ಇದು ಅಪರೂಪದ ಹುಲಿ. ದೇಶದಲ್ಲಿ ಈಗ ಒಂದೇ ಒಂದು ಉಳಿದಿದೆ. ಅಸ್ಸಾಮಿನ ಅರಣ್ಯದಲ್ಲಿ ಖ್ಯಾತ ವನ್ಯಜೀವಿ ಫೋಟೊಗ್ರಾಫರ್ ಒಬ್ಬರು ಸೆರೆ ಹಿಡಿದ ಚಿತ್ರಗಳಿವು.

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಈಗ ಚಿನ್ನದ ಸುಂದರಿಯದ್ದೇ ಸದ್ದು. ಚಿನ್ನದ ನೀರಿನಲ್ಲಿ ಒಂದು ಸಾಧಾರಣ ಹುಲಿಯ ಸ್ನಾನ ಮಾಡಿಸಿದಂತಿದೆ ಈ ಹುಲಿಯ ವರ್ಣ. ಸದ್ಯ ದೇಶದಲ್ಲಿ ಈ ಬಗೆಯ ಹುಲಿ ಒಂದೇ ಒಂದು ಇದ್ದು, ಇದನ್ನು ಖ್ಯಾತ ವನ್ಯಜೀವಿ ಛಾಯಾಗ್ರಹಕ ಮಯೂರೇಶ್ ಹಂದ್ರೆ ಅಸ್ಸಾಮಿನ ಖಜಿರಂಗ ಅರಣ್ಯದಲ್ಲಿ ಸೆರೆ ಹಿಡಿದಿದ್ದಾರೆ.

ಈ ಫೋಟೊಗಳನ್ನು ಟ್ವೀಟರ್ನಲ್ಲಿ ಶೇರ್ ಮಾಡಿರುವ ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್, ಈ ಅಪರೂಪದ ಹುಲಿ ಬಗ್ಗೆ ಸಣ್ಣ ಮಾಹಿತಿಯನ್ನೂ ಹಂಚಿಕೊಡಿದ್ದಾರೆ. ಈ ಬಂಗಾರದ ಹುಲಿಯನ್ನು ‘ಟ್ಯಾಬಿ ಟೈಗರ್’, ‘ಸ್ಟ್ರಾ ಬೆರ್ರಿ ಟೈಗರ್’ ಎಂದೂ ಕರೆಯುತ್ತಾರೆ.

ಬಂಗಾರದ ಹುಲಿ

ಅದರಲ್ಲಿ ಅಡಗಿರುವ ‘ಹಿಂಜರಿತದ ಜೀನ್’ ಚಿನ್ನದ ಬಣ್ಣಕ್ಕೆ ಕಾರಣ. ಅತಿಯಾದ ಮರಿಗಳನ್ನು ಹಡೆದಾಗ ಈ ಜೀನ್ ಮುನ್ನೆಲೆಗೆ ಬಂದು, ಹುಲಿಯ ಮೈಬಣ್ಣ ಚಿನ್ನದ ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ ಎಂದು ಪ್ರವೀಣ ತಿಳಿಸಿದ್ದಾರೆ.

ಕನ್ನಡದಲ್ಲಿ ಹಿಂದೆ ವಿಷ್ಣುವರ್ಧನ್ ನಟಿಸಿದ್ದ ಬಂಗಾರದ ಜಿಂಕೆ ಎಂಬ ಸಿನಿಮಾ ಒಂದು ಬಂದಿತ್ತು. ಅದರಲ್ಲಿ ಚಿನ್ನದಿಂದ ಮಾಡಿದ ಜಿಂಕೆಯ ಮೂರ್ತಿ ಪಡೆಯಲು ಹರಸಾಹಸ ಮಾಡುವ ಕತೆಯಿದೆ. ಆದರೆ ಈ ಬಂಗಾರದ ಹುಲಿಯಲ್ಲಿ ಬಂಗಾರವಿಲ್ಲ, ಬಂಗಾರದ ಬಣ್ಣ ಮಾತ್ರವಿದೆ.

Leave a Reply

Your email address will not be published. Required fields are marked *

You May Also Like

ಕಲಾಲೋಕದ ಮಾಯಾಜಾಲ

ನೂರಾರು ಕೆಲಸಗಳನ್ನು ಮಾಡಿಕೊಡುವ ಸಾವಿರಾರು ಯಂತ್ರಾಂಶ-ತಂತ್ರಾಂಶಗಳು ಐಟಿ ಜಗತ್ತಿನಲ್ಲಿ ನಮಗೆ ಸಿಗುತ್ತವೆ. ಇವುಗಳ ಪೈಕಿ ಅದ್ಭುತವೆನಿಸುವ ಮಟ್ಟದ ಜನಪ್ರಿಯತೆ ಗಳಿಸಿಕೊಳ್ಳುವುದು ಎಲ್ಲೋ ಕೆಲವು ಮಾತ್ರ. ಅದರಲ್ಲೂ ಕೆಲವು ಎಷ್ಟರಮಟ್ಟಿಗೆ ಜನರ ಮನ ಗೆಲ್ಲುತ್ತವೆಂದರೆ ಅವು ಮಾಡುವ ಕೆಲಸವನ್ನು ಅವುಗಳದೇ ಹೆಸರಿನಿಂದ ಗುರುತಿಸುವ ಪರಿಪಾಠ ಪ್ರಾರಂಭವಾಗಿಬಿಡುತ್ತದೆ.

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಗದಗ ಚುನಾವಣೆ-2022 ಜಯಗಳಿಸಿದ ಅಭ್ಯರ್ಥಿಗಳು

ಉತ್ತರಪ್ರಭ ಸುದ್ದಿಗದಗ: ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ…

ರೈತರ ಜೀವನದ ಮೇಲೆ ಬರೆ ಎಳೆದಂತಾಗುತ್ತದೆ: ಟಿ.ಈಶ್ವರ ಆರೋಪ

ಪ್ರಸ್ತುತ ರಾಷ್ಟçದಲ್ಲಿ ನಡೆದಿರುವ ರೈತ ಚಳುವಳಿ ಹಾಗು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡೆಯ ಕುರಿತು ಕಾಂಗ್ರೆಸ್ ಮುಖಂಡ ಅರಣ್ಯ ಕೈಗಾರಿಕೆ ನಿಗಮದ ಮಾಜಿ ಅಧ್ಯಕ್ಷ ಟಿ.ಈಶ್ವರ ಅವರೊಂದಿಗೆ ಉತ್ತರಪ್ರಭ ಪ್ರತಿನಿಧಿ ಕೆ.ಸದಾನಂದ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ..

ಸಂಕನೂರ್ ಅಂದಪ್ಪ ಅವರ ಸಮಾಜ ಸೇವೆ ಇತರರಿಗೂ ಆದರ್ಶ

ನಿಸ್ವಾರ್ಥ ಸಮಾಜ ಸೇವಕರ ಪೈಕಿ ಗಜೇಂದ್ರಗಡದ ಹೆಮ್ಮೆಯ ಸರಳ ಸಜ್ಜನಿಕೆಯ ಯುವಕ ಅಂದಪ್ಪ ಕಳಕಪ್ಪ ಸಂಕನೂರ ಕೂಡ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಾರದು. ಶಿಕ್ಷಣ ಪ್ರೇಮಿ ಅಂದಪ್ಪ ಅವರು, ಶ್ರೇಷ್ಠ ವರ್ತಕ ದಿ. ಬಂಗಾರಬಸಪ್ಪ ಸಂಕನೂರ ಅವರ ಮೊಮ್ಮಗನಾಗಿದ್ದು, ಸಂಕನೂರ ಅಂದಪ್ಪ ಎಂದೇ ಚಿರಪರಿಚಿತರು.