ಉತ್ತರಪ್ರಭ ಸುದ್ದಿ

ನರೆಗಲ್ಲ: ಪಟ್ಟಣ ಪಂಚಾಯತಿಯಲ್ಲಿ ಶುಕ್ರವಾರ ನಡೆಯಬೆಕಿದ್ದ ಬಜೆಟ್ ಮಂಡನೆ ಪೂರ್ವಭಾವಿ ಸಬೆಗೆ ಮುಖ್ಯಾಧಿಕಾರಿ ಗೈರು ಹಾಜರಿಯಿಂದ ಸಭೆ ನಡೆಯದೆ ಮುಖ್ಯಾಧಿಕಾರಿಗಾಗಿ ಸದಸ್ಯರು ಕಾದು ಕುಳಿತ ಪ್ರಸಂಗ ನಡೆಯಿತು.

2022/23 ಸಾಲಿನ ಬಜೆಟ್ ಮಂಡನೆ ಸಲುವಾಗಿ ಶುಕ್ರವಾರ ಕರೆದ ಪೂರ್ವಭಾವಿ ಸಭೆಗೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಚ್,ವಾಯ್,ಮಣ್ಣೋಡ್ಡರ ಕಾರಣಾಂತರದಿಂದ ಸಭೆಗೆ ಹಾಜರಾಗದೆ ಗೈರಾಗಿದ್ದು ಆಡಳಿತ ಪಕ್ಷದ ಹಾಗೂ ವಿರೋಧ ಪಕ್ಷದ ಸದಸ್ಯರ ಕೊಕಪ್ಪ ತುತ್ತಾಗಿದ್ದು ಸಭೆಯನ್ನು ಮುಂದೂಡಲಾಯಿತು.

ಕೊನೆಗೆ ಸಭೆಯಲ್ಲಿ ಹಾಜರಿದ್ದ ಸದಸ್ಯರೆಲ್ಲ ಉಪಹಾರ ಸೇವಿಸಿ ಸಭೆಯನ್ನು ಮುಂದೂಡಿದರು
ಒಟ್ಟಾರೆ ಉಪಹಾರಕ್ಕೆ ಸೀಮಿತವಾದ ಬಜೆಟ್ ಮಂಡನೆ ಪೂರ್ವಭಾವಿ ಸಭೆಯಾಗಿದ್ದು ವಿರ್ಪಯಾಸವೇ ಸರಿ.

ಬಾಕ್ಸ್: ತಾವೆ ನಿಗದಿಪಡಿಸಿದ 2022/23 ರ ಬಜೆಟ್ ಮಂಡನೆ ಪೂರ್ವಭಾವಿ ಸಭೆಗೆ ಹಾಜರಾಗದೆ ಮುಖ್ಯಾಧಿಕಾರಿ ಗೈರಾಗಿದ್ದು ಸದಸ್ಯರಿಗೆ ಹಾಗೂ ಸಭೆಗೆ ಅಗೌರವ ತೋರಿದ್ದಾರೆ ಎಂದು ಸದಸ್ಯ ರಾಚಯ್ಯ ಮಾಲಗಿತ್ತಿಮಠ ಹೇಳಿದರು.

ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷೆ ಅಕ್ಕಮ ಮಣ್ಣೋಡ್ಡರ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಶ್ರೀ ಶೈಲಪ್ಪ ಬಂಡಿಹಾಳ, ವೀರಪ್ಪ ಜೋಗಿ,ಪಕ್ಕಿರಪ್ಪ ಮಳ್ಳಿ,ಪಕ್ಕಿರಪ್ಪ ಬಂಬ್ಲಾಪುರ,ಮಲಿಕಸಾಬ್ ರೋಣದ,ಮಲ್ಲಿಕಾರ್ಜುನಗೌಡ ಭೂಮನಗೌಡ್ರ,ಜ್ಯೋತಿ ಪಾಯಪ್ಪಗೌಡ್ರ,ಮಂಜುಳಾ ಹುರಳಿ,ವಿಜಯಲಕ್ಷ್ಮಿ ಚಲವಾದಿ,ಬಸಮ್ಮ ಸೋಮಗೊಂಡ,ಬಸಿರಬಾನು ನಧಾಪ್,ಮುತ್ತಪ್ಪ ನೂಲ್ಕಿ,ದಾವುದಾಲಿ ಕುದರಿ ಸಭೆಗೆ ಹಾಜರ ಇದ್ದರು.

Leave a Reply

Your email address will not be published. Required fields are marked *

You May Also Like

ಗದಗ ಬೆಟಗೇರಿ ನಗರಸಭೆ ಚುನಾವಣೆ; ಈ ಬಾರಿ ಬಿಜೆಪಿಯತ್ತ ಜನರ ಒಲವು! ಕಾಂಗ್ರೇಸ್ ತಂತ್ರಗಾರಿಕೆಯಲ್ಲಿ ಚಾಣಾಕ್ಷ್ಯ ನಡೆ: ಸಚಿವ ಸಿಸಿ ಪಾಟೀಲ್‌ಗೆ ಹೆಚ್ಚಿದ ಹೋಣೆ!

ಉತ್ತರಪ್ರಭ ಗದಗ: ನಗರಸಭೆ ಚುನಾವಣೆಯ ದಿನಾಂಕ ಘೋಷಣೆ ಆದ ದಿನದಿಂದ ಇವತ್ತಿನವರೆಗೂ ಬಿಜೆಪಿ ಒಂದಲ್ಲಾ ಒಂದು…

ಲಕ್ಷ್ಮೆಶ್ವರದಲ್ಲಿ ಮಣ್ಣು ಮುಕ್ಕುತ್ತಿದ್ದರೂ ಅಧಿಕಾರಿಗಳು ಮೌನ!

ಅನ್ನ ಭಾಗ್ಯ ಯೋಜನೆಯ ಅಕ್ಕಿ, ಮರಳು ಲೂಟಿ ಮಾಡುವುದು ಆಗಾಗ ಸಾಮಾನ್ಯವಾಗಿದೆ. ಆದರೆ, ತಾಲೂಕಿನಲ್ಲಿ ರೈತರ ಜಮೀನುಗಳಲ್ಲಿ ಮಣ್ಣು ಕೂಡ ಸದ್ದಿಲ್ಲದೇ ಲೂಟಿಯಾಗುತ್ತಿರುವುದು ಬೆಳಕಿಗೆ ಬಂದಿದೆ.

ಉತ್ತರಪ್ರಭ ಫಲಶೃತಿ: ಏನರಾ ಆಗ್ಲಿ ಧೂಳಿಗೆ ತೆರಿಗೆ ಕಟ್ಟೊ ಕಾಟ ತಪ್ಪಿದ್ರ ಸಾಕು..!

ಮನೆ, ಜಾಗೆ, ನೀರು, ಕಟ್ಟಡ ಹೀಗಿಲ್ಲ ತೆರಿಗೆ ಕಟ್ಟುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಅಷ್ಟೆ ಏಕೆ ಸ್ವತಃ ಕಟ್ಟಿದ್ದೇವೆ. ಆದರೆ ಇದ್ಯಾವುದಿದು ಧೂಳಿಗೆ ಕರ ಕಟ್ಟುವುದು ಅಂದ್ಕೊಂಡ್ರಾ?

ಯುವ ಕಾಂಗ್ರೆಸ್ ಅಧ್ಯಕ್ಷ ಸರ್ಫರಾಜ್ ಅವರಿಗೆ ಅಭಿನಂದನೆ

ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸರ್ಫರಾಜ್ ಸೂರಣಗಿಯವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಅಭಿನಂದಿಸಿದರು.