ಉತ್ತರ ಪ್ರಭ ಸುದ್ದಿ
ರೋಣ : ಪಟ್ಟಣದ ಸಿದ್ದಾರೊಡ ಮಠದ ಮುಂದಿನ ರಸ್ತೆ ದುರಸ್ಥಿಯನ್ನು ಅತ್ಯಂತ ಕಳಪೆ ಮಾಡುತ್ತಿರುವುದನ್ನು ರೋಣ ಅಭಿವೃದ್ಧಿ ಸಮಿತಿಯವರು ತಡೆ ಹಿಡಿದ ಘಟನೆ ಸೋಮವಾರ ನಡೆದಿದೆ.
ಪಟ್ಟಣದ ಪ್ರಮುಖ ರಸ್ತೆಯಾದ ಸೂಡಿ ರಸ್ತೆಯಲ್ಲಿ ಗುಂಡಿಗಳು ಬಿದ್ದು ಹಾಳಾಗಿ ಹೋಗಿದ್ದು ಅವುಗಳನ್ನು ದುರಸ್ಥಿ ಮಾಡುತ್ತಿರುವ ಗುತ್ತಿಗೆದಾರರು ರಸ್ತಯಲ್ಲಿನ ಹಾಳಾದ ಮಣ್ಣನ್ನು ಸ್ವಚ್ಛಗೊಳಿಸಿ ಅನಂತರ ಕಡಿ ಹಾಕಿ ರೂಲರ ಹೊಡೆದು ಡಾಂಬರ್ ಹಾಕುವದನ್ನು ಬಿಟ್ಟು ಬರೀ ಧೋಳಲ್ಲಿ ಕಡಿ ಡಾಂಬರ್ ಹಾಕಿದರೆ ಮರುದಿನವೇ ಕಿತ್ತು ಹೋಗುವದು ಎಂದು ಅಭಿಷೇಕ ನವಲಗುಂದ ಗುತ್ತಿಗೆದಾರನ ಹಾಗೂ ಲೋಕೋಪಯೋಗಿ ಇಲಾಖೆಯವರ ಮೇಲೆ ನೇರ ಆರೋಪ ಮಾಡಿದರು.


ಲೋಕೋಪಯೋಗಿ ಇಲಾಖೆಯವರ ಬೇಜವಾಬ್ದಾರಿ ಮೆರೆಯಿತ್ತಿರುವುದು ಎದ್ದು ತೋರುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಗಿದೆ, ಈ ಹಿಂದೆ ಮುಲ್ಲನಬಾವಿ ವೃತ್ತದಿಂದ ಕೋಟುಮಚಗಿ ರಸ್ತೆಯು ಇದೆ ರೀತಿ ಪುರಸಭೆ ಸದಸ್ಯರು ಕಳಪೆ ಆರೋಪ ಮಾಡಿ ಅಡ್ಡಿ ಪಡಿಸಿ ತಿಂಗಳು ಗತಿಸಿದರೂ ಇನ್ನೂವರೆಗೂ ಆ ರಸ್ತೆ ದುರಸ್ಥಿಯಾಗದೆ ಹಾಗೇ ಉಳಿದುಬಿಟ್ಟಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಆ ರಸ್ತೆ ದುರಸ್ಥಿಯಾಗದೆ ಕಡಿ ಹಾಕಿ ಹಾಗೇ ಬಿಟ್ಟಿರುವುದು ವಾಹನ ಸವಾರರಿಗೆ ತಲೆನೋವಾಗಿದೆ.


ಒಟ್ಟಿನಲ್ಲಿ ರೋಣ ಪಟ್ಟಣದ ರಸ್ತೆಗಳು ಗುಂಡಿಗಳಿಂದ ಮುಕ್ತಿ ಹೊಂದುವುದು ಮಾತ್ರ ಮರೀಚಿಕೆಯಾಗಿದೆ ಎನ್ನುವರು ಪ್ರಜ್ಞಾವಂತ ಪ್ರಜೆಗಳು.

Leave a Reply

Your email address will not be published. Required fields are marked *

You May Also Like

ಶೆಟ್ಟಿಕೇರಿ ಕೆರೆ: ಪಾರಂಪರಿಕ ತಾಣವನ್ನಾಗಿಸಲು ಅಗತ್ಯದ ಕ್ರಮ

ಜೀವ ವೈವಿಧ್ಯತೆಯ ಸಂರಕ್ಷಣೆ ಸಂವರ್ಧನೆಯ ಕಾಯ್ದೆಯ ಸಮರ್ಪಕ ಜಾರಿಗಾಗಿ ಜಿ.ಪಂ, ತಾ.ಪಂ ಮೂಲಕ ಸಮಿತಿಗಳನ್ನು ರಚಿಸಿದ್ದು ಈ ಸಮಿತಿಗಳ ಮೂಲಕ ಜಿಲ್ಲೆಯಲ್ಲಿನ ಜೀವ ವೈವಿಧ್ಯತೆಯನ್ನು ಬಲಪಡಿಸುವುದು ಅಗತ್ಯ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ್ ತಿಳಿಸಿದರು.

ಪ್ಯಾಕೇಜ್ ಹಾಗೂ ಅಲ್ಪಾವಧಿ ಟೆಂಡರ್ ಕ್ಕೆ ಭಾರೀ ವಿರೋಧ: ಟೆಂಡರ್ ನಿಯಮ ಗಾಳಿಗೆ ತೂರಿದ ಆರೋಪ- ಕೃಷ್ಣಾ ತೀರ ಗುತ್ತಿಗೆದಾರರ ಪ್ರತಿಭಟನೆ

ಉತ್ತರಪ್ರಭ ಸುದ್ದಿಆಲಮಟ್ಟಿ: ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಹಲವಾರು ಕಾಮಗಾರಿಗಳನ್ನು ಏಕತ್ರಗೊಳಿಸಿ ಪ್ಯಾಕೇಜ್ ಟೆಂಡರ್…

ಸಸಿ ವಿತರಿಸಿದ ಅರಣ್ಯಾಧಿಕಾರಿ

ಈಗಾಗಲೇ ಮುಂಗಾರು ಹಂಗಾಮು ಆರಂಭವಾಗಿದ್ದು, ಸಸಿಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಕೊಡಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಸಿದ್ದರಾಮ ವಿಭೂತಿ ಹೇಳಿದರು.

ಪರಿಸರ ದಿನವೇ 23 ಮರಗಳ ಹಾಫ್ ಮರ್ಡರ್ : ವಿಂಡ್ ಕಂಪನಿ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ

ಉತ್ತರಪ್ರಭ ನಿಂಗಪ್ಪ ಬಿ.ಮಡಿವಾಳರ ಗಾಳಿಯಂತ್ರ ಸಾಗಿಸಲು ಗಾಳಿ ಕೊಡುವ ಮರದ ಟೊಂಗೆಗಳು ಬಲಿ ಐತಿಹಾಸಿಕ ಗಿಡಗಳನ್ನು…