ಉತ್ತರಪ್ರಭ ಸುದ್ದಿ
ಗದಗ:
ಗದಗ ಬೆಟಗೇರಿ ನಗರ ಸಭೆಯ ಅಧ್ಯಕ್ಷರಾಗಿ ಬಿಜೇಪಿಯ ಉಷಾ ಮಹೇಶ ದಾಸರ ಆಯ್ಕೆಯಾಗಿದ್ದರು ಮತ್ತು ಉಪಾಧ್ಯಕ್ಷರಾಗಿ ಸುನಂದಾ ಬಾಕಳೆಯವರು ಆಯ್ಕೆಯಾಗುವ ಮೂಲಕ ನಗರಸಭೆಯಲ್ಲಿ ಮಹಿಳಾ ಅಧಿಪತ್ಯಕ್ಕೆ ಅಣಿಯಾಗಿರುವ ಬೆನ್ನಲ್ಲೇ, ಇತ್ತ ಕಾಂಗ್ರೇಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯು ಪಾರದರ್ಶಕತೆಯಿಂದ ಆಗಿಲ್ಲ ಎಂದು ಆರೋಪ ಮಾಡಿ , 19 ಮತಗಳನ್ನು ಕಾಂಗ್ರೇಸ್ ಅಭ್ಯರ್ಥಿ ತೆಗೆದುಕೊಂಡಿದ್ದಾರೆ ಆದರೂ ಬಿಜೆಪಿಯ ಅಭ್ಯರ್ಥಿಯಾದ ಉಷಾ ಮಹೇಶ ದಾಸರವರನ್ನು ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆಂದು ಆರೋಪಿಸಿದ್ದರು.
ತದನಂತರ ಕಾಂಗ್ರೇಸ್‌ನಿAದ ಮಾನ್ಯ ಕರ್ನಾಟಕ ಉಚ್ಚನಾಯಾಯಾಲಯದಲ್ಲಿ ತನಗಾದ ಅನ್ಯಾಯದ ಬಗ್ಗೆ ಕೋರ್ಟ ಮೊರೆಹೊಗಿದ್ದರು, ಕಾಂಗ್ರೇಸ್ ಪಕ್ಷದ ಮನವಿಯನ್ನು ಪುರಷ್ಕರಿಸಿದ ಮಾನ್ಯ ನ್ಯಾಯಾಲಯ ದಿನಾಂಕ:21.02.2022 ರಂದು ವಿಚಾರಣೆ ಕಾಯ್ದಿರಿಸಿತ್ತು. ಇಂದು ವಾಧ ಆಲಿಸಿದ ನ್ಯಾಯಾಲಯ, ಉಪಾಧ್ಯಕ್ಷರಾಗಿ ಸುನಂದಾ ಬಾಕಳೆ ಮುಂದುವರೆಯಲಿದ್ದಾರೆ ಏಕೆಂದರೆ ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ವಿರೋಧವಿದ್ದಿಲ್ಲ ಹಾಗಾಗಿ ಉಪಾಧ್ಯಕ್ಷರಾಗಿ ಸುನಂದಾ ಬಾಕಳೆ ಮುಂದುವರಿಯಲಿದ್ದಾರೆ.
ಆದರೆ ಅಧ್ಯಕ್ಷ ಸ್ಥಾನದ ಬಗ್ಗೆ ಆಕ್ಷೇಪಣೆ ಇರುವುದರಿಂದ ಮಾರ್ಚ 2ಕ್ಕೆ ತೀರ್ಪನ್ನು ಕಾಯ್ದಿರಿಸಿ ಹೈ ಕೋರ್ಟ ಆದೇಶ ಮಾಡಿದೆ. ಬಿಜೆಪಿಯ 19 ಸದಸ್ಯರು ಬಿಜೆಪಿಯ ಉಷಾ ಮಹೇಶ ದಾಸರ ಪರವಾಗಿ ಮತ ಚಲಾಯಿಸಿದ್ದೇವೆೆಂದು ಮುಚ್ಚಳಿಪತ್ರ ಬರೆದುಕೊಟ್ಟಿದ್ದಾರೆಂದು ತಿಳಿದು ಬಂದಿದೆ. ಮಾರ್ಚ 2ರ ತನಕ ಕಾಯಲೇಬೇಕಾಗಿದೆ.

Leave a Reply

Your email address will not be published. Required fields are marked *

You May Also Like

ಪುರಾಣ ಕವಿ ರಾಮಣ್ಣ ಬ್ಯಾಟಿ ಇನ್ನಿಲ್ಲ

ಗದಗ: ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಗದುಗಿನ ತೋಂಟದಾರ್ಯ ಲಿಂಗೈಕ್ಯ ಪರಮಪೂಜ್ಯ ಡಾಕ್ಟರ್ ತೋಂಟದ ಸಿದ್ದಲಿಂಗ…

ತಂಬಾಕು ಉತ್ಪನ್ನ ಮಾರಾಟ, ಸೇವನೆ ನಿಷೇಧ

ಗದಗ ಜಿಲ್ಲೆಯಾದ್ಯಂತ ಜಗಿಯುವ ತಂಬಾಕು ಉತ್ಪನ್ನಗಳು, ಪಾನ ಮಸಾಲ, ಜರ್ದಾ, ಖೈನಿ, ಸುಪಾರಿ, ಎಲೆ-ಅಡಿಕೆ, ಕಡ್ಡಿಪುಡಿ, ಚುಯಿಂಗಮ್ ಇತ್ಯಾದಿ ಉತ್ಪನ್ನಗಳ ಸೇವನೆ, ಉಗುಳುವುದು ಮತ್ತು ಅಂಗಡಿಗಳಲ್ಲಿ ಮಾರಾಟ ಮಾಡುವದನ್ನು ನಿಷೇಧಿಸಲಾಗಿದೆ.

ಗಜೇಂದ್ರಗಡದಲ್ಲಿ ಉಪ ಖಜಾನೆ ಕಚೇರಿ ಆರಂಭ

ಸರ್ಕಾರದ ಹಣಕಾಸಿನ ವ್ಯವಹಾರವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಗಜೇಂದ್ರಗಡ ತಾಲೂಕಿನಲ್ಲಿ ಉಪ ಖಜಾನೆ ಕಚೇರಿ ಆರಂಭಿಸುವ ಮೂಲಕ ತಾಲೂಕಾ ಕೇಂದ್ರಕ್ಕೆ ಮತ್ತೊಂದು ಇಲಾಖೆ ಸೇರ್ಪಡೆಯಾಗಿದೆ. ಈ ನಿಟ್ಟಿನಲ್ಲಿ ತಾಲೂಕಾ ಕೇಂದ್ರದ ಎಲ್ಲ ಇಲಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ ಹೇಳಿದರು.

ಅಪರೂಪದ ಕರಿನಾಗರ ಪ್ರತ್ಯಕ್ಷ, ಕುತೂಹಲ ಮೂಡಿಸೊದ ಕಪ್ಪು ಬಣ್ಣದ ಉರಗ..!

ಉತ್ತರಪ್ರಭ ಸುದ್ದಿ ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹೊರವಲಯದಲ್ಲಿರುವ ಜ್ಞಾನಮುದ್ರಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಅಪರೂಪದ…