ಜಾನಪದ ಸಂಭ್ರಮ ಹಾಗೂ ಕಲಾವಿದರಿಗೆ ಪುರಸ್ಕಾರ ಸಮಾರಂಭ

ಉತ್ತರಪ್ರಭ ಸುದ್ದಿ

ಗದಗ: ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಗದಗ ವತಿಯಿಂದ ನವಂಬರ್ 28ರಂದು ರವಿವಾರ ಸಾಯಂಕಾಲ 5:30ಘಂಟೆಗೆ ಬಣ್ಣದ ಮನೆ ಆರ್ಟ್ ಅಡ್ಡಾದ ಸಾಂಸ್ಕೃತಿಕ ಭವನ, .ಎಸ್. ಎಸ್ ಕಾಮರ್ಸ್ ಕಾಲೇಜ್ ಹತ್ತಿರ ಗದಗದಲ್ಲಿ “,ಜಾನಪದ ಸಂಭ್ರಮ ಹಾಗೂ ಕಲಾವಿದರಿಗೆ ಪುರಸ್ಕಾರಸಮಾರಂಭ ಏರ್ಪಡಿಸಲಾಗಿದೆ ಕಾರ್ಯಕ್ರಮವನ್ನು ಡಾ. ಎಸ್.ಬಾಲಾಜಿ, ರಾಜ್ಯಾಧ್ಯಕ್ಷರು ಕನ್ನಡ ಜಾನಪದ ಪರಿಷತ್ ಬೆಂಗಳೂರು ಉದ್ಘಾಟಿಸುವರು. ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಶಾಂತಕುಮಾರ್ ಬಿ ಭಜಂತ್ರಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರವಿಕಾಂತ್ ಅಂಗಡಿ ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಗದಗ, ಡಾ. ಬಿ ಹಿತ್ತಲಮನಿ, ಪ್ರಾಚಾರ್ಯರು ಪಿ ಪಿ ಜಿ ಶಿಕ್ಷಣ ಮಹಾವಿದ್ಯಾಲಯ ಗದಗ, ವಿಜಯ ಕಿರೇಸೂರ ಜಿಲ್ಲಾಧ್ಯಕ್ಷರು, ಚಿತ್ರ ಕಲಾ ಶಿಕ್ಷಕರ ಸಂಘ, ಗದಗ, ಪ್ರೊ. ರೇಖಾ ನೀರಲಗಿ, ಪ್ರೊ. ಶಕುಂತಲಾ..ಸಿಂಧೂರ ಆಗಮಿಸುವರು. ವಿಶೇಷ ಆಹ್ವಾನಿತರಾಗಿ ಬಸವರಾಜ ಈರಣ್ಣವರ, ಗೌಡಪ್ಪ.ಬಮ್ಮಪ್ಪಣ್ಣವರ, ಶರಣಪ್ಪ ಕುಬಸದ, ಸಂಗಮೇಶ ಹಾದಿಮನಿ ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕದ ವತಿಯಿಂದ ಸುರೇಶ್ ಬಣಗಾರ ಜನಪದ ಕಲಾವಿದರು ಮುಂಡರಗಿ, ಮಲ್ಲಪ್ಪ ಬಸಪ್ಪ ಹೊನಗಣ್ಣವರ, ಗೀ ಗೀ ಪದ ಕಲಾವಿದರು ಜಂತ್ಲಿಶಿರೂರ, ಕಲ್ಲಪ್ಪ ಬಣವಿ ಜನಪದ ಕಲಾವಿದರು ಲಕ್ಕುಂಡಿ ಇವರನ್ನು ಗೌರವಿಸಿ ಸನ್ಮಾನಿಸಲಾಗುವುದು. ಸಣ್ಣಪ್ಪ ಧರಣಿ ಹಾಗೂ ತಂಡದವರು ಜಂತ್ಲಿಶಿರೂರ, ಕರ್ನಾಟಕ ಜಾನಪದ ಕಲಾತಂಡ ಮುಂಡರಗಿ, ರಮೇಶ್ ಹಕ್ಕಿ ಹಾಗೂ ಶರಣಪ್ಪ ಜಗ್ಗಲ್ ತಂಡ ಕೋಟುಮಚಗಿ, ಜ್ಞಾನ ಪರಂಪರೆ ಜನಪದ ಕಲಾತಂಡ ಲಕ್ಕುಂಡಿ, ಶ್ರೀ ಪುಟ್ಟರಾಜ ಕ್ರೀಡಾ ಮತ್ತು ಸಾಂಸ್ಕೃತಿಕ ತಂಡ ಅಸುಂಡಿಯವರಿಂದ ಹಾಗೂ ಜಾನಪದ ಕಲಾವಿದರಾದ ಶ್ರೀಮತಿ ಸಾವಿತ್ರಿ ಲಮಾಣಿ ಹಾಗೂ ಶಿಕ್ಷಕ ಕಲಾವಿದರಾದ ಡಿ.ಸಿ.ನದಾಫ ಅವರಿಂದ ಜನಪದ ಸಂಭ್ರಮ ಕಾರ್ಯಕ್ರಮಗಳು ಜರುಗಲಿವೆ ಎಂದು ಜಿಲ್ಲಾ ಕಜಾಪ ಕಾರ್ಯದರ್ಶಿ ಪ್ರೊ.ಎನ್.ಎನ್.ಕಿಂದ್ರಿ ಮತ್ತು ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ಪ್ರೊ.ನಿಂಗಪ್ಪ.ಟಿ.ಪೂಜಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version