ಲಕ್ಷ್ಮೇಶ್ವರ:

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರವೇ ಸ್ವಾಭಿಮಾನಿ ಬಣದಿಂದ ಉಪ ತಹಸೀಲ್ದಾರ್ ಮಂಜುನಾಥ ದಾಸಪ್ಪನವರಿಗೆ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ ಅಧ್ಯಕ್ಷ ರವಿ ಲಿಂಗಶೆಟ್ಟಿ ಹಾಗೂ ಗೌರವಾಧ್ಯಕ್ಷ ಪುಲಿಕೆಶಿ ಬಟ್ಟೂರ ರಾಜ್ಯದಲ್ಲಿ ರೈತರಿಗೆ ಅನುಕೂಲವಾಗುವಂತ ಯೋಜನೆಯನ್ನು ಜಾರಿಗೆ ತರಬೇಕು ರೈತರಿಗೆ ಯಾವುದೇ ವೇತನವಿರುವುದಿಲ್ಲ ನಿಸರ್ಗದ ಮೇಲೆ ರೈತರ ಬದುಕು ಇದೆ ಹಾಗಾದರೆ ರೈತರಿಗೆ ಜೀವನ ನಿರ್ವಹಣೆಗೆ ಮಾಸಿಕ ವೇತನ ವನ್ನು ಜಾರಿಗೆ ತರಬೇಕು ಮಾಸಿಕ ವೇತನ ಅದು ಅವರ ಕುಟುಂಬದ ಖರ್ಚನ್ನು ನಿಗಿಸುವಂತ ವೇತನವಾಗಬೇಕು ರೈತರ ಆರೋಗ್ಯಕ್ಕೆ ಮತ್ತು ಅವರ ಕುಟುಂಬಕ್ಕೆ ಪ್ರಿಯಾಗಿ ವೈದ್ಯಕಿಯ ವೆಚ್ಚವನ್ನು ಸರಕಾರ ಬರಿಸಬೇಕು ಬರಿ ಮಾತಲ್ಲಿ ರೈತರು ದೇಶದ ಬೆನ್ನೆಲುಬು ಅದು ಅಲ್ಲದೆ ಒಕ್ಕಲಿಗ ಒಕ್ಕಿದರೆ ಉಕ್ಕುವುದು ಜಗವೇ ಒಕ್ಕಲಿಗನೋಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂದು ಹೇಳುತ್ತೀರಿ ಇದು ಧ್ಯಯವಾಕ್ಯವಾಗಿದೆ ಹೊರತು ರೈತರ ಬೆನ್ನುಲಬು ಮುರಿಯುವಂತ ಪರಸ್ಥಿತಿ ರೈತರದಾಗಿದೆ ಮುಂದೆ ಎಲ್ಲರೂ ರೈತರಾಗದಿದ್ದರೆ ಹಸಿದ ಹೊಟ್ಟೆಗೆ ತಣ್ಣೀರ ಗತಿಯಾದಿತು ಎಂದು ಹೇಳುತ್ತಾ ರೈತರ ಬಾಳು ದಿನದಿಂದ ದಿನದಿಂದ ಹಾಳಾಗುತ್ತಿದ್ದು ರೈತರ ಕೈಯಲ್ಲಿ ಹಣವಿಲ್ಲದೆ ಪರದಾಡುವ ಪರಸ್ಥಿತಿ ಬಂದಿದೆ ರೈತರ ಆರೋಗ್ಯದಲ್ಲಿ ಏರುಪೆರುಗಳಾದರೆ ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಆಗದಂತಹ ಸನ್ನಿವೇಶವಿದ್ದು ಹಿಂದೆ ರೈತರಿಗೆ ಅನುಕೂಲವಾಗಲು ಅವರಿಗೆ ಯಶಶ್ವಿನಿ ಯೋಜನೆಯು ಇತ್ತು ಅದನ್ನು ರದ್ದು ಪಡಿಸಿದ್ದರಿಂದ ರೈತರ ಕುಟುಂಬಗಳಿಗೆ ಅನ್ಯಾಯವಾಗಿದೆ ಯಶಶ್ವಿನಿ ಯೋಜನೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಹಾಗೂ ದೊಡ್ಡ ಕಾಯಿಲೆಗಳಿಗೆ ವಿಮಾ ದೊರೆಯತಿತ್ತು ಇದರಿಂದ ರೈತರ ಹಣ ಉಳಿಯುತ್ತಿತ್ತು ಯೋಜನೆ ಪುನಃ ಜಾರಿಗೊಳಿಸಿ ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಹೇಳಿದರು
. ಈ ಸಂದರ್ಭದಲ್ಲಿ ತಾಲೂಕ ಉಪಾಧ್ಯಕ್ಷ ಲಂಕೇಪ್ಪ ಶೇರಸೂರಿ, ಯುವಘಟಕ ಅಧ್ಯಕ್ಷ ಪ್ರದೀಪ ಜನಿವಾರದ, ಶಿವಣ್ಣ ಗಿಡಿಬಿಡಿ, ಭೀಮಣ್ಣ ಶಿಗ್ಲೆಪ್ಪನವರ, ಸಿ ಆರ್, ಚಾವಡಿ, ಮಹಾಂತೇಶ ಕಂಡೊಜಿ,ಬೀರಪ್ಪ ಪೂಜಾರ ಮಂಜು ಕಡ್ಡಿಪೂಜಾರ,ತಾಲೂಕ ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ ಬಡಿಗೇರ, ಪುಷ್ಪ ಅಣ್ಣಿಗೇರಿ, ಸಾವಿತ್ರಿ ಕುರಿ, ಸವಿತಾ ಬಾಲೆಹೊಸೂರ,ರಾಜೇಶ್ವರಿ ಮುಂಗೋಡಿ ಕಾರ್ಯಕರ್ತರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You May Also Like

ವಿಪ ಸದಸ್ಯ ಪ್ರಸನ್ನಕುಮಾರ್ ಅವರ ಪುತ್ರ ನಿಧನ!

ಶಿವಮೊಗ್ಗ : ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರ ಪುತ್ರ ಸುಹಾಸ್ (31) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಇಂದು ಆರ್ಟ್ ಅಡ್ಡಾ ಉದ್ಘಾಟನೆ

ನಗರದ ಹಾಕಿ ಗ್ರೌಂಡ ಹತ್ತಿರ, ಎಸ್.ಎಂ.ಕೃಷ್ಣ ನಗರ ರಸ್ತೆಯ ಬಳಿ ಮಾ.6 ರಂದು ಶನಿವಾರ ಸಂಜೆ 6-30ಕ್ಕೆ ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ವತಿಯಿಂದ ಆರ್ಟ್ ಅಡ್ಡಾ ಸಭಾಭವನ ಉದ್ಘಾಟನೆ ಹಾಗೂ ಸಂಧ್ಯಾ ಸುರಾಗ ಕಾರ್ಯಕ್ರಮ ನೆರವೇರುವುದು.

ಗದಗ ಜಿಲ್ಲೆಯಲ್ಲಿಂದು ಅಂತರ್ ಜಿಲ್ಲಾ ಪ್ರವಾಸದಿಂದ ಹೆಚ್ಚಿನ ಸೋಂಕು: ಯಾವ ಊರಲ್ಲಿ ಎಷ್ಟು?

ಗದಗ ಜಿಲ್ಲೆಯಲ್ಲಿ ಇಂದು ಪತ್ತೆಯಾದ ಸೋಂಕಿತರಲ್ಲಿ ಜಿಲ್ಲೆಯ ಯಾವ ತಾಲೂಕಿನಲ್ಲಿ ಸೋಂಕಿತರು ಇಂದು ಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ..

ಗುರುಪೂರ್ಣಿಮೆ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !

  ಗುರುಗಳ ವೈಶಿಷ್ಟ್ಯಗಳು  ಶಿಷ್ಯನಿಗೆ ಭಗವಂತನ ಅಸ್ತಿತ್ವದ ಮನವರಿಕೆ ಮಾಡಿಕೊಟ್ಟು ಈಶ್ವರಪ್ರಾಪ್ತಿ ಮಾಡಿಸಿಕೊಡುವುದು: ಹೇಗೆ ಅಮಾವಾಸ್ಯೆಯಂದು…