ಮುಳಗುಂದ : ಶರಣ ಸಂಸ್ಕೃತಿಯ ಪಾವನ ತಾಣ ಮುಳಗುಂದದ ಕಾರಣಿಕ ಶಿಶು ಬಾಲಲೀಲಾ ಮಹಾಂತ ಶಿವಯೋಗಿಗಳ 162 ನೇ ಸ್ಮರಣೋತ್ಸವದಂಗವಾಗಿ ಇದೇ ಫೆ 24 ರಿಂದ 26 ವರೆಗೆ  ಗವಿಮಠಾಧ್ಯಕ್ಷರಾದ ಮಲ್ಲಿಕಾರ್ಜುನ ಶ್ರೀಗಳ ನೇತ್ರತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ, ಎಂದು ಜಾತ್ರಾ ಸಮಿತಿ ಅಧ್ಯಕ್ಷ ಸಂಜಯ ನೀಲಗುಂದ ಹೇಳಿದರು.

     ಈ ಕುರಿತು ಶ್ರೀಮಠದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ಸಂಕಷ್ಟದ ನಡುವೆಯೂ ಭಕ್ತರ ಒತ್ತಾಸೆಯಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಫೆ. 24ರಂದು ಬೆ.8-30ಕ್ಕೆ ಜನವಾಡ ಅಲ್ಲಮಪ್ರಭುದೇವರ ಆಶ್ರಮದ ಮಲ್ಲಿಕಾರ್ಜುನ ಸ್ವಾಮಿಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ಶ್ರೀಗಳು ಸಮ್ಮುಖ ವಹಿಸುವರು.

     ಫೆ. 25ರಂದು ಮಧ್ಯಾಹ್ನ 1 ಗಂಟೆಗೆ ಮಹಾದಾಸೋಹ, ಸಾಯಂಕಾಲ 5 ಘಂಟೆಗೆ ಸಕಲ ವಾಧ್ಯ ಮೇಳಗಳೊಂದಿಗೆ ಬಾಲಲೀಲಾ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ವಿವಿಧ ಮಠಾಧೀಶರ ಸಮ್ಮುಖದಲ್ಲಿ ನಡೆಯಲಿದೆ.

     ಸಾಯಂಕಾಲ 7 ಘಂಟೆಗೆ ಜಾತ್ರಾ ಮಹೋತ್ಸವದ ವಿಶೇಷ ಕಾರ್ಯಕ್ರಮದ ಸಾನಿಧ್ಯವನ್ನು ಚಿತ್ರದುರ್ಗ ಬೃಹನ್ಮಠ, ಬಸವಕೇಂದ್ರದ ಡಾ. ಶಿವಮೂರ್ತಿ ಮುರುಘಾ ಶರಣರು, ಉಪ್ಪಿನ ಬೆಟಗೇರಿ ವಿರಕ್ತ ಮಠದ ಕುಮಾರ ವಿರುಪಾಕ್ಷ ಸ್ವಾಮಿಜಿ, ಸಮ್ಮುಖವನ್ನು ಯರನಾಳ ವಿರಕ್ತ ಮಠದ ಸಂಗನಬಸವ ಸ್ವಾಮಿಜಿ, ಅಧ್ಯಕ್ಷತೆಯನ್ನು ಸಿ.ಬಿ. ಬಡ್ನಿ ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಎಚ್.ಕೆ. ಪಾಟೀಲ ನೆರವೇರಿಸುವರು. ಅತಿಥಿಗಳಾಗಿ ಶಿವಕುಮಾರ ಉದಾಸಿ, ಆರ್.ಎನ್. ದೇಶಪಾಂಡೆ ಭಾಗವಹಿಸುವರು. ಶರಣರು ಕಟ್ಟಿಕೊಟ್ಟ ಬದುಕು ವಿಷಯ ಕುರಿತು ವಾಯ್.ಎಂ. ಯಾಕೊಳ್ಳಿ ಅವರಿಂದ ಉಪನ್ಯಾಸ, ರೇವಣ ಸಿದ್ಧಯ್ಯ ಮರಿದೇವರಮಠ, ಜಯಮ್ಮ ದಾನಮ್ಮನವರ ಅವರಿಂದ ವಚನ ಸಂಗೀತ ಜರುಗುವದು.

     ಫೆ. 26ರಂದು ಸಾಯಂಕಾಲ 5 ಘಂಟೆಗೆ ಮಲ್ಲಿಕಾರ್ಜುನ ಶ್ರೀಗಳಿಂದ ಕಡುಬಿನ ಕಾಳಗ, ಸಾಯಂಕಾಲ 7 ಘಂಟೆಗೆ ಜಾತ್ರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಸಾನಿಧ್ಯವನ್ನು ಶಿರಹಟ್ಟಿ ಸಂಸ್ಥಾನಮಠದ ಜ. ಫಕೀರಸಿದ್ಧರಾಮ ಸ್ವಾಮಿಜಿ, ಅತಿಥಿಗಳಾಗಿ ಎಸ್.ವ್ಹಿ. ಸಂಕನೂರ, ಡಿ.ಆರ್. ಪಾಟೀಲ, ಎಸ್.ಎಂ. ನೀಲಗುಂದ, ಎಂ.ಡಿ. ಬಟ್ಟೂರ ಭಾಗವಹಿಸುವರು.

     ನೀಲಗುಂದ ಜೈಭೀಮ ಗೀ ಗೀ ಜಾನಪದ ಮೇಳದಿಂದ ಜಾನಪದ ಕಾರ್ಯಕ್ರಮ, ಮುತ್ತು ನಾಯ್ಕರ ಕಲಾತಂಡದಿಂದ ರಸಮಂಜರಿ, ಜೀವನಸಾಬ ಬಿನ್ನಾಳ, ಶರಣು ಕುರ್ನಾಳ ಅವರಿಂದ ಹಾಸ್ಯ, ಖಾಸೀಮ ಅಲಿ, ಮನು ಪಾಟೀಲ ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗುವವು ಎಂದು ತಿಳಿಸಿದರು.

     ಈ ಸಂದರ್ಭದಲ್ಲಿ ಡಾ. ಎಸ್.ಸಿ. ಚವಡಿ, ಷಣ್ಮುಖಪ್ಪ ಬಡ್ನಿ, ರಾಮಣ್ಣಾ ಕಮಾಜಿ ಬಸವರಾಜ ಹಾರೋಗೇರಿ, ಡಿ.ಎಸ್. ನೀಲಗುಂದ, ಡಿ.ಎಂ ನಿಂಗಪ್ಪನವರ,ನಾಗಪ್ಪ ಬಾಳಿಕಾಯಿ, ಗುರುಶಾಂತ ಮಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಕ್ವಾರಂಟೈನ್ ನಲ್ಲಿದ್ದ ಮೂವರು ಪರಾರಿ..!

ಕ್ವಾರೆಂಟೈನಲ್ಲಿದ್ದ ಮೂವರು ಪರಾರಿಯಾದ ಘಟನೆ ಮಸ್ಕಿಯಲ್ಲಿ ನಡೆದಿದೆ. ಇಲ್ಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರೋನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ವಾರಂಟೈನ್ ಮಾಡಲಾಗಿದ್ದವರ ಪೈಕಿ ಮೂರು ಜನ ತಪ್ಪಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿಂದು ನಿಲ್ಲದ ಕೊರೊನಾ ಸೋಂಕಿನ ಸ್ಪೋಟ : ಇಂದು 1925 ಪಾಸಿಟಿವ್!

ಬೆಂಗಳೂರು: ಸತತ 3 ದಿನಗಳಿಂದ 1500ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳನ್ನು ಕಾಣತ್ತಿರುವ ರಾಜ್ಯದಲ್ಲಿ ಇಂದು 1,925…

ಮೇ.31 ರಂದು ರೋಣದಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ

ರೋಣ: ರಾಜೀವ್ ಗಾಂಧಿ ಆಯುರ್ವೇದಿಕ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಲಾಗುವದು ಎಂದು ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎಸ್.ಪಾಟೀಲ ತಿಳಿಸಿದರು.