ಉತ್ತರಪ್ರಭ ಸುದ್ದಿ

ನರೆಗಲ್ಲ: ಪಟ್ಟಣ ಪಂಚಾಯತಿಯಲ್ಲಿ ಶುಕ್ರವಾರ ನಡೆಯಬೆಕಿದ್ದ ಬಜೆಟ್ ಮಂಡನೆ ಪೂರ್ವಭಾವಿ ಸಬೆಗೆ ಮುಖ್ಯಾಧಿಕಾರಿ ಗೈರು ಹಾಜರಿಯಿಂದ ಸಭೆ ನಡೆಯದೆ ಮುಖ್ಯಾಧಿಕಾರಿಗಾಗಿ ಸದಸ್ಯರು ಕಾದು ಕುಳಿತ ಪ್ರಸಂಗ ನಡೆಯಿತು.

2022/23 ಸಾಲಿನ ಬಜೆಟ್ ಮಂಡನೆ ಸಲುವಾಗಿ ಶುಕ್ರವಾರ ಕರೆದ ಪೂರ್ವಭಾವಿ ಸಭೆಗೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಚ್,ವಾಯ್,ಮಣ್ಣೋಡ್ಡರ ಕಾರಣಾಂತರದಿಂದ ಸಭೆಗೆ ಹಾಜರಾಗದೆ ಗೈರಾಗಿದ್ದು ಆಡಳಿತ ಪಕ್ಷದ ಹಾಗೂ ವಿರೋಧ ಪಕ್ಷದ ಸದಸ್ಯರ ಕೊಕಪ್ಪ ತುತ್ತಾಗಿದ್ದು ಸಭೆಯನ್ನು ಮುಂದೂಡಲಾಯಿತು.

ಕೊನೆಗೆ ಸಭೆಯಲ್ಲಿ ಹಾಜರಿದ್ದ ಸದಸ್ಯರೆಲ್ಲ ಉಪಹಾರ ಸೇವಿಸಿ ಸಭೆಯನ್ನು ಮುಂದೂಡಿದರು
ಒಟ್ಟಾರೆ ಉಪಹಾರಕ್ಕೆ ಸೀಮಿತವಾದ ಬಜೆಟ್ ಮಂಡನೆ ಪೂರ್ವಭಾವಿ ಸಭೆಯಾಗಿದ್ದು ವಿರ್ಪಯಾಸವೇ ಸರಿ.

ಬಾಕ್ಸ್: ತಾವೆ ನಿಗದಿಪಡಿಸಿದ 2022/23 ರ ಬಜೆಟ್ ಮಂಡನೆ ಪೂರ್ವಭಾವಿ ಸಭೆಗೆ ಹಾಜರಾಗದೆ ಮುಖ್ಯಾಧಿಕಾರಿ ಗೈರಾಗಿದ್ದು ಸದಸ್ಯರಿಗೆ ಹಾಗೂ ಸಭೆಗೆ ಅಗೌರವ ತೋರಿದ್ದಾರೆ ಎಂದು ಸದಸ್ಯ ರಾಚಯ್ಯ ಮಾಲಗಿತ್ತಿಮಠ ಹೇಳಿದರು.

ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷೆ ಅಕ್ಕಮ ಮಣ್ಣೋಡ್ಡರ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಶ್ರೀ ಶೈಲಪ್ಪ ಬಂಡಿಹಾಳ, ವೀರಪ್ಪ ಜೋಗಿ,ಪಕ್ಕಿರಪ್ಪ ಮಳ್ಳಿ,ಪಕ್ಕಿರಪ್ಪ ಬಂಬ್ಲಾಪುರ,ಮಲಿಕಸಾಬ್ ರೋಣದ,ಮಲ್ಲಿಕಾರ್ಜುನಗೌಡ ಭೂಮನಗೌಡ್ರ,ಜ್ಯೋತಿ ಪಾಯಪ್ಪಗೌಡ್ರ,ಮಂಜುಳಾ ಹುರಳಿ,ವಿಜಯಲಕ್ಷ್ಮಿ ಚಲವಾದಿ,ಬಸಮ್ಮ ಸೋಮಗೊಂಡ,ಬಸಿರಬಾನು ನಧಾಪ್,ಮುತ್ತಪ್ಪ ನೂಲ್ಕಿ,ದಾವುದಾಲಿ ಕುದರಿ ಸಭೆಗೆ ಹಾಜರ ಇದ್ದರು.

Leave a Reply

Your email address will not be published. Required fields are marked *

You May Also Like

ಗದಗ-ಬೆಟಗೇರಿ ನಗರಸಭೆ ಚುನಾವಣೆ: ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ

ಉತ್ತರಪ್ರಭಗದಗ: ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 35 ವಾರ್ಡಗಳ ಪೈಕಿ 26 ವಾರ್ಡಗಳಿಗೆ  ಅಭ್ಯರ್ಥಿಗಳ…
ಹೂವಿನ ಹಡಗಲಿ: ಬಳ್ಳಾರಿ ಜಿಲ್ಲೆಯ ಹೂನಿನ ಹಡಗಲಿ ತಾಲೂಕಿನಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ಒಟ್ಟು 9…

ನರೆಗಲ್ ಗಾರ್ಡನ್ ಕಥೆ: 10 ಲಕ್ಷ ಖರ್ಚು ಮಾಡಿ 9 ವರ್ಷವಾದ್ರು, ಉಪಯೋಗಕ್ಕೆ ಬಾರದ ಉದ್ಯಾನವನ..!

ಗದಗ: ದೇವಾಲಯದ ಪಕ್ಕದಲ್ಲಿರುವ ಉದ್ಯಾನವನ ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ ಎನ್ನುವಂತಿದೆ. ಸರ್ಕಾರ…