ಇದು ಅಪರೂಪದ ಹುಲಿ. ದೇಶದಲ್ಲಿ ಈಗ ಒಂದೇ ಒಂದು ಉಳಿದಿದೆ. ಅಸ್ಸಾಮಿನ ಅರಣ್ಯದಲ್ಲಿ ಖ್ಯಾತ ವನ್ಯಜೀವಿ ಫೋಟೊಗ್ರಾಫರ್ ಒಬ್ಬರು ಸೆರೆ ಹಿಡಿದ ಚಿತ್ರಗಳಿವು.

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಈಗ ಚಿನ್ನದ ಸುಂದರಿಯದ್ದೇ ಸದ್ದು. ಚಿನ್ನದ ನೀರಿನಲ್ಲಿ ಒಂದು ಸಾಧಾರಣ ಹುಲಿಯ ಸ್ನಾನ ಮಾಡಿಸಿದಂತಿದೆ ಈ ಹುಲಿಯ ವರ್ಣ. ಸದ್ಯ ದೇಶದಲ್ಲಿ ಈ ಬಗೆಯ ಹುಲಿ ಒಂದೇ ಒಂದು ಇದ್ದು, ಇದನ್ನು ಖ್ಯಾತ ವನ್ಯಜೀವಿ ಛಾಯಾಗ್ರಹಕ ಮಯೂರೇಶ್ ಹಂದ್ರೆ ಅಸ್ಸಾಮಿನ ಖಜಿರಂಗ ಅರಣ್ಯದಲ್ಲಿ ಸೆರೆ ಹಿಡಿದಿದ್ದಾರೆ.

ಈ ಫೋಟೊಗಳನ್ನು ಟ್ವೀಟರ್ನಲ್ಲಿ ಶೇರ್ ಮಾಡಿರುವ ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್, ಈ ಅಪರೂಪದ ಹುಲಿ ಬಗ್ಗೆ ಸಣ್ಣ ಮಾಹಿತಿಯನ್ನೂ ಹಂಚಿಕೊಡಿದ್ದಾರೆ. ಈ ಬಂಗಾರದ ಹುಲಿಯನ್ನು ‘ಟ್ಯಾಬಿ ಟೈಗರ್’, ‘ಸ್ಟ್ರಾ ಬೆರ್ರಿ ಟೈಗರ್’ ಎಂದೂ ಕರೆಯುತ್ತಾರೆ.

ಬಂಗಾರದ ಹುಲಿ

ಅದರಲ್ಲಿ ಅಡಗಿರುವ ‘ಹಿಂಜರಿತದ ಜೀನ್’ ಚಿನ್ನದ ಬಣ್ಣಕ್ಕೆ ಕಾರಣ. ಅತಿಯಾದ ಮರಿಗಳನ್ನು ಹಡೆದಾಗ ಈ ಜೀನ್ ಮುನ್ನೆಲೆಗೆ ಬಂದು, ಹುಲಿಯ ಮೈಬಣ್ಣ ಚಿನ್ನದ ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ ಎಂದು ಪ್ರವೀಣ ತಿಳಿಸಿದ್ದಾರೆ.

ಕನ್ನಡದಲ್ಲಿ ಹಿಂದೆ ವಿಷ್ಣುವರ್ಧನ್ ನಟಿಸಿದ್ದ ಬಂಗಾರದ ಜಿಂಕೆ ಎಂಬ ಸಿನಿಮಾ ಒಂದು ಬಂದಿತ್ತು. ಅದರಲ್ಲಿ ಚಿನ್ನದಿಂದ ಮಾಡಿದ ಜಿಂಕೆಯ ಮೂರ್ತಿ ಪಡೆಯಲು ಹರಸಾಹಸ ಮಾಡುವ ಕತೆಯಿದೆ. ಆದರೆ ಈ ಬಂಗಾರದ ಹುಲಿಯಲ್ಲಿ ಬಂಗಾರವಿಲ್ಲ, ಬಂಗಾರದ ಬಣ್ಣ ಮಾತ್ರವಿದೆ.

Leave a Reply

Your email address will not be published. Required fields are marked *

You May Also Like

ಅಂದು ವಿಶ್ವ ಕಪ್ ತಂದು ಕೊಟ್ಟ ತಂಡದಲ್ಲಿ ಕ್ರಿಕೆಟಿಗ ಯಶ್ ಪಾಲ್ ಇನ್ನಿಲ್ಲ!

ನವದೆಹಲಿ: 1983 ರಲ್ಲಿ ಭಾರತ ತಂಡ ವಿಶ್ವ ಕಪ್ ತನ್ನ ಮುಡಿಗೇರಿಸಿಕೊಂಡಿತ್ತು. ಇದು ಭಾರತದ ಕ್ರೀಕೆಟ್ ಇತಿಹಾಸದಲ್ಲಿ ಮಹತ್ವದ ವರ್ಷವಾಗಿತ್ತು. ಕ್ರೀಕೆಟ್ ಇತಿಹಾಸದಲ್ಲಿ ಭಾರತಕ್ಕೊಂದು ಮೈಲುಗಲ್ಲಾದ 1983 ರ ವಿಶ್ವಕಪ್ ಪಡೆದ ತಂಡದ ಸದಸ್ಯರೊಬ್ಬರು ನಿಧನ ಹೊಂದಿದ್ದಾರೆ. ಹೌದು, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಯಶ್ ಪಾಲ್ ಶರ್ಮಾ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

ನನ್ನ ತೋಳಿನಾಸರೆ ನಿನಗೆ ಸಾಂತ್ವನ ನೀಡಲು ಕಾಯುತಿದೆ

ಪ್ರೇಮದ ಭಾಷೆ, ನೆನಪು,ತುಂಟಾಟಗಳ ಆಲಾಪವಾಗುತ್ತಿದೆ. ಸಾಂತ್ವಾನ ನೀಡಲು ತೋಳಿನಾಸರೆ ಸಖನಿಗಾಗಿ ಕಾಯುತ್ತಿವೆ. ಕಾಳಜಿ, ಪ್ರೀತಿ, ವಿಶ್ವಾಸ ಕಥೆಯ ಸಾರವಾಗಿದೆ. ಕಲ್ಪನಾ ಸಾಗರ್ ಅವರ ಲೇಖನವನ್ನು ನೀವು ಓದಿ…

ಕೋಟೆ ನಾಡಿನ ಪ್ರಕೃತಿ ಸೊಬಗು : ನೋಡ ಬನ್ನಿ ನಿಸರ್ಗದ ಐಸಿರಿ; ಮಲೆನಾಡಿನಂತೆ ಕಂಗೊಳಿಸುತ್ತಿವೆ ಗಜೇಂದ್ರಗಡದ ಬೆಟ್ಟಗಳು

ಐತಿಹಾಸಿಕ ನಗರಿ ಎಂದೇ ಖ್ಯಾತಿ ಪಡೆದ ಗಜೇಂದ್ರಗಡ ಸೇರಿ ಸುತ್ತಲಿನ ಬೆಟ್ಟ ಗುಡ್ಡಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಹಸಿರಿನ ನಡುವೆ ಮೈ ಮರೆತಷ್ಟು ಹೊಸದಾಗಿ ತೆರೆದುಕೊಳ್ಳುವ ಮಂಜು ಕಂಡು ಭೂ ಲೋಕದ ಸ್ವರ್ಗ ಎಂಬಂತೆ ಭಾಸವಾಗುತ್ತಿತ್ತು. ಇನ್ನು ಬೆಳಗಿನ ವೈಭವ ಮಲೆನಾಡಿನ ಬೆಟ್ಟ ಗುಡ್ಡಗಳಿಗೆ ಕಮ್ಮಿಯಿಲ್ಲ ಎನ್ನುವಷ್ಟು ಮಂಜು ಕವಿದಿತ್ತು.

ಬೆಳೆ ರಕ್ಷಣೆಗೊಬ್ಬ ಆಪ್ತ: ನೇತಾಡುವ ಖಾಲಿ ಬಿಯರ್ ಬಾಟಲ್ಲು!

ನರೇಗಲ್ಲ: ಖಾಲಿ ಕ್ವಾಟರು ಬಾಟ್ಲಿ ಯಾವುದಕ್ಕೂ ಬರಂಗಿಲ್ಲ ಅನ್ನೋ ತರಹ ಯೋಗರಾಜ್ ಭಟ್ರು ಹಾಡು ಬರದಿದ್ರು.…