ಉತ್ತರಪ್ರಭ ಸುದ್ದಿ

ನರೇಗಲ್: ಸಮೀಪದ ಕಳಕಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಯ ನೀರು 50ಕ್ಕೂ ಹೆಚ್ಚಿನ ಮನೆಗಳಿಗೆ ನುಗ್ಗಿದೆ. ಗ್ರಾಮದಲ್ಲಿ ಗುತ್ತಿಗೆದಾರರು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಚರಂಡಿ ಕಾರಣ ಮಳೆ ನೀರು ಮನೆಗಳಿಗೆ ನುಗ್ಗಿ ಹಾನಿ ಮಾಡಿದೆ ಎಂದು ಸ್ಥಳೀಯರಾದ ರಮಜಾನಬಿ ಗಾಣದ, ಯಲ್ಲಪ್ಪ ಶಿರಗುಂಪಿ, ಪಡಿಯವ್ವ ಮಾದರ, ಬನ್ನೆಪ್ಪ ಕಟ್ಟಿಮನಿ, ಯಮನೂರಸಾಬ ಮಾರನಬಸರಿ ಆರೋಪ ಮಾಡಿದರು.

ಗ್ರಾಮ ಪಂಚಾಯ್ತಿಯ ಸದಸ್ಯರು ಕಮಿಷನ್ ಆಸೆಗೆ ಬೇಕಾಬಿಟ್ಟಿ ಚರಂಡಿ ನಿರ್ಮಾಣ ಮಾಡಿರುವ ಕಾರಣ ಜುಮಾ ಮಸೀದಿ ಯಿಂದ ಕನಕದಾಸರ ಮೂರ್ತಿವರೆಗಿನ ಎಲ್ಲಾ ಮನೆಗಳಿಗೆ ಮಳೆ ನೀರು ನುಗ್ಗಿದೆ. ಚರಂಡಿ ತೆರುವು ಮಾಡುವಂತೆ ಗ್ರಾಮದ ಅರ್ಧಕ್ಕೂ ಹೆಚ್ಚು ಜನರು ಆಗ್ರಹ ಮಾಡಿದ ಕಾರಣ ಸಿಸಿ ರಸ್ತೆ ಇಂದಿಗೂ ನಿರ್ಮಾಣ ಆಗಿಲ್ಲ ಆದರೆ ಚರಂಡಿ ಮರು ನಿರ್ಮಾಣ ಮಾಡಲು ಮುಂದಾಗದೇ ಇರುವ ಕಾರಣಕ್ಕೆ ಗ್ರಾಮಸ್ಥರ ಮನೆಗಳು ಮಳೆ ನೀರಿನಲ್ಲಿ ನಿಂತಿವೆ ಎಂದು ಲಾಡಸಾಬ ತಿಮ್ಮನೆಟ್ಟಿ, ಮುಸ್ತುಸಾಬ ದೊಡ್ಡಮನಿ, ಅಂದಪ್ಪ ಶಿರಹಟ್ಟಿ ಆರೋಪ ಮಾಡಿದರು.

ಮುಂಗಾರು ಬಿತ್ತನೆಗಾಗಿ ತಂದಿದ್ದ ಗೊಬ್ಬರ, ಬೀಜ ಹಾಗೂ ಸಂಗ್ರಹಿಸಿ ಇಡಲಾಗಿದ್ದ ಬಿಳಿ ಜೋಳ, ಗೋಧಿ, ಮನೆಯ ದಿನಿಸಿ, ಬಟ್ಟೆ ಎಲ್ಲವೂ ಮಳೆ ನೀರಿನಲ್ಲಿ ಒದ್ದೆಯಾಗಿ ಹಾನಿಯಾಗಿದೆ ಎಂದು ರೈತ ದೇವಪ್ಪ ಹಳ್ಳಿ, ಕಳಕಪ್ಪ ಬೂದಿಹಾಳ, ಬಾಬುಸಾಬ ದೊಡ್ಡಮನಿ ಹೇಳಿದರು.

Leave a Reply

Your email address will not be published. Required fields are marked *

You May Also Like

Казино Leonbets играть онлайн бесплатно, официальный сайт, скачать клиент

Как скачать приложение Leonbets на Айфон iOS бесплатно Есть леон ру скачать…

ಗದಗನಲ್ಲಿ ಬೆಂಕಿಗೆ ಆಹುತಿಯಾದ ಸ್ಕೂಟಿ ಪ್ಲೇಜರ್

ನಗರದ ಗಂಗಾಪೂರ ಪೇಟೆಯ ವೀರನಾರಾಯಣ ದೇವಸ್ಥಾನ ಬಳಿ ನಿಲ್ಲಿಸಿದ ಸ್ಕೂಟಿ ಪ್ಲೇಜರ್ ಆಕಸ್ಮಿಕ ಬೆಂಕಿಗೆ ಹೊತ್ತು ಉರಿಯಿತು.

ರೈತರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರದ ಕಣ್ಣು, ಹೃದಯ ಇಲ್ಲ : ಡಿಕೆಶಿ ಕಿಡಿ

ಧಾರವಾಡ : ರಾಜ್ಯ ಬಿಜೆಪಿ ಸರ್ಕಾರ ನೀಡಿದ ಪರಿಹಾರ ಇಲ್ಲಿಯವರೆಗೂ ರೈತರಿಗೆ ಸಿಕ್ಕೇಯಿಲ್ಲ ,ರೈತರಿಗೆ ತರಕಾರಿ ಮಾರಾಟ ಮಾಡಲು ಕೇವಲ ಎರಡೂ ಗಂಟೆ ಅವಕಾಶ ನೀಡುವ ಈ ಸರ್ಕಾರ ,ಆದರೆ ಮದ್ಯ ಮಾರಾಟ ಮಾಡಲು ಸಂಜೆ 4 ಗಂಟೆಯವರೆಗೂ ಅವಕಾಶ ನೀಡಿದೆ. ಈ ಸರ್ಕಾರಕ್ಕೆ ನಿಮಗೆ ಕಣ್ಣು,ಹೃದಯ ಎಂಬುದು ಇದೆಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಕಿಡಿ ಕಾರಿದರು .

ಗದಗ ಜಿಲ್ಲೆಯಲ್ಲಿಂದು ಮತ್ತೆ 2 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು ಮತ್ತೆ 2 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ…