ವರದಿ : ವಿಠಲ ಕೆಳೂತ್
ಮಸ್ಕಿ: ಬೆಂಗಳೂರುನಲ್ಲಿನ ಪುನೀತ ರಾಜಕುಮಾರ ಸಮಾಧಿವರೆಗೆ ಪಾದಯಾತ್ರೆ ನಡೆಸಿರುವ ಅಪ್ಪು ಅಭಿಮಾನಿಗೆ ಇಲ್ಲಿನ ಪ್ರತಾಪಗೌಡ ಪಾಟೀಲ್ ಪೌಂಡೇಶನ್ ಅಧ್ಯಕ್ಷ ಪ್ರಸನ್ನ ಪಾಟೀಲ ಅವರು ಸನ್ಮಾನಿಸಿ ಗೌರವಿಸಿದರು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಐಕೂರು ಗ್ರಾಮದ ವಿಶೇಷ ಚೇತನ ರವಿಕುಮಾರ ಎಂಬ ಯುವಕ ಯಾದಗಿರಿ ಜಿಲ್ಲೆಯಿಂದ ಬೆಂಗಳೂರಿನ ಅಪ್ಪುವಿನ ಸಮಾಧಿವರೆಗೆ ಪಾದಯಾತ್ರೆ ಕೈಗೊಂಡಿದ್ದನ್ನು ಕಂಡು ಸ್ಥಳೀಯ ಬಿಜೆಪಿ ಮುಖಂಡರು ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಸನ್ಮಾನಿಸಿ ಶುಭ ಹಾರೈಸಿದರು.
ರಾಜಧಾನಿ ಬೆಂಗಳೂರುವರೆಗೆ ನಿಮ್ಮ ಪಾದಯಾತ್ರೆ ಸುಗಮವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರವಿಗೌಡ ಪಾಟೀಲ, ಚೇತನ ಪಾಟೀಲ, ಶರಣಬಸವ ಸೊಪ್ಪಿಮಠ, ಮಲ್ಲಿಕಾರ್ಜುನ ಬ್ಯಾಳಿ, ಸಂತೋಷ ಪತ್ತಾರ, ಮೌನೇಶ ನಾಯಕ, ದುರ್ಗಾಪ್ರಸಾದ ತೋರಣದಿನ್ನಿ ಶಿವರಾಜ ಹರಸೂರ, ಶರಣಗೌಡ ಪೊಲೀಸ ಪಾಟೀಲ, ಅಮರಯ್ಯ ಸೊಪ್ಪಿಮಠ, ಮಲ್ಲಿಕಾರ್ಜುನ ಬೈಲಗುಡ್ಡ ಸೇರಿದಂತೆ ಇನ್ನಿತರಿದ್ದರು.