ಉತ್ತರಪ್ರಭ ಸುದ್ದಿ

ಗದಗ: ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಗದಗ ವತಿಯಿಂದ ನವಂಬರ್ 28ರಂದು ರವಿವಾರ ಸಾಯಂಕಾಲ 5:30ಘಂಟೆಗೆ ಬಣ್ಣದ ಮನೆ ಆರ್ಟ್ ಅಡ್ಡಾದ ಸಾಂಸ್ಕೃತಿಕ ಭವನ, .ಎಸ್. ಎಸ್ ಕಾಮರ್ಸ್ ಕಾಲೇಜ್ ಹತ್ತಿರ ಗದಗದಲ್ಲಿ “,ಜಾನಪದ ಸಂಭ್ರಮ ಹಾಗೂ ಕಲಾವಿದರಿಗೆ ಪುರಸ್ಕಾರಸಮಾರಂಭ ಏರ್ಪಡಿಸಲಾಗಿದೆ ಕಾರ್ಯಕ್ರಮವನ್ನು ಡಾ. ಎಸ್.ಬಾಲಾಜಿ, ರಾಜ್ಯಾಧ್ಯಕ್ಷರು ಕನ್ನಡ ಜಾನಪದ ಪರಿಷತ್ ಬೆಂಗಳೂರು ಉದ್ಘಾಟಿಸುವರು. ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಶಾಂತಕುಮಾರ್ ಬಿ ಭಜಂತ್ರಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರವಿಕಾಂತ್ ಅಂಗಡಿ ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಗದಗ, ಡಾ. ಬಿ ಹಿತ್ತಲಮನಿ, ಪ್ರಾಚಾರ್ಯರು ಪಿ ಪಿ ಜಿ ಶಿಕ್ಷಣ ಮಹಾವಿದ್ಯಾಲಯ ಗದಗ, ವಿಜಯ ಕಿರೇಸೂರ ಜಿಲ್ಲಾಧ್ಯಕ್ಷರು, ಚಿತ್ರ ಕಲಾ ಶಿಕ್ಷಕರ ಸಂಘ, ಗದಗ, ಪ್ರೊ. ರೇಖಾ ನೀರಲಗಿ, ಪ್ರೊ. ಶಕುಂತಲಾ..ಸಿಂಧೂರ ಆಗಮಿಸುವರು. ವಿಶೇಷ ಆಹ್ವಾನಿತರಾಗಿ ಬಸವರಾಜ ಈರಣ್ಣವರ, ಗೌಡಪ್ಪ.ಬಮ್ಮಪ್ಪಣ್ಣವರ, ಶರಣಪ್ಪ ಕುಬಸದ, ಸಂಗಮೇಶ ಹಾದಿಮನಿ ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕದ ವತಿಯಿಂದ ಸುರೇಶ್ ಬಣಗಾರ ಜನಪದ ಕಲಾವಿದರು ಮುಂಡರಗಿ, ಮಲ್ಲಪ್ಪ ಬಸಪ್ಪ ಹೊನಗಣ್ಣವರ, ಗೀ ಗೀ ಪದ ಕಲಾವಿದರು ಜಂತ್ಲಿಶಿರೂರ, ಕಲ್ಲಪ್ಪ ಬಣವಿ ಜನಪದ ಕಲಾವಿದರು ಲಕ್ಕುಂಡಿ ಇವರನ್ನು ಗೌರವಿಸಿ ಸನ್ಮಾನಿಸಲಾಗುವುದು. ಸಣ್ಣಪ್ಪ ಧರಣಿ ಹಾಗೂ ತಂಡದವರು ಜಂತ್ಲಿಶಿರೂರ, ಕರ್ನಾಟಕ ಜಾನಪದ ಕಲಾತಂಡ ಮುಂಡರಗಿ, ರಮೇಶ್ ಹಕ್ಕಿ ಹಾಗೂ ಶರಣಪ್ಪ ಜಗ್ಗಲ್ ತಂಡ ಕೋಟುಮಚಗಿ, ಜ್ಞಾನ ಪರಂಪರೆ ಜನಪದ ಕಲಾತಂಡ ಲಕ್ಕುಂಡಿ, ಶ್ರೀ ಪುಟ್ಟರಾಜ ಕ್ರೀಡಾ ಮತ್ತು ಸಾಂಸ್ಕೃತಿಕ ತಂಡ ಅಸುಂಡಿಯವರಿಂದ ಹಾಗೂ ಜಾನಪದ ಕಲಾವಿದರಾದ ಶ್ರೀಮತಿ ಸಾವಿತ್ರಿ ಲಮಾಣಿ ಹಾಗೂ ಶಿಕ್ಷಕ ಕಲಾವಿದರಾದ ಡಿ.ಸಿ.ನದಾಫ ಅವರಿಂದ ಜನಪದ ಸಂಭ್ರಮ ಕಾರ್ಯಕ್ರಮಗಳು ಜರುಗಲಿವೆ ಎಂದು ಜಿಲ್ಲಾ ಕಜಾಪ ಕಾರ್ಯದರ್ಶಿ ಪ್ರೊ.ಎನ್.ಎನ್.ಕಿಂದ್ರಿ ಮತ್ತು ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ಪ್ರೊ.ನಿಂಗಪ್ಪ.ಟಿ.ಪೂಜಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಮುಂಬೈ ಎಕ್ಸಪ್ರೆಸ್ ನಲ್ಲಿ ಬಂದಿಳಿದರು 124 ಜನ..!

ಮುಂಬೈನಲ್ಲಿದ್ದ ಜನರು ಇಂದು ಮುಂಬೈ-ಗದಗ ಎಕ್ಸಪ್ರೆಸ್ ರೈಲಿನ ಮೂಲಕ ಗದಗ ನಗರಕ್ಕೆ ಆಗಮಿಸಿದರು. ಇದರಲ್ಲಿ 124 ಜನರು ರೈಲಿನ ಮೂಲಕ ನಗರಕ್ಕೆ ಆಗಮಿಸಿದರು.

ತಾಲೂಕಾ ಆರೋಗ್ಯ ರಕ್ಷಾ ಸಮಿತಿ ಸಭೆ ನಿರ್ಭಯದಿಂದ ಕಾರ್ಯ ನಿರ್ವಹಿಸಿ: ವೈದ್ಯರಿಗೆ ಶಾಸಕ ರಾಮಣ್ಣ ಅಭಯ

ಉತ್ತರಪ್ರಭ ಸುದ್ದಿಶಿರಹಟ್ಟಿ : ಪ್ರಸ್ತುತ ಕೊರೊನಾ ಸಮಯದಲ್ಲೂ ಹಲವಾರು ಸಮಸ್ಯೆಗಳನ್ನು ಎದುರಿಸಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು…

ಲಕ್ಷ್ಮೇಶ್ವರದಲ್ಲಿ ಜನೌಷಧಿ ಕೇಂದ್ರ ಉದ್ಘಾಟಿಸಿದ ಸುನೀಲ್ ಮಹಾಂತಶೆಟ್ಟರ್

ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದ್ದು, ಜನೌಷಧಿ ಮೂಲಕ ಜನರಿಗೆ ಶೇ.10 ರಿಂದ ಶೇ.90ರವರೆಗೆ ರಿಯಾಯತಿ ದರದಲ್ಲಿ ಔಷಧಿ ವಿತರಿಸಲಾಗುತ್ತಿದೆ ಎಂದು ಕೆಸಿಸಿ ಬ್ಯಾಂಕ ನಿರ್ದೇಶಕ ಸುನೀಲ ಮಹಾಂತಶೆಟ್ಟರ ಹೇಳಿದರು.

ಅಪರೂಪದ ಕರಿನಾಗರ ಪ್ರತ್ಯಕ್ಷ, ಕುತೂಹಲ ಮೂಡಿಸೊದ ಕಪ್ಪು ಬಣ್ಣದ ಉರಗ..!

ಉತ್ತರಪ್ರಭ ಸುದ್ದಿ ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹೊರವಲಯದಲ್ಲಿರುವ ಜ್ಞಾನಮುದ್ರಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಅಪರೂಪದ…