ಉತ್ತರ ಪ್ರಭ ಸುದ್ದಿ
ರೋಣ : ಪಟ್ಟಣದ ಸಿದ್ದಾರೊಡ ಮಠದ ಮುಂದಿನ ರಸ್ತೆ ದುರಸ್ಥಿಯನ್ನು ಅತ್ಯಂತ ಕಳಪೆ ಮಾಡುತ್ತಿರುವುದನ್ನು ರೋಣ ಅಭಿವೃದ್ಧಿ ಸಮಿತಿಯವರು ತಡೆ ಹಿಡಿದ ಘಟನೆ ಸೋಮವಾರ ನಡೆದಿದೆ.
ಪಟ್ಟಣದ ಪ್ರಮುಖ ರಸ್ತೆಯಾದ ಸೂಡಿ ರಸ್ತೆಯಲ್ಲಿ ಗುಂಡಿಗಳು ಬಿದ್ದು ಹಾಳಾಗಿ ಹೋಗಿದ್ದು ಅವುಗಳನ್ನು ದುರಸ್ಥಿ ಮಾಡುತ್ತಿರುವ ಗುತ್ತಿಗೆದಾರರು ರಸ್ತಯಲ್ಲಿನ ಹಾಳಾದ ಮಣ್ಣನ್ನು ಸ್ವಚ್ಛಗೊಳಿಸಿ ಅನಂತರ ಕಡಿ ಹಾಕಿ ರೂಲರ ಹೊಡೆದು ಡಾಂಬರ್ ಹಾಕುವದನ್ನು ಬಿಟ್ಟು ಬರೀ ಧೋಳಲ್ಲಿ ಕಡಿ ಡಾಂಬರ್ ಹಾಕಿದರೆ ಮರುದಿನವೇ ಕಿತ್ತು ಹೋಗುವದು ಎಂದು ಅಭಿಷೇಕ ನವಲಗುಂದ ಗುತ್ತಿಗೆದಾರನ ಹಾಗೂ ಲೋಕೋಪಯೋಗಿ ಇಲಾಖೆಯವರ ಮೇಲೆ ನೇರ ಆರೋಪ ಮಾಡಿದರು.


ಲೋಕೋಪಯೋಗಿ ಇಲಾಖೆಯವರ ಬೇಜವಾಬ್ದಾರಿ ಮೆರೆಯಿತ್ತಿರುವುದು ಎದ್ದು ತೋರುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಗಿದೆ, ಈ ಹಿಂದೆ ಮುಲ್ಲನಬಾವಿ ವೃತ್ತದಿಂದ ಕೋಟುಮಚಗಿ ರಸ್ತೆಯು ಇದೆ ರೀತಿ ಪುರಸಭೆ ಸದಸ್ಯರು ಕಳಪೆ ಆರೋಪ ಮಾಡಿ ಅಡ್ಡಿ ಪಡಿಸಿ ತಿಂಗಳು ಗತಿಸಿದರೂ ಇನ್ನೂವರೆಗೂ ಆ ರಸ್ತೆ ದುರಸ್ಥಿಯಾಗದೆ ಹಾಗೇ ಉಳಿದುಬಿಟ್ಟಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಆ ರಸ್ತೆ ದುರಸ್ಥಿಯಾಗದೆ ಕಡಿ ಹಾಕಿ ಹಾಗೇ ಬಿಟ್ಟಿರುವುದು ವಾಹನ ಸವಾರರಿಗೆ ತಲೆನೋವಾಗಿದೆ.

ಒಟ್ಟಿನಲ್ಲಿ ರೋಣ ಪಟ್ಟಣದ ರಸ್ತೆಗಳು ಗುಂಡಿಗಳಿಂದ ಮುಕ್ತಿ ಹೊಂದುವುದು ಮಾತ್ರ ಮರೀಚಿಕೆಯಾಗಿದೆ ಎನ್ನುವರು ಪ್ರಜ್ಞಾವಂತ ಪ್ರಜೆಗಳು.