ಉತ್ತರಪ್ರಭ ಸುದ್ದಿ

ನರೇಗಲ್: ಸಮೀಪದ ಕಳಕಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಯ ನೀರು 50ಕ್ಕೂ ಹೆಚ್ಚಿನ ಮನೆಗಳಿಗೆ ನುಗ್ಗಿದೆ. ಗ್ರಾಮದಲ್ಲಿ ಗುತ್ತಿಗೆದಾರರು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಚರಂಡಿ ಕಾರಣ ಮಳೆ ನೀರು ಮನೆಗಳಿಗೆ ನುಗ್ಗಿ ಹಾನಿ ಮಾಡಿದೆ ಎಂದು ಸ್ಥಳೀಯರಾದ ರಮಜಾನಬಿ ಗಾಣದ, ಯಲ್ಲಪ್ಪ ಶಿರಗುಂಪಿ, ಪಡಿಯವ್ವ ಮಾದರ, ಬನ್ನೆಪ್ಪ ಕಟ್ಟಿಮನಿ, ಯಮನೂರಸಾಬ ಮಾರನಬಸರಿ ಆರೋಪ ಮಾಡಿದರು.

ಗ್ರಾಮ ಪಂಚಾಯ್ತಿಯ ಸದಸ್ಯರು ಕಮಿಷನ್ ಆಸೆಗೆ ಬೇಕಾಬಿಟ್ಟಿ ಚರಂಡಿ ನಿರ್ಮಾಣ ಮಾಡಿರುವ ಕಾರಣ ಜುಮಾ ಮಸೀದಿ ಯಿಂದ ಕನಕದಾಸರ ಮೂರ್ತಿವರೆಗಿನ ಎಲ್ಲಾ ಮನೆಗಳಿಗೆ ಮಳೆ ನೀರು ನುಗ್ಗಿದೆ. ಚರಂಡಿ ತೆರುವು ಮಾಡುವಂತೆ ಗ್ರಾಮದ ಅರ್ಧಕ್ಕೂ ಹೆಚ್ಚು ಜನರು ಆಗ್ರಹ ಮಾಡಿದ ಕಾರಣ ಸಿಸಿ ರಸ್ತೆ ಇಂದಿಗೂ ನಿರ್ಮಾಣ ಆಗಿಲ್ಲ ಆದರೆ ಚರಂಡಿ ಮರು ನಿರ್ಮಾಣ ಮಾಡಲು ಮುಂದಾಗದೇ ಇರುವ ಕಾರಣಕ್ಕೆ ಗ್ರಾಮಸ್ಥರ ಮನೆಗಳು ಮಳೆ ನೀರಿನಲ್ಲಿ ನಿಂತಿವೆ ಎಂದು ಲಾಡಸಾಬ ತಿಮ್ಮನೆಟ್ಟಿ, ಮುಸ್ತುಸಾಬ ದೊಡ್ಡಮನಿ, ಅಂದಪ್ಪ ಶಿರಹಟ್ಟಿ ಆರೋಪ ಮಾಡಿದರು.

ಮುಂಗಾರು ಬಿತ್ತನೆಗಾಗಿ ತಂದಿದ್ದ ಗೊಬ್ಬರ, ಬೀಜ ಹಾಗೂ ಸಂಗ್ರಹಿಸಿ ಇಡಲಾಗಿದ್ದ ಬಿಳಿ ಜೋಳ, ಗೋಧಿ, ಮನೆಯ ದಿನಿಸಿ, ಬಟ್ಟೆ ಎಲ್ಲವೂ ಮಳೆ ನೀರಿನಲ್ಲಿ ಒದ್ದೆಯಾಗಿ ಹಾನಿಯಾಗಿದೆ ಎಂದು ರೈತ ದೇವಪ್ಪ ಹಳ್ಳಿ, ಕಳಕಪ್ಪ ಬೂದಿಹಾಳ, ಬಾಬುಸಾಬ ದೊಡ್ಡಮನಿ ಹೇಳಿದರು.

Leave a Reply

Your email address will not be published. Required fields are marked *

You May Also Like

ನಟ ಚಿರಂಜೀವಿಗೆ ಕೊರೊನಾ ಪಾಸಿಟಿವ್!

ಹೈದರಾಬಾದ್ : ನಟ ಚಿರಂಜೀವಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಕೋವಿಡ್ ರೂಪಾಂತರಿ ಸೋಂಕಿನ ಬಗ್ಗೆ ಸಚಿವ ಸುಧಾಕರ್ ನೀಡಿದ ಮಾಹಿತಿ

ಬೆಂಗಳೂರು: ಕೋವಿಡ್‌ ರೂಪಾಂತರಿ ಸೋಂಕಿಗೆ ಇದು ಶೇ.70 ರಷ್ಟು ಹರಡುವ ಗುಣವಿದೆ. ಆದರೆ ಈ ಸೋಂಕಿನ ತೀವ್ರತೆ ಕಡಿಮೆ ಇದೆ. ಹೀಗಿದ್ದರೂ ಇದನ್ನು ನಿಯಂತ್ರಣಕ್ಕೆ ತರಲು ಆದ್ಯತೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುದಾಕರ್‌ ತಿಳಿಸಿದರು.

ಕಲಾ ಕುಂಚದಲ್ಲರಳಿದ ನಿತ್ಯೋತ್ಸವ ಕವಿ

ಧಾರವಾಡದ ಕೆಲಗೇರಿಯ ಕಲಾವಿದ ಮಂಜುನಾಥ ಹಿರೇಮಠ ಅವರ ಕಲಾ ಕುಂಚದಲ್ಲಿ ಅರಳಿದ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ ಅಹ್ಮದ್. ನಿತ್ಯೋತ್ಸವ ಕವಿಯ ಚಿತ್ರವನ್ನು ಬಿಡಿಸುವ ಮೂಲಕ ಮಂಜುನಾಥ್ ನಿಸಾರ್ ಅಹ್ಮದ್ ಅವರಿಗೆ ಶೃದ್ಧಾಂಜಲಿ ಸಲ್ಲಿಸಿದರು.

ಗಳಿಕೆ ರಜೆ ನಗದಿಕರಣ ರದ್ದು!

ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರದ್ದುಗೊಳಿಸುವ ಮೂಲಕ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಕೋವಿಡ್ ಹಿನ್ನೆಲೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.