ್ರಾಮದ ಅರ್ಧಕ್ಕೂ ಹೆಚ್ಚು ಜನರು ಆಗ್ರಹ ಮಾಡಿದ ಕಾರಣ ಸಿಸಿ ರಸ್ತೆ ಇಂದಿಗೂ ನಿರ್ಮಾಣ ಆಗಿಲ್ಲ ಆದರೆ ಚರಂಡಿ ಮರು ನಿರ್ಮಾಣ ಮಾಡಲು ಮುಂದಾಗದೇ ಇರುವ ಕಾರಣಕ್ಕೆ ಗ್ರಾಮಸ್ಥರ ಮನೆಗಳು ಮಳೆ ನೀರಿನಲ್ಲಿ ನಿಂತಿವೆ ಎಂದು ಲಾಡಸಾಬ ತಿಮ್ಮನೆಟ್ಟಿ, ಮುಸ್ತುಸಾಬ ದೊಡ್ಡಮನಿ, ಅಂದಪ್ಪ ಶಿರಹಟ್ಟಿ ಆರೋಪ ಮಾಡಿದರು.

ಮುಂಗಾರು ಬಿತ್ತನೆಗಾಗಿ ತಂದಿದ್ದ ಗೊಬ್ಬರ, ಬೀಜ ಹಾಗೂ ಸಂಗ್ರಹಿಸಿ ಇಡಲಾಗಿದ್ದ ಬಿಳಿ ಜೋಳ, ಗೋಧಿ, ಮನೆಯ ದಿನಿಸಿ, ಬಟ್ಟೆ ಎಲ್ಲವೂ ಮಳೆ ನೀರಿನಲ್ಲಿ ಒದ್ದೆಯಾಗಿ ಹಾನಿಯಾಗಿದೆ ಎಂದು ರೈತ ದೇವಪ್ಪ ಹಳ್ಳಿ, ಕಳಕಪ್ಪ ಬೂದಿಹಾಳ, ಬಾಬುಸಾಬ ದೊಡ್ಡಮನಿ ಹೇಳಿದರು.

Leave a Reply

Your email address will not be published. Required fields are marked *

You May Also Like

ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ ಬಿಜೆಪಿ!

ಬೆಂಗಳೂರು : ಉಪ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾತಿನ ಸಮರ ಜೋರಾಗಿದೆ.

ಡಿಪ್ಲೋಮಾ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಇದೇ ತಿಂಗಳ 15-07-2020 ರಿಂದ 05-08-2020 ರವರೆಗೆ ನಿಗದಿ ಪಡಿಸಲಾಗಿದ್ದ ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆಗಳನ್ನು…

ಜನ ಮೈಮರೆಯದೆ ಮಾರ್ಗಸೂಚಿ ಪಾಲಿಸಿ; ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು: ಮೇ 30-ಕೋವಿಡ್ ಪಾಸಿಟೀವ್ ಪ್ರಮಾಣ ಕಡಿಮೆಯಾಗಿದೆ ಎಂದು ಜನರು ಮೈಮರೆಯದೆ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಲಹೆ ಮಾಡಿದ್ದಾರೆ.

ರೈತ ಸಂಘದ ನಿಡಗುಂದಿ ನಗರ ಘಟಕದ ಉದ್ಘಾಟನೆ
ರೈತ ಸಂಘ ರೈತ ಸ್ನೇಹಿ ಕಾರ್ಯ ಗೈಯಲಿ-ಶಿವಾನಂದ ಅವಟಿ

ಉತ್ತರಪ್ರಭ ಸುದ್ದಿನಿಡಗುಂದಿ: ಯಾವುದೇ ಸರಕಾರ ಇರಲಿ ಸದಾ ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸಿ ರೈತರ ಸಮಸ್ಯೆ ನಿವಾರಿಸಲು…