ಗುರುಗಳ ವೈಶಿಷ್ಟ್ಯಗಳು


 ಶಿಷ್ಯನಿಗೆ ಭಗವಂತನ ಅಸ್ತಿತ್ವದ ಮನವರಿಕೆ ಮಾಡಿಕೊಟ್ಟು ಈಶ್ವರಪ್ರಾಪ್ತಿ ಮಾಡಿಸಿಕೊಡುವುದು
: ಹೇಗೆ ಅಮಾವಾಸ್ಯೆಯಂದು ಕತ್ತಲಿರುವಾಗ ಪಾಡ್ಯದಿಂದ ಸ್ವಲ್ಪಸ್ವಲ್ಪವೇ ಬೆಳೆಯುತ್ತಾ ಹುಣ್ಣಿಮೆಯಂದು ಪೂರ್ಣ ಚಂದ್ರನು ಪ್ರಕಾಶಿಸುವವನೋ ಹಾಗೆಯೇ ಗುರುಗಳು ಶಿಷ್ಯನನ್ನು ಅವನ ಭ್ರಮೆಯಂತಹ ಮಾಯೆಯ ಅಜ್ಞಾನಮಯ ಅಂಧಃಕಾರಸ್ಥಿತಿಯಿಂದ ಸಾಧನೆಯ ಮೂಲಕ ಮುಕ್ತಗೊಳಿಸಿ ಸತ್ಯ, ಚೈತನ್ಯಮಯ ಹಾಗೂ ಪ್ರಕಾಶಮಯವಾಗಿರುವಂತಹ ಈಶ್ವರನ ಅಸ್ತಿತ್ವವನ್ನು ಮನವರಿಕೆ ಮಾಡಿಕೊಟ್ಟು ಈಶ್ವರಪ್ರಾಪ್ತಿ ಮಾಡಿಸಿಕೊಡುತ್ತಾರೆ.

ಆ ಭಗವಂತ ಹಾಗೂ ಶಿಷ್ಯನನ್ನು ಸೇರಿಸುವ ಕೊಂಡಿ: ಗುರು ಇವರು ಭಗವಂತನನ್ನು ಹಾಗೂ ಶಿಷ್ಯನನ್ನು, ಅಂದರೆ ಜೀವ ಹಾಗೂ ಶಿವನನ್ನು ಸೇರಿಸುವ ಒಂದು ಕೊಂಡಿಯಾಗಿದ್ದಾರೆ. ವಿದ್ಯೆ ಹಾಗೂ ಜ್ಞಾನ ಇದು ಗುರು ಶಿಷ್ಯರ ನಡುವಿನ ಮಾಧ್ಯಮವಾಗಿದೆ, ಹಾಗೂ ಮನಸ್ಸು ಇದು ಶರೀರ ಹಾಗೂ ಆತ್ಮವನ್ನು ಸೇರಿಸುವ ಮಾಧ್ಯಮವಾಗಿದೆ; ಆದ್ದರಿಂದ ಮೊದಲ ನಮಸ್ಕಾರ ಗುರುಗಳಿಗೆ ಸಲ್ಲಿಸಬೇಕು.

ಇ. ಎಲ್ಲ ಭಾವಗಳಿಂದ ಮುಕ್ತ, ಗುಣಾತೀತ ಹಾಗೂ ಎಲ್ಲಾ ಸದ್ಗುಣಗಳಿಂದ ಯುಕ್ತವಾಗಿರುವ ಗುರುತತ್ತ್ವ

ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಮ್ ದ್ವಂದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿಲಕ್ಷ್ಯಮ್ |
ಏಕಂ ನಿತ್ಯಂ ವಿಮಲಮಚಲಮ್ ಸರ್ವಧೀಸಾಕ್ಷಿಭೂತಮ್ ಭಾವಾತೀತಮ್ ತ್ರಿಗುಣರಹಿತಮ್ ಸದ್ಗುರುಮ್ ತಂ ನಮಾಮಿ ||

ಅರ್ಥ: ಬ್ರಹ್ಮಸ್ವರೂಪ, ಆನಂದರೂಪ, ಪರಮೋಚ್ಛ ಸುಖವನ್ನು ನೀಡುವ, ಕೇವಲ ಜ್ಞಾನಸ್ವರೂಪ, ದ್ವಂದ್ವರಹಿತ, ಆಕಾಶದಂತೆ (ನಿರಾಕಾರ), ‘ತತ್ತ್ವಮಸಿ ಎಂಬ ಮಹಾವಾಕ್ಯದ ಲಕ್ಷ್ಯ ( ‘ಅದು ನೀನಾಗಿದ್ದೀಯ, ಎಂಬ ವೇದವಾಕ್ಯವು ಯಾರನ್ನು ಉದ್ದೇಶಿಸಿ ಹೇಳಲಾಗಿದೆಯೋ ಅವರು ), ಏಕೈಕ, ನಿತ್ಯ, ಶುದ್ಧ, ಸ್ಥಿರ, ಸರ್ವಜ್ಞ, ಸರ್ವಸಾಕ್ಷಿ, ಭಾವಾತೀತ ಹಾಗೂ ಗುಣಾತೀತವಾಗಿರುವಂತಹ ಸದ್ಗುರುಗಳಿಗೆ ನಾನು ನಮಿಸುತ್ತೇನೆ.

ವಿವರಣೆ: ಬ್ರಹ್ಮಾನಂದದಲ್ಲಿ ಮಗ್ನರಾಗಿರುವ, ಆನಂದಮೂರ್ತಿ ಹಾಗೂ ಅಜ್ಞಾನಮಯವಾಗಿರುವಂತಹ ಭವಸಾಗರದಲ್ಲಿನ ಅಡಚಣೆಗಳಿಂದ ಭಯ ಉತ್ಪನ್ನವಾಗಿರುವುದರಿಂದ ಭಯವನ್ನು ದೂರ ಮಾಡಿ ಅವನಿಗೆ ಸತ್ಯದ ಮನವರಿಕೆ ಮಾಡಿಕೊಟ್ಟು ಆಶ್ವಾಸನೆ ನೀಡುವ (ನಿಶ್ಚಿಂತಗೊಳಿಸುವ), ಭಗವಂತನ ಸತ್ಯ ಸ್ವರೂಪವನ್ನು ತಿಳಿದಿರುವ, ಜ್ಞಾನಮೂರ್ತಿ, ಸುಖ-ದುಃಖದ ಮಾಯಾಸ್ವರೂಪವಾಗಿರುವ ಭ್ರಾಮಕ ಭ್ರಮೆಯಿಂದ ದೂರವಿರುವ, ಯಾವಾಗಲೂ ಆನಂದಾವಸ್ಥೆಯಲ್ಲಿರುವ, ಆಕಾಶದಂತೆ ಅಪರಿಮಿತ, ಗಂಭೀರ, ಸತರ್ಕ, ಸ್ವಚ್ಛ ‘ತತ್ತ್ವಮಸಿ ಇತ್ಯಾದಿ ಮಹಾವಾಕ್ಯಗಳ ಅನುಭವವನ್ನು ಪಡೆದುಕೊಳ್ಳುವ; ಎಲ್ಲ ಕಡೆ ಭಗವಂತನ ಅಸ್ತಿತ್ವವಿದೆ, ಎಂಬುದನ್ನು ಒಂದೊಂದು ಕ್ಷಣವೂ ಅನುಭವ ಪಡೆದುಕೊಳ್ಳುವ, ಯಾವಾಗಲು ನಿತ್ಯವಾಗಿರುವ ಒಂದೇ ತತ್ತ್ವದಿಂದ ಅಸ್ತಿತ್ವದಲ್ಲಿರುವ; ನಿರ್ಮಲ, ದೋಷರಹಿತ, ಶುಭ್ರ, ಸ್ಥಿರ, ಅಚಲ, ಎಂದಿಗೂ ಸಾಕ್ಷೀರೂಪವಾಗಿರುವ, ಎಲ್ಲಾ ಭಾವಗಳಿಂದ ಮುಕ್ತ; ಸತ್ವ, ರಜ, ತಮ, ಗುಣರಹಿತ, ಗುಣಾತೀತ ಹೀಗೆ ಎಲ್ಲ ಸದ್ಗುಣಗಳ ಯುಕ್ತವಾಗಿರುವ ಸದ್ಗುರುಗಳಿಗೆ ನಾನು ನಮಸ್ಕರಿಸುತ್ತೇನೆ.

ಆಚರಣೆ: ಗುರು ಇವರು ಸ್ವತಃ ಸ್ವಯಂಪೂರ್ಣರು, ಆದರ್ಶರೂ ಆಗಿರುತ್ತಾರೆ. ಅವರ ಜೀವನದಲ್ಲಿನ ಪ್ರತಿಯೊಂದು ಕೃತಿಯೂ ಆದರ್ಶವಾಗಿಯೇ ಇರುತ್ತದೆ. ಅವರು ಯಾವಾಗಲೂ ಎಲ್ಲ ಜೀವಗಳ, ಪ್ರಾಣಿಮಾತ್ರರ ಕಲ್ಯಾಣಕ್ಕಾಗಿ ಕಷ್ಟವನ್ನು ಸಹಿಸಿಕೊಳ್ಳುತ್ತಿರುತ್ತಾರೆ. ಆದ್ದರಿಂದ ಸಾಧಕರು ಗುರುಗಳ ಆಜ್ಞೆಯಂತೆ, ಆಚರಣೆಯಂತೆ ನಡೆದುಕೊಳ್ಳಬೇಕು.

ಶ್ರೀಮದ್‌ಭಗವದ್ಗೀತಾ, ಅಧ್ಯಾಯ ೩, ಶ್ಲೋಕ ೨೧ ರಲ್ಲಿ ಭಗವಂತನು ನುಡಿಯುತ್ತಾನೆ, ಶ್ರೇಷ್ಠ ಮನುಷ್ಯನ ಆಚರಣೆ ಹೇಗಿರುತ್ತದೆಯೋ ಅದರಂತೆ ಇತರರೆಲ್ಲರೂ ಆಚರಿಸುತ್ತಾರೆ. ಅವನು ಯಾವುದನ್ನು ಪ್ರಮಾಣವೆಂದು ಹೇಳುವನೋ, ಅದರಂತೆ ಮನುಷ್ಯ ಸಮುದಾಯವೆಲ್ಲಾ ವರ್ತಿಸುತ್ತದೆ.

ಸಂತ ತುಕಾರಾಮ ಮಹಾರಾಜರು ನುಡಿಯುತ್ತಾರೆ

ಬೋಲೆ ತೈಸಾ ಚಾಲೆ, ತ್ಯಾಚೀ ವಂದಾವೀ ಪಾವುಲೆ |

ಸಂತರು ಹೇಗೆ ಮಾತನಾಡುತ್ತಾರೋ, ಅದೇರೀತಿ ನಡೆದುಕೊಳ್ಳುತ್ತಾರೆ; ಆದ್ದರಿಂದ ಅವರು ಮಹಾನ್ ಆಗಿದ್ದಾರೆ. ಅಂತಹವರಿಗೆ ನಮಸ್ಕಾರ ಮಾಡಿರಿ. ಇಷ್ಟೇ ಅಲ್ಲ, ಅವರ ಸಾಧನೆಯಿಂದ ಅವರಲ್ಲಿ ಎಷ್ಟು ಶಕ್ತಿಯಿರುತ್ತದೆ ಅಂದರೆ, ಅವರ ಬಲಗಾಲಿನ ಹೆಬ್ಬೆಟ್ಟಿನ ನೀರಿನ ತೀರ್ಥವನ್ನು ಸೇವಿಸಿದರೆ ಪಾಪ ಪರಿಮಾರ್ಜನೆಯಾಗುತ್ತದೆ.

Leave a Reply

Your email address will not be published. Required fields are marked *

You May Also Like

ಅಟೋ, ಟ್ಯಾಕ್ಸಿ ಚಾಲಕರಿಗೆ ಸರ್ಕಾರದ 5000 ಸಿಗುವುದು ಯಾವಾಗ..?

ರಾಜ್ಯ ಸರ್ಕಾರ ಅಟೋ,ಟ್ಯಾಕ್ಸಿ ಚಾಲಕರಿಗೆ 5000 ಸಹಾಯ ಧನ ಘೋಷಣೆ ಆಗಿ 15 ದಿನಗಳು ಆಗುತ್ತಾ ಬಂದರೂ ಸರ್ಕಾರ ಮಾತ್ರ ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿರಲಿಲ್ಲ. ಇದೀಗ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ, ಆದರೆ….

ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಕಾಮಗಾರಿ ಬೇಡಿಕೆ ಪೆಟ್ಟಿಗೆ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೈತರ ಕ್ರಿಯಾ ಯೋಜನೆ ಅಭಿಯಾನದ ಅಂಗವಾಗಿ ಲಕ್ಷ್ಮೇಶ್ವರ ತಾಲೂಕು ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕಾಮಗಾರಿ ಬೇಡಿಕೆ ಪೆಟ್ಟಿಗೆ ಇಡಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ವೈ.ಗುರಿಕಾರ ತಿಳಿಸಿದ್ದಾರೆ.

ಮುದ್ದು ಮಾಡೋ ಗೆಳೆಯ ಪೋಸ್ಟರ್ ಅನಾವರಣ

ಆರ್ ಟಿ ರೆಕಾರ್ಡಿಂಗ್ ಸ್ಟುಡಿಯೋ ಪ್ರೊಡಕ್ಷನ್ ಬಾಗಲಕೋಟೆ ಅವರ ಮುದ್ದು ಮಾಡೋ ಗೆಳೆಯ ಮ್ಯೂಸಿಕ್ ಆಲ್ಬಂ ಸಾಂಗ್ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಾಗಲಕೋಟೆಯ ಸಮಗ್ರ ಜೀವನ ವಿಕಾಸ ಸಂಸ್ಥೆಯ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಬಿಡುಗಡೆ ಮಾಡಲಾಯಿತು.

ದೇವಸ್ಥಾನ ಆರಂಭದ ಬಗ್ಗೆ ಮುಜರಾಯಿ ಸಚಿವರು ಹೇಳಿದ್ದೇನು..?

ಉಡುಪಿ: ನಾಳೆ ಮುಜರಾಯಿ ದೇವಸ್ಥಾನಗಳು ಓಪನ್ ಆಗಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಸೋಮವಾರದಿಂದ ದೇವಸ್ಥಾನ ತೆರೆಯಲು ನಿರ್ಧರಿಸಲಾಗಿತ್ತು. ನಮ್ಮ ಬೇಡಿಕೆಗೆ ಕೇಂದ್ರದ ಸಹಮತದ ನಿರೀಕ್ಷೆ ಇತ್ತು.