ನಿಡಗುಂದಿ: ಕಲ್ಯಾಣ ಕ್ರಾಂತಿ ಯಲ್ಲಿ ಮಾಚಿದೇವರು ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ಜವಾಬ್ಧಾರಿ ವಹಿಸಿದ್ದರಿಂದ ತಾಡೋಲೆಯಲ್ಲಿದ್ದ ವಚನಗಳ ಇಂದಿಗೂ ಉಳಿದಿವೆ ಎಂದು ಮಡಿವಾಳರ ಸಂಘದ ನಿಡಗುಂದಿ ತಾಲ್ಲೂಕು ಘಟಕದ ಅಧ್ಯಕ್ಷ ಅಮರ ಮಡಿವಾಳರ ಹೇಳಿದರು.
ತಾಲ್ಲೂಕು ಆಡಳಿತ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ ಶರಣ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಅವರು ಮಾತನಾಡಿದರು.

ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ , ‘ಮಡಿ’ ಹಾಸಿ ಸ್ವಾಗತಿಸುವ ಕೆಲಸ ಅವರದಾಗಿತ್ತು. ಮಾಚಿದೇವರ ಪರೀಕ್ಷೆಗೊಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣ ಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲವೆಂಬುದು ಮಾಚಯ್ಯನ ಘನತೆಗೆ ಸಾಕ್ಷಿಯಾಗಿದೆ ಎಂದರು.
ಉಪತಹಶೀಲ್ದಾರ್ ಕೆ.ವೈ. ಹೊಸಮನಿ, ಹನಮಂತ ಮಡಿವಾಳರ ,ಸಂತೋಷ ಮಡಿವಾಳರ,ವೀರೇಶ ಮಡಿವಾಳರ, ರವಿ
ಮಡಿವಾಳರ , ಎಸ್.ಎಚ್. ರಾಠೋಡ, ಎಸ್.ಡಿ. ಮಾಶ್ಯಾಳ, ಆರ್.ಎಸ್. ಇಸ್ಲಾಂಪುರ, ಹೇಮಂತ ನಾಗನೂರ , ರಾಜಶೇಖರ ಮಿಣಜಗಿ ಇದ್ದರು.

ಪಟ್ಟಣ ಪಂಚಾಯ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ರಮೇಶ ಮಾಡಬಾಳ, ಸಿದ್ದು ಗೌಡರ, ಪ್ರಶಾಂತ ಪಾಟೀಲ, ರುದ್ರೇಶ ಮುಗಳೊಳ್ಳಿ, ಲಕ್ಷ್ಮಿ ಶೆಟ್ಟಿ, ಗಾಯತ್ರಿ ವಾಲಿಕಾರ ಇತರರು ಇದ್ದರು.