ಇದು ಅಪರೂಪದ ಹುಲಿ. ದೇಶದಲ್ಲಿ ಈಗ ಒಂದೇ ಒಂದು ಉಳಿದಿದೆ. ಅಸ್ಸಾಮಿನ ಅರಣ್ಯದಲ್ಲಿ ಖ್ಯಾತ ವನ್ಯಜೀವಿ ಫೋಟೊಗ್ರಾಫರ್ ಒಬ್ಬರು ಸೆರೆ ಹಿಡಿದ ಚಿತ್ರಗಳಿವು.

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಈಗ ಚಿನ್ನದ ಸುಂದರಿಯದ್ದೇ ಸದ್ದು. ಚಿನ್ನದ ನೀರಿನಲ್ಲಿ ಒಂದು ಸಾಧಾರಣ ಹುಲಿಯ ಸ್ನಾನ ಮಾಡಿಸಿದಂತಿದೆ ಈ ಹುಲಿಯ ವರ್ಣ. ಸದ್ಯ ದೇಶದಲ್ಲಿ ಈ ಬಗೆಯ ಹುಲಿ ಒಂದೇ ಒಂದು ಇದ್ದು, ಇದನ್ನು ಖ್ಯಾತ ವನ್ಯಜೀವಿ ಛಾಯಾಗ್ರಹಕ ಮಯೂರೇಶ್ ಹಂದ್ರೆ ಅಸ್ಸಾಮಿನ ಖಜಿರಂಗ ಅರಣ್ಯದಲ್ಲಿ ಸೆರೆ ಹಿಡಿದಿದ್ದಾರೆ.

ಈ ಫೋಟೊಗಳನ್ನು ಟ್ವೀಟರ್ನಲ್ಲಿ ಶೇರ್ ಮಾಡಿರುವ ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್, ಈ ಅಪರೂಪದ ಹುಲಿ ಬಗ್ಗೆ ಸಣ್ಣ ಮಾಹಿತಿಯನ್ನೂ ಹಂಚಿಕೊಡಿದ್ದಾರೆ. ಈ ಬಂಗಾರದ ಹುಲಿಯನ್ನು ‘ಟ್ಯಾಬಿ ಟೈಗರ್’, ‘ಸ್ಟ್ರಾ ಬೆರ್ರಿ ಟೈಗರ್’ ಎಂದೂ ಕರೆಯುತ್ತಾರೆ.

ಬಂಗಾರದ ಹುಲಿ

ಅದರಲ್ಲಿ ಅಡಗಿರುವ ‘ಹಿಂಜರಿತದ ಜೀನ್’ ಚಿನ್ನದ ಬಣ್ಣಕ್ಕೆ ಕಾರಣ. ಅತಿಯಾದ ಮರಿಗಳನ್ನು ಹಡೆದಾಗ ಈ ಜೀನ್ ಮುನ್ನೆಲೆಗೆ ಬಂದು, ಹುಲಿಯ ಮೈಬಣ್ಣ ಚಿನ್ನದ ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ ಎಂದು ಪ್ರವೀಣ ತಿಳಿಸಿದ್ದಾರೆ.

ಕನ್ನಡದಲ್ಲಿ ಹಿಂದೆ ವಿಷ್ಣುವರ್ಧನ್ ನಟಿಸಿದ್ದ ಬಂಗಾರದ ಜಿಂಕೆ ಎಂಬ ಸಿನಿಮಾ ಒಂದು ಬಂದಿತ್ತು. ಅದರಲ್ಲಿ ಚಿನ್ನದಿಂದ ಮಾಡಿದ ಜಿಂಕೆಯ ಮೂರ್ತಿ ಪಡೆಯಲು ಹರಸಾಹಸ ಮಾಡುವ ಕತೆಯಿದೆ. ಆದರೆ ಈ ಬಂಗಾರದ ಹುಲಿಯಲ್ಲಿ ಬಂಗಾರವಿಲ್ಲ, ಬಂಗಾರದ ಬಣ್ಣ ಮಾತ್ರವಿದೆ.

Leave a Reply

Your email address will not be published. Required fields are marked *

You May Also Like

ವೈದ್ಯಕೀಯ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ರಾಜ್ಯದಾದ್ಯಂತ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ..!

ಉತ್ತರಪ್ರಭ ಸುದ್ದಿ ಕೊಪ್ಪಳ: ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದು ವರ್ಷ ಪಠ್ಯಕ್ರಮಗಳು ನಡೆಯಬೇಕಿತ್ತು. ಆದರೆ…

ಸರ್ಕಸ್ ಮಾಡಿದ್ರ ಸರ್ಕಾರ ನಡಿಸಾಕ್ ಆಗುತ್ತೇನು?: ಸರ್ಕಸ್ ಮಾಡಾಕ್ ಹೋಗಿದ್ ಕಿಟ್ಯಾನ್ ಸ್ಥಿತಿ ನೋಡ್ರಿ..!

ಕಟ್ಟಿ ಕಲ್ಲವ್ವ ಮತ್ ಕಿಡಗೇಡಿ ಕಿಟ್ಯಾ ಕಟ್ಟಿಗ್ ಕುಂತ್ ಸರ್ಕಸ್ ಮಾಡಿದ್ರ ಸರ್ಕಾರ ನಡಿಸಬಹುದು ಅಂತ ಪಂಟ್ ಹೊಡದಾರ. ಸರ್ಕಾರ ನಡಸಬೇಕು ಅನ್ನೋ ಭರದಾಗ ಸರ್ಕಸ್ ಮಾಡಾಕ್ ಹೋದ್ ಕಿಟ್ಯಾನ್ ಸ್ಥಿತಿ ಬಗ್ಗೆ ನಿಮ್ಮ ಉತ್ತರಪ್ರಭದ ಕಿಡಗೇಡಿ ಕಿಟ್ಯಾ ಅಂಕಣದಲ್ಲಿ ಹಾಸ್ಯ ಬರಹ

ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ!: 50 ಕ್ಕೂ ಹೆಚ್ಚು ಜನ ಮೃತ

ಇರಾಕ್: ಕೋವಿಡ್ ಆಸ್ಪತ್ರೆ ಒಂದರಲ್ಲಿ ಅಗ್ನಿ ದುರಂತ ಸಂಭವಿಸಿದ ಘಟನೆ ಇರಾಕ್​ನ ನಾಸಿರಿಯಾ ನಗರದಲ್ಲಿ ನಡೆದಿದೆ. ಘಟನೆಯಲ್ಲಿ 50 ಕ್ಕೂ ಹೆಚ್ಚು ಜನ ಸಾವೀಗಿಡಾಗಿದ್ದಾರೆ ಎನ್ನಲಾಗಿದೆ.

ಸೇವಾಭಾಯಾ ಮಾಲಾಧಾರಿತ ಬಂಜಾರಾ ಪಡೆ ಭಾಯಾಗಡದತ್ತ ಪಯಣ

ಆಲಮಟ್ಟಿ : ಸಂತ ಸೇವಾಲಾಲ್ ಜನ್ಮಸ್ಥಳ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಪುರಾತನ ಐತಿಹ್ಯವುಳ್ಳ ಧಾಮಿ೯ಕ…