ಮಾನವ ಸಂಘ ಜೀವಿ ಸಮಾಜದಲ್ಲಿದ್ದುಕೊಂಡು ಹೊಂದಿಕೊAಡು ಜೀವನ ಸಾಗಿಸುತ್ತಿದ್ದಾನೆ. ಈ ಜೀವನ ಸಾಗಿಸುವುದಕ್ಕಾಗಿ ದಿನಂಪ್ರತಿ ದೇಹ ಮತ್ತು ಬುದ್ಧಿಯನ್ನು ದಂಡಿಸಿ ದುಡಿಯುತ್ತಲೇ ಇದ್ದಾನೆ. ಈ ದಣಿದ ದೇಹ ಮತ್ತು ಬುದ್ಧಿಗೆ ವಿಶ್ರಾಂತಿ ನೀಡಲು ಅವನು ಮೊರೆ ಹೋಗುವುದು ಮನರಂಜನೆಯನ್ನು.
ಈ ಮನರಂಜನೆಗಳಲ್ಲಿ ಸಂಗೀತವು ಒಂದು. ಸಂಗೀತವು ಪ್ರತಿ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವೆAದರೆ ತಪ್ಪಾಗಲಾರದು. ಜನನದಿಂದ ಮರಣದವರೆಗು ಸಂಗೀತ ಮಾನವನೊಂದಿಗೆ ಅವಿನಾಭಾವ ಸಂಬAಧ ಹೊಂದಿದೆ. ಮಗು ಗರ್ಭದಲ್ಲಿರುವಾಗಲೇ ಅದು ಸಂಗೀತದೊAದಿಗೆ ಸಂಬAಧ ಹೊಂದುತ್ತದೆ. ಮುಂದೆ ಅದು ಮಣ್ಣಲ್ಲಿ ಮಣ್ಣಾಗುವವರೆಗು ಸಾಗುತ್ತದೆ.
ಸೀಮಂತ, ನಾಮಕಣ, ಉಪನಯನ, ಮದುವೆ, ಜಾತ್ರೆ, ಹಬ್ಬ ಹರಿದಿನಗಳು, ಸಾವು ಹೀಗೆ ಮನುಷ್ಯನ ಜೀವನದಲ್ಲಿ ನಡೆಯುವ ಅತಿ ಮುಖ್ಯ ಕಾರ್ಯಕ್ರಮಗಳಲ್ಲಿ ಸಂಗೀತ ಇದ್ದೆ ಇರುತ್ತದೆ. ಜಾಗತೀಕರಣ ಮತ್ತು ತಂತ್ರಜ್ಞಾನದ ಯುಗದಲ್ಲಿ ಜೀವಿಸುತ್ತಿರುವ ಮಾನವನಿಗೆ ಕೆಲಸದಿಂದ ಸಿಗುವ ತೃಪ್ತಿಗಿಂತ ಒತ್ತಡವೇ ಹೆಚ್ಚು. ಹೀಗೆ ಎಷ್ಟೇ ಒತ್ತಡವಿದ್ದರು ಒಮ್ಮೆ ತಮಗಿಷ್ಟವಾದ ಸಂಗೀತವನ್ನು ಆಲಿಸಿದಾಗ ಆ ವ್ಯಕ್ತಿಗೆ ಹೊಸ ಚೈತನ್ಯ ಮೂಡುತ್ತದೆ. ಕೆಲಸದ ಕಡೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತದೆ. ಇದರಿಂದ ಆರೋಗ್ಯವು ಸಹ ಉತ್ತಮವಾಗುತ್ತದೆ.


ಮಾನವನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮಾನಸಿಕ ಆರೋಗ್ಯವು ಮುಖ್ಯ. ಹೀಗಾಗಿಯೇ ಮಾನಸಿಕ ಆರೋಗ್ಯ ಸುಧಾರಿಸಲು ಸಂಗೀತ ಚಿಕಿತ್ಸೆಯನ್ನು ನೀಡುತ್ತಾರೆ. ಇದರಿಂದ ಆತಂಕ, ಖಿನ್ನತೆ, ನಿದ್ರಾಹೀನತೆ, ಒತ್ತಡವು ಕಡಿಮೆಯಾಗುತ್ತದೆ. ಬೌದ್ಧಿಕ ಮಟ್ಟ, ಸಂತೋಷ, ಆತ್ಮತೃಪ್ತಿ ಹೆಚ್ಚಾಗುತ್ತದೆ.
ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಸಂಗೀತವು ವ್ಯಕ್ತಿಯ ಜೀವನಕ್ಕೆ ಬಹುಮುಖ್ಯವಾಗಿದೆ. ಸಂಗೀತವನ್ನು ಕೇವಲ ಮನರಂಜನೆಗೆ ಬಳಸದೆ, ಅದರಲ್ಲಿರುವ ಚಿಕಿತ್ಸಕ ಗುಣಗಳನ್ನು ಅರಿತುಕೊಂಡು ಸಂಗೀತ ಆಲಿಸಿದರೇ ಹೆಚ್ಚು ಪರಿಣಾಮಕಾರಿಯಾಗುತ್ತದೆ.

  • ಶ್ರೇಯಾ ಜೋರಾಪೂರ, ಸಂಗೀತ ವಿಭಾಗ
    ಕರಾಅವಿವಿ, ವಿಜಯಪುರ
Leave a Reply

Your email address will not be published. Required fields are marked *

You May Also Like

ಕೊರೋನಾ ಕಾವ್ಯ-10

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ದಾವಣಗೆರೆಯ ನ್ಯಾಯಾಂಗ ಇಲಾಖೆಯ ಉದ್ಯೋಗಿ ಟಿ.ಆರ್.ಹೇಮಂತ್ ಕುಮಾರ್ ಅವರು.

ಹೋರಾಟಗಾರ ರವಿಕೃಷ್ಣರೆಡ್ಡಿ ವಿಷಾದ: ನಮ್ಮ ನಾಯಕರ ಬ್ರಷ್ಟಾಚಾರವೂ ಒಂದು ಮೌಲ್ಯವೆಂದು ನಾವು ಅಂದುಕೊಂಡಿದ್ದೇವೆ

ಕರ್ನಾಟಕ ರಾಷ್ಟç ಸಮಿತಿ ಪಕ್ಷವನ್ನು ಹುಟ್ಟು ಹಾಕುವ ಮೂಲಕ ನಾಡಿನ ಉದ್ದಗಲಕ್ಕೂ ರಾಜ್ಯಾದ್ಯಂತ ಓಡಾಡುತ್ತಿದ್ದಾರೆ. ಇವರೊಂದಿಗೆ ಉತ್ತರಪ್ರಭ ಗೌರವ ಸಂಪಾದಕರಾದ ಪ್ರೊ.ಸಿದ್ದು ಯಾಪಲಪರವಿ ಅವರು ನಡೆಸಿದ ಸಂದರ್ಶನ

ಭಾರತದ ಏಕೈಕ ‘ಬಂಗಾರದ ಹುಲಿ’ ನೋಡಿದ್ದೀರಾ?: ಚಿನ್ನದ ಮೈಬಣ್ಣ, ಕೆಂಪು-ಕಂದು ಪಟ್ಟಿಗಳ ಸುಂದರಿ!

ಇದು ಅಪರೂಪದ ಹುಲಿ. ದೇಶದಲ್ಲಿ ಈಗ ಒಂದೇ ಒಂದು ಉಳಿದಿದೆ. ಅಸ್ಸಾಮಿನ ಅರಣ್ಯದಲ್ಲಿ ಖ್ಯಾತ ವನ್ಯಜೀವಿ ಫೋಟೊಗ್ರಾಫರ್ ಒಬ್ಬರು ಸೆರೆ ಹಿಡಿದ ಚಿತ್ರಗಳಿವು.

ಗದಗ ಜಿಲ್ಲೆ ಕೊರೋನಾ ಗ್ರಹಣ-2:ಈ ಕರಾಳ 24 ದಿನದ ಸರಾಸರಿ: ದಿನಕ್ಕೆ 11 ಪಾಸಿಟಿವ್, 3 ದಿನಕ್ಕೊಂದು ಸಾವು

ಮಂಗಳವಾರ ಗದಗ ಜಿಲ್ಲೆಯಲ್ಲಿ 9 ಹೊಸ ಕೋರೊನಾ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 331ಕ್ಕೆ ಏರಿದೆ. ಸಕ್ರಿಯ ಕೇಸ್ಗಳ ಸಂಖ್ಯೆ 143ಕ್ಕೆ ಏರಿದೆ. ಈ ಹಿಂದಿನ 23 ದಿನಗಳಲ್ಲಿ ಸೋಂಕು ಪ್ರಸರಣದ ತೀವ್ರತೆಯನ್ನು ಶೇಕಡಾವಾರು ಲೆಕ್ಕದಲ್ಲಿ ಸೋಮವಾರ ಪ್ರಕಟಿಸಿದ್ದೆವು.