ಗದಗ: ಜಿಲ್ಲೆಯಲ್ಲಿ ರವಿವಾರ ದಿ. 12 ರಂದು 13 ಜನರಿಗೆ ಕೊವಿಡ್-19 ಸೋಂಕು ದೃಢ ಪಟ್ಟಿದೆ. ಹಾವೇರಿ ಜಿಲ್ಲೆ ಪ್ರವಾಸದ ಹಿನ್ನಲೆಯುಳ್ಳ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿ 37 ವರ್ಷದ ಪುರುಷ      (ಪಿ-36323) ಸೋಂಕು ದೃಢಪಟ್ಟಿರುತ್ತದೆ.

ಲಕ್ಷ್ಮೇಶ್ವರ ನಗರದ ದಾಸರ ಓಣಿ ನಿವಾಸಿ 24 ವರ್ಷದ ಮಹಿಳೆ ಪಿ-28940 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ ನಿವಾಸಿ  20 ವರ್ಷದ ಮಹಿಳೆ (ಪಿ-36447) ಸೋಂಕು ದೃಢಪಟ್ಟಿರುತ್ತದೆ.

ಬೆಳಗಾವಿ ಜಿಲ್ಲೆಯ ಸುರೇಬಾನ ಪ್ರವಾಸದ ಹಿನ್ನೆಲೆಯುಳ್ಳ ಗದಗ ತಾಲೂಕಿನ ಮುಳಗುಂದ ನಿವಾಸಿ 49 ವರ್ಷದ ಪುರುಷ (ಪಿ-36463) ಸೋಂಕು ದೃಢಪಟ್ಟಿರುತ್ತದೆ.

ಬೆಂಗಳೂರಿನಿಂದ ಪ್ರವಾಸದ ಹಿನ್ನೆಲೆಯುಳ್ಳ ಗದಗ ತಾಲೂಕಿನ ಹರ್ತಿ ಗ್ರಾಮದ ನಿವಾಸಿಗಳಾದ 37 ವರ್ಷದ ಮಹಿಳೆ   (36473) ಹಾಗೂ 38 ವರ್ಷದ ಪುರುಷ (36501) ಸೋಂಕು ದೃಢಪಟ್ಟಿರುತ್ತದೆ.

ಗದಗ ಬೆಟಗೇರಿ ಹುಡ್ಕೋ ಕಾಲನಿಯ ನಿವಾಸಿ 47 ವರ್ಷದ ಪುರುಷ (36559) ಸೋಂಕು ದೃಢಪಟ್ಟಿದ್ದು ಸೋಂಕು ಸಂಪರ್ಕದ ಮಾಹಿತಿ ಪತ್ತೆ ಹಚ್ಚಲಾಗುತ್ತಿದೆ.

ಗದಗ ಬೆಟಗೇರಿ ನಗರದ ಬಸವೇಶ್ವರ ನಗರ ನಿವಾಸಿ 51 ವರ್ಷದ ಮಹಿಳೆ ಪಿ-31106 ಸೋಂಕಿತರ ಸಂಪರ್ಕದಿಂದಾಗಿ  ನಗರದ ಶಹಪೂರ ಪೇಟೆಯ ನಿವಾಸಿ 26 ವರ್ಷದ ಪುರುಷ (36570) ಸೋಂಕು ದೃಢಪಟ್ಟಿರುತ್ತದೆ.

ಲಕ್ಷ್ಮೇಶ್ವರ ನಗರದ ದಾಸರ ಓಣಿ ನಿವಾಸಿ 24 ವರ್ಷದ ಮಹಿಳೆ ಪಿ-28940 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ ನಿವಾಸಿ 1 ವರ್ಷದ ಮಗು (36586) ಸೋಂಕು ದೃಢಪಟ್ಟಿರುತ್ತದೆ.

ಲಕ್ಷ್ಮೇಶ್ವರದ ಇಂದಿರಾ ನಗರ ನಿವಾಸಿ 41 ವರ್ಷದ ಮಹಿಳೆ ಪಿ-18285 ಸೋಂಕಿತರ ಸಂಪರ್ಕದಿಂದಾಗಿ ಗದಗ ತಾಲೂಕಿನ ನಾಗಾವಿಯ ಗಾಳೆಮ್ಮನ ಗುಡಿ ನಿವಾಸಿಗಳಾದ 32 ವರ್ಷದ ಪುರುಷ (36616) ಹಾಗೂ 4 ವರ್ಷದ ಬಾಲಕ (36634) ಸೋಂಕು ದೃಢಪಟ್ಟಿರುತ್ತದೆ.

ನರಗುಂದದ ಹೊರಕೇರಿ ಓಣಿ ನಿವಾಸಿ 19 ವರ್ಷದ ಯುವಕ (ಪಿ-36666) ಗೆ ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ.

ಬೆಂಗಳೂರಿನಿಂದ ಪ್ರವಾಸದ ಹಿನ್ನೆಲೆಯುಳ್ಳ ಶಿರಹಟ್ಟಿ ತಾಲೂಕಿನ ಗೊಜನೂರು ಗ್ರಾಮದ 33 ವರ್ಷದ ಪುರುಷ  (ಪಿ-36686) ಸೋಂಕು ದೃಢಪಟ್ಟಿರುತ್ತದೆ.

ಗದಗ ಬೆಟಗೇರಿ ಕಾಗದಗಾರ ಓಣಿ ನಿವಾಸಿ 72 ವರ್ಷದ ಪುರುಷ (ಪಿ-36726) ಗೆ ತೀವ್ರ ಉಸಿರಾಟದ ತೊಂದರೆಯ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ.

ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ. (ರಾಜ್ಯ ಬುಲೆಟಿನನಲ್ಲಿ ಒಂದು ಪ್ರಕರಣ ಪುನರಾವರ್ತನೆಯಾಗಿದ್ದು ಅದನ್ನು ಸರಿಪಡಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದು ಜಿಲ್ಲಾ ಸಮೀಕ್ಷಣಾ ಅಧಿಕಾರಿಗಳು ತಿಳಿಸಿರುತ್ತಾರೆ.)

Leave a Reply

Your email address will not be published. Required fields are marked *

You May Also Like

ಗದಗ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ: ಪೊಲೀಸರಿಂದ ಲಾಠಿ ರುಚಿ

ರಾಜ್ಯಾಂದತ ಸರಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು, ಭಾನುವಾರವೂ ಕೂಡ ಕರ್ಪ್ಯೂ ಎರಡನೇ ದಿನಕ್ಕೆ‌ ಮುಂದುವರೆದಿದೆ. ಆದರೆ, ಜನರು ಅವಶ್ಯಕ‌ ವಸ್ತುಗಳ ಖರೀದಿಗೆಂದು ಕೆಲ ಸಮಯದವರೆಗೆ ಅವಕಾಶ ನೀಡಿದರೆ ಅಲ್ಲಿಯೂ ಸಾಮಾಜಿಕ ಅಂತರ ಮರೆಯುತ್ತಿರುವುದು ಕಂಡು ಬರುತ್ತಿದೆ.

ಗದಗ ಎಸ್ಪಿ ಯತೀಶ ಎನ್ ವರ್ಗಾವಣೆ

ಉತ್ತರಪ್ರಭ ಸುದ್ದಿ ಗದಗ: ಗದಗ ಜಿಲ್ಲೆಗೆ ನೂತನ ಎಸ್ಪಿ ಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಪ್ರಕಾಶ್ ದೇವರಾಜು ಅವರನ್ನು ನೂತನ ಪೋಲಿಸ್ ವರಿಷ್ಠಾಧಿಕಾರಿಗಳಾಗಿ ಆಗಮಿಸಲಿದ್ದು .ಎನ್ ಯತೀಶರವರನ್ನು ಮಂಡ್ಯ ಜಿಲ್ಲೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ .ಎನ್ ಯತೀಶರವರು ಕೊವಿಡ್ ಸಮಯದಲ್ಲಿ ಮಾಡಿದ ಕಾರ್ಯ ಗದುಗಿನ ಜನತೆ ಮರೆಯಲಾರರು.

ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ

 ಉತ್ತರಪ್ರಭ ಗದಗ: ತೋಂಟದಾರ್ಯ  ಇಂಜೀನಿಯರಿಂಗ್ ಕಾಲೇಜಿನ  ಇಲೇಕ್ಟ್ರೀಕಲ್ & ಇಲೇಕ್ಟ್ರಾನಿಕ್ಸ್ ವಿಭಾಗ ಮತ್ತು ಕಾಲೇಜಿನ ಇಂಟರಪುನರಶಿಪ್…

ಜೂ.14ರವರೆಗೆ ರಾಜ್ಯಾದ್ಯಂತ ಲಾಕ್ ಡೌನ್ ವಿಸ್ತರಣೆ!

ಕೋವಿಡ್ ಸಾಂಕ್ರಾಮಿಕ ಸೋಂಕನ್ನು ಸಂಪೂರ್ಣ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಕ್ತವೆಂದು ಪರಿಗಣಿಸಿ ಈ ಹಿಂದೆ ಜೂನ್ 7ರವರೆಗೆ ಜಾರಿಗೊಳಿಸಲಾಗಿತ್ತು. ಪ್ರಸ್ತುತ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದರೂ ಕೂಡ, ವೈರಾಣು ಹರಡುವಿಕೆ ಮುಂದುವರೆದಿದೆ. ಆರೋಗ್ಯ ಪರಿಣಿತರ ಸಲಹೆಯ ಮೇರೆಗೆ ಮುಂದುವರೆಸೋದು ಸೂಕ್ತ ಎಂದು ಪರಿಗಣಿಸಿ 14-06-2021ರವರೆಗೆ ಒಂದು ವಾರ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.