ಉತ್ತರಪ್ರಭ
ಕಾರಟಗಿ: ಎಸ್ ಎಸ್ ಕಲಾ ಸಂಗಮ ಟ್ರಸ್ಟ್ ( ರಿ ) ಬೆಂಗಳೂರು ವತಿಯಿಂದ 2022 – 23 ನೇ ಸಾಲಿನಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜೂನ್-25ರಂದು ಆಯೋಜಿಸಲಾಗಿದೆ.
ಕನ್ನಡ ಯುವ ರಾಜರತ್ನ ಪುನೀತ್ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದ ನಿಮಿತ್ಯ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ಯುವ ಪೀಳಿಗೆ ಸಾಧಕರನ್ನು ಪರಿಗಣಿಸಿ ನಾಡಿನ ಗೀತಗಾಯನ ರಸಮಂಜರಿ ಹಾಗೂ ಕಲೆ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ವಿನಯವಾಣಿ ಪತ್ರಿಕೆ ಕಾರಟಗಿಯ ತಾಲೂಕ ವರದಿಗಾರರಾದ ಕೆ.ರಮೇಶ, ಮತ್ತು ಬೇವಿನಾಳ ಗ್ರಾಮ ಪಂಚಾಯಿತಿ ಪಿ.ಡಿ.ಓ ಸೈಯದ್ ಜಮೀರ್ ಹಮ್ಮದ್. ಬೆನ್ನೂರು ಗ್ರಾಮಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಕರೀಂ ಸಾಬ್, ಸಮಾಜಸೇವೆ ಮಲ್ಲಿಕಾರ್ಜುನ ಗಿಣಿವಾರ ಕಾರಟಗಿ ಇವರನ್ನು ಗುರುತಿಸಿ ಯುವರತ್ನ ಅಪ್ಪು ರಾಜ್ಯಪ್ರಶಸ್ತಿ ಆಯ್ಕೆ ಮಾಡಲಾಗಿದ್ದು ಜೂನ್ 25ರಂದು ಬೆಂಗಳೂರು ಎ.ವಿ.ವರದಚಾರ್ ಮೊಮೋರಿಯಲ್ ಹಾರ್ಟ ಮಲ್ಲೇಶ್ವರಂ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಎಸ್ ಎಸ್ ಕಲಸಂಗಮ ಟ್ರಸ್ಟ್ ( ರಿ ) ಅಧ್ಯಕ್ಷ ಶಿವಕುಮಾರ್ ಬಿಕೆ ಪ್ರಕಟಣೆಯಲ್ಲಿ ತಿಳಿಸಿದ್ದರು.