ಇದು ಅಪರೂಪದ ಹುಲಿ. ದೇಶದಲ್ಲಿ ಈಗ ಒಂದೇ ಒಂದು ಉಳಿದಿದೆ. ಅಸ್ಸಾಮಿನ ಅರಣ್ಯದಲ್ಲಿ ಖ್ಯಾತ ವನ್ಯಜೀವಿ ಫೋಟೊಗ್ರಾಫರ್ ಒಬ್ಬರು ಸೆರೆ ಹಿಡಿದ ಚಿತ್ರಗಳಿವು.

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಈಗ ಚಿನ್ನದ ಸುಂದರಿಯದ್ದೇ ಸದ್ದು. ಚಿನ್ನದ ನೀರಿನಲ್ಲಿ ಒಂದು ಸಾಧಾರಣ ಹುಲಿಯ ಸ್ನಾನ ಮಾಡಿಸಿದಂತಿದೆ ಈ ಹುಲಿಯ ವರ್ಣ. ಸದ್ಯ ದೇಶದಲ್ಲಿ ಈ ಬಗೆಯ ಹುಲಿ ಒಂದೇ ಒಂದು ಇದ್ದು, ಇದನ್ನು ಖ್ಯಾತ ವನ್ಯಜೀವಿ ಛಾಯಾಗ್ರಹಕ ಮಯೂರೇಶ್ ಹಂದ್ರೆ ಅಸ್ಸಾಮಿನ ಖಜಿರಂಗ ಅರಣ್ಯದಲ್ಲಿ ಸೆರೆ ಹಿಡಿದಿದ್ದಾರೆ.

ಈ ಫೋಟೊಗಳನ್ನು ಟ್ವೀಟರ್ನಲ್ಲಿ ಶೇರ್ ಮಾಡಿರುವ ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್, ಈ ಅಪರೂಪದ ಹುಲಿ ಬಗ್ಗೆ ಸಣ್ಣ ಮಾಹಿತಿಯನ್ನೂ ಹಂಚಿಕೊಡಿದ್ದಾರೆ. ಈ ಬಂಗಾರದ ಹುಲಿಯನ್ನು ‘ಟ್ಯಾಬಿ ಟೈಗರ್’, ‘ಸ್ಟ್ರಾ ಬೆರ್ರಿ ಟೈಗರ್’ ಎಂದೂ ಕರೆಯುತ್ತಾರೆ.

ಬಂಗಾರದ ಹುಲಿ

ಅದರಲ್ಲಿ ಅಡಗಿರುವ ‘ಹಿಂಜರಿತದ ಜೀನ್’ ಚಿನ್ನದ ಬಣ್ಣಕ್ಕೆ ಕಾರಣ. ಅತಿಯಾದ ಮರಿಗಳನ್ನು ಹಡೆದಾಗ ಈ ಜೀನ್ ಮುನ್ನೆಲೆಗೆ ಬಂದು, ಹುಲಿಯ ಮೈಬಣ್ಣ ಚಿನ್ನದ ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ ಎಂದು ಪ್ರವೀಣ ತಿಳಿಸಿದ್ದಾರೆ.

ಕನ್ನಡದಲ್ಲಿ ಹಿಂದೆ ವಿಷ್ಣುವರ್ಧನ್ ನಟಿಸಿದ್ದ ಬಂಗಾರದ ಜಿಂಕೆ ಎಂಬ ಸಿನಿಮಾ ಒಂದು ಬಂದಿತ್ತು. ಅದರಲ್ಲಿ ಚಿನ್ನದಿಂದ ಮಾಡಿದ ಜಿಂಕೆಯ ಮೂರ್ತಿ ಪಡೆಯಲು ಹರಸಾಹಸ ಮಾಡುವ ಕತೆಯಿದೆ. ಆದರೆ ಈ ಬಂಗಾರದ ಹುಲಿಯಲ್ಲಿ ಬಂಗಾರವಿಲ್ಲ, ಬಂಗಾರದ ಬಣ್ಣ ಮಾತ್ರವಿದೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆ ಕೊರೋನಾ ಗ್ರಹಣ-2:ಈ ಕರಾಳ 24 ದಿನದ ಸರಾಸರಿ: ದಿನಕ್ಕೆ 11 ಪಾಸಿಟಿವ್, 3 ದಿನಕ್ಕೊಂದು ಸಾವು

ಮಂಗಳವಾರ ಗದಗ ಜಿಲ್ಲೆಯಲ್ಲಿ 9 ಹೊಸ ಕೋರೊನಾ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 331ಕ್ಕೆ ಏರಿದೆ. ಸಕ್ರಿಯ ಕೇಸ್ಗಳ ಸಂಖ್ಯೆ 143ಕ್ಕೆ ಏರಿದೆ. ಈ ಹಿಂದಿನ 23 ದಿನಗಳಲ್ಲಿ ಸೋಂಕು ಪ್ರಸರಣದ ತೀವ್ರತೆಯನ್ನು ಶೇಕಡಾವಾರು ಲೆಕ್ಕದಲ್ಲಿ ಸೋಮವಾರ ಪ್ರಕಟಿಸಿದ್ದೆವು.

ಆರೋಗ್ಯಕರ ಜೀವನಕ್ಕೆ ಯೋಗ ಅಗತ್ಯ:ಡಾ:ರಾಕೇಶ್

ಉತ್ತರಪ್ರಭ ಸುದ್ದಿ ನರೆಗಲ್ಲ:ಆರೋಗ್ಯಕರ ಜೀವನಕ್ಕೆ ಯೋಗ ಅಗತ್ಯ ಹಾಗೂ ದೈಹಿಕವಾಗಿ ಮಾನಸಿಕವಾಗಿ ಮನುಷ್ಯ ಯೋಗವನ್ನು ಪ್ರತಿದಿನ…

ಲಕ್ಕುಂಡಿ ಗ್ರಾಮ ಪಂಚಾಯತಿಗೆ ಆಡಳಿತಾಧಿಕಾರಿ ಯಾರು..?

ಗದಗ: ಅವಧಿ ಮುಗಿದ್ರು ಚೇರಿನ ವ್ಯಾಮೋಹ ಮುಗಿಲ್ಲವೇ..? ಆಡಳಿತಾಧಿಕಾರಿ ನೇಮಕವಾದ್ರು, ಅಧ್ಯಕ್ಷ ಪದವಿಯ ಅವಧಿ ಮುಗಿದಿರೋದು…

ಆಸ್ಪತ್ರೆ ಬೆಡ್ ಮ್ಯಾಲೆ ತಾಳಿ ಕಟ್ಟಿ ಮದ್ವಿ ಮಾಡಿಕೊಂಡು ಮಾನವೀಯತೆ ಮೆರೆದ ವರ

ಮದ್ವಿ ಅನ್ನೋದು ಸ್ವರ್ಗದಾಗ ನಿಶ್ಚಯ ಅನ್ನೋದು ಕೇಳಿವಿ. ಆದ್ರ ಅದೆಷ್ಟೋ ಮದ್ವಿ ಇನ್ನೇನು ತಾಳಿ ಕಟ್ ಬೇಕು ಅನ್ನೋ ಹೊತ್ನ್ಯಾಗ ನಿಂತಿರೋ ಉದಾಹರಣೆಗಳು ಭಾಳ್ ಅದಾವು.