ಚಿತ್ರ ವರದಿ: ಗುಲಾಬಚಂದ ಜಾಧವ
ಆಲಮಟ್ಟಿ :
ಎಲ್ಲಡೆ ಜಯಘೋಷದ ಕರತಾಡನ.ಅಪಾರ ಭಕ್ತಾದಿಗಳ ಮೊಗದಲ್ಲಿ ಸಂಭ್ರಮೋಲ್ಲಾಸ.ಕಣಕಣದಲ್ಲೂ ಅಮಿತ್ಯೋತ್ಸಾಹ. ಈ ದೃಶ್ಯ ವೈಭವ ಆಧ್ಯಾತ್ಮಿಕ ತರಂಗಕ್ಕೆ ಹೆಸರುವಾಸಿಯಾದ ಕೃಷ್ಣೆ ತಟದ ಸುಕ್ಷೇತ್ರ ಯಲಗುರೇಶನ ಅಂಗಳದಲ್ಲಿ ಭಾನುವಾರ ಸಂಜೆ ವಿಜೃಂಭಿಸಿತು.


ಅಸಂಖ್ಯ ಭಕ್ತರ ಹೃದಯ ಗೆದ್ದಿರುವ ಯಲಗೂರ ಹನುಮನ ಕಾರ್ತಿಕೋತ್ಸವ ನಿಮಿತ್ಯ ಅದ್ದೂರಿಯಾಗಿ ಜರುಗಿದ ರಥೋತ್ಸವದಲ್ಲಿ ಅಭೂತಪೂರ್ವ ಭಕ್ತಿರಸಭಾವ ನೋಟ ಅನಾವರಣವಾಗಿತ್ತು. ಸಹಸ್ರಾರು ಭಕ್ತರ ಮಧ್ಯೆ ಸಂಭ್ರಮ,ಸಡಗರದಿಂದ ರಥೋತ್ಸವದ ತೇರು ಎಳೆಯಲಾಯಿತು.
ಗೋವಿಂದ, ಗೋವಿಂದ ಎಂಬ ಘೋಷಣೆ ಎಲ್ಲೆಡೆ ಝೇಂಕರಿಸಿ ಮೊಳಗಿತು. ಕಿವಿ ಗಡಚುವಂತೆ ಮಾರ್ದನಿಸಿತು ಉದ್ಗೋಷದ ನಿನಾದ.
ಗ್ರಾಮದ ಪ್ರಮುಖ ಬೀದಿಗಳ ಇಕ್ಕೆಲಗಳಲ್ಲಿ ನಿಂತು ಭಕ್ತರು ರಥೋತ್ಸವ ವನ್ನು ವೀಕ್ಷಿಸಿ ಸಂಭ್ರಮ ಪಟ್ಟರು.
ಅಹೋರಾತ್ರಿ ದಾಸ ವಾಣಿ ಸ್ವರ ಮಾಧುರ್ಯ ಝೇಂಕಾರ;
ಇಲ್ಲಿಯ ತೆಂಗಿನ ತೋಟದ ವೇದಿಕೆಯಲ್ಲಿ ಅಹೋರಾತ್ರಿ ಸಂಗೀತ ದಾಸವಾಣಿ ;ಸಂಜೆ 6 ಘಂಟೆಯಿಂದ ಬೆಳಗ್ಗೆ 5 ಘಂಟೆ ವರೆಗೆ ಗಾಯನ ಮತ್ತು ದಾಸ ವಾಣಿ, ಸ್ನೇಹಾ ಮತ್ತು ಪ್ರೇಮಾ ಕಡಿವಾಲ ,ಬಿ.ಬಿ. ಕುಲಕರ್ಣಿ,
ಜ್ಯೋತಿ ನಾಗೇಶ , ವರ್ಷ ಕುಲಕರ್ಣಿ, ಕು || ವರ್ಷ ಮತ್ತು ವೃಂದಾ ಬಿದರಹಳ್ಳಿ ನೃತ್ಯ , ನಟರಾಜ ಸಂಗೀತ ನೃತ್ಯ ನಿಕೇತನ, ಬಾಗಲಕೋಟದ ವಿಧ್ಯಾರ್ಥಿಗಳಿಂದ
ನೃತ್ಯ , ಸೌಜನ್ಯ ಮೋಹರೆ, ರಜತ ಆರ್ ಕುಲಕರ್ಣಿ ಬಾಬಯ್ಯ ಚೆನ್ನಯ್ಯ ದೇಗಾಂವಿಮಠ ತಬಲಾ ಸೋಲೊ , ವೀಣಾ. ಬಡಿಗೇರ , ಓಂಕಾರ ಕರಕಂಬಿ , ನೇತ್ರ ಜೋಶಿ , ಸ್ವಾತಿ ಉತ್ತರೇಶ್ವರ , ಸ್ನೇಹ ಕಡಿವಾಲ ,ಪಂ. ನಟರಾಜ ಮಹಾಜನಸಂತೋಷ ಗದ್ದನಕೇರಿ
ಕುಮಾರ ಜಯತೀರ್ಥ ತಾಸಗಾವ , ರಾಘವೇ ಜರುಗಿತು. ಜಮಖಂಡಿ ರಾಜೇಂದ್ರ ದೇಶಪಾಂಡೆ, ವಿದೂಷಿ ಸಂಗೀತಾ ಕಟ್ಟಿ ಕುಲಕರ್ಣಿ ಅವರು ನೀಡಿದ ಗಾಯನಕ್ಕೆ ಸಂಗೀತ ಪ್ರಿಯ ಶೋತೃುಗಳು ತಲೆದೂಗಿದರು. ಭವ್ಯಾ ರಾಣಿ, ಬಿಂದು ಮಾಧವಾಚಾರ್ಯ ಕಡಿವಾಲ, ಅಮಿತ ಮನಗೂಳಿ, ಅನೂಪ್ ಕುಲಕರ್ಣಿ, ಪುನಿತ್ ದೇಶಪಾಂಡೆ ನಿರೂಪಿಸಿದರು.
ಅನುಗ್ರಹ ಪ್ರಶಸ್ತಿ ಪ್ರಧಾನ;
ಖ್ಯಾತ ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ಯಲಗೂರೇಶ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಂಜಿಸಿದ ಗೊಂಬೆಗಳ ಕುಣಿತ; ಮೂಕಿಹಾಳದ ಕುದುರೆ ಕುಣಿತ, ಗೊಂಬೆಗಳ ಕುಣಿತ ರಂಜಿಸಿತು. ಶ್ಯಾಮ ಪಾತರದ ಈ ಕಾರ್ಯಕ್ರಮ ಉದ್ಘಾಟಿಸಿದರು.
ರಾತ್ರಿ ಹೊಂಡ ಪೂಜೆ ಜರುಗಿತು

Leave a Reply

Your email address will not be published. Required fields are marked *

You May Also Like

ರೈತರನ್ನು ರಾಸ್ಕಲ್ ಎಂದ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಮಾನ ಉಳಿಸಿಕೊಳ್ಳಿ: ಸಿದ್ದರಾಮಯ್ಯ

ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ. ಅವರು ತಕ್ಷಣ ಆ ರೈತ ಮಹಿಳೆಯ ಕ್ಷಮೆ‌ ಯಾಚಿಸುವಂತೆ‌‌ ಮಾಡಿ, ಅವರನ್ನು‌ ಸಂಪುಟದಿಂದ ಕೈ ಬಿಟ್ಟು‌‌ ಸರ್ಕಾರದ ಮಾನ‌ ಉಳಿಸಬೇಕು

ಯಲಗೂರ ಶಕ್ತಿಮಾನಗೆ ಭಕ್ತರ ಭಕ್ತಿಮಾನ ಸಮರ್ಪಣೆ- ಕಾತಿ೯ಕೋತ್ಸವ ಸಂಭ್ರಮ ಏಳೂರು ಒಡೆಯನ ಸನ್ನಿಧಿಯಲ್ಲಿ ಭಕ್ತಿ ಪರಾಕಾಷ್ಠೆ – ಮಿಂದೆದ್ದ ಜನಸಾಗರ

ಸಚಿತ್ರ ವರದಿ: ಗುಲಾಬಚಂದ ಆರ್. ಜಾಧವಆಲಮಟ್ಟಿ : ಕೃಷ್ಣೆಯ ತೀರದ ಪ್ರಾಕೃತಿಕ ಪರಿಮಳದ ಹಸಿನೆಲದ ಸುವಾಸನೆಯಲ್ಲಿ…

1ನೇ ಮತ್ತು 20ನೇ ವಾರ್ಡ ಕಾಂಗ್ರೇಸ್ 31ನೇ ವಾರ್ಡ ಬಿಜೆಪಿ

ಗದಗ ಬೇಟಗೇರಿ:ನಗರ ಸಭೆ 1, 20, 31ನೇ ವಾರ್ಡನ ಮತ ಎಣಿಕೆ ಮುಕ್ತಾಯವಾಗಿದ್ದು , 1ನೇ…

ಸಾಲದ ಕೂಪಕ್ಕೆ ಸಿಲುಕಿದ್ದ ಒಂದೇ ಗ್ರಾಮದ ಇಬ್ಬರು ರೈತರು ಆತ್ಮಹತ್ಯೆ!

ಹಾವೇರಿ : ಸಾಲದಿಂದ ನರಳಿದ್ದ ಒಂದೇ ಗ್ರಾಮದ ಇಬ್ಬರು ರೈತರು, ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.