ರೋಣ: ಕೊಟ್ಟಿದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ, ಕೊಟ್ಟು ಕೆಟ್ಟಿತೆನಬೇಡ, ಕೊಟ್ಟು ಕುದಿಯಲು ಬೇಡ, ಕೊಟ್ಟು ಹಂಗಿಸಬೇಡ… ಹೀಗೆ ದಾನದ ಬಗ್ಗೆ 12ನೇ ಶತಮಾನದಲ್ಲಿ ಶರಣರು ಸಾರಿ ಹೇಳಿದ್ದಾರೆ. ಆದರೆ ಪಟ್ಟಣದ ವ್ಯಕ್ತಿಯೊಬ್ಬರು ದುಡಿದ ಬೆವರಿನ ಫಲದಲ್ಲಿ ಸಂಕಷ್ಟದಲ್ಲಿರುವವರಿಗೆ, ನೊಂದವರಿಗೆ ನೆರವು ನೀಡಿ, ಶರಣರ ನಿಜ ನಡೆಯನ್ನು ಪಾಲಿಸುವ ಮೂಲಕ ಮಾದರಿಯಾಗಿದ್ದಾರೆ.
ನಮ್ಮ ನಗರದ ಸೂಡಿ ಕ್ರಾಸಿನಲ್ಲಿ ಹೂ ಮಾರಿಕೊಂಡು ಉಪಜೀವನ ಮಾಡುತ್ತಿರುವ ಮೂಕಪ್ಪ, ಬಡತನ ಎಂದರೆ ಏನೆಂಬುದನ್ನು ಅರಿತು ಬಡತನದ ಬೆಗೆಯಲ್ಲಿ ಬೆಂದು ಬೆಳದ ವ್ಯಕ್ತಿ. ತಾನು ಅಲ್ಪ ಸ್ವಲ್ಪ ದುಡಿದ ದುಡಿಮೆಯ ಫಲದಲ್ಲಿ ಕರೋನ ವಾರಿಯರ್ಸ್ ಗೆ ಒಂದು ದಿನ ಊಟೋಪಚಾರ ಮಾಡಿಸಿದರೆ, ಇನ್ನೊಂದು ಗುಡಿಸಲುಗಳಲ್ಲಿರುವ ಚನ್ನದಾಸರ ಕುಟುಂಬಗಳಿಗೆ ಪಹಾರ ನೀಡಿದ್ದರು.
ಅಷ್ಟೇ ಅಲ್ಲದೇ ಭಾನುವಾರ ತಾಡಪತ್ರೆ ಹೊಲೆದು ಬದುಕು ಕಟ್ಟಿಕೊಂಡಿರುವ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ನೀಡಿರುವುದು ಕಂಡು ಬಂದಿತು. ಯಾವುದೇ ಪ್ರಚಾರ ಹಂಗಿಲ್ಲದೇ ನಿಷ್ಕಲ್ಮಶ ಮನಸ್ಸಿನಿಂದ ಈ ಸೇವಾ ಕಾರ್ಯದ ಮೂಲಕ ಮೂಕಪ್ಪ ಮಾದರಿಯಾಗಿದ್ದಾರೆ. ಕೈಲಾದಷ್ಟು ಸಹಾಯ ಮಾಡುತ್ತಿರುವ ಮೂಕಪ್ಪ ಅವರೇನು ದೊಡ್ಡ ಶ್ರೀಮಂತರಲ್ಲ. ಹೂವು ಮಾರಿ ಜೀವನ ಸಾಗಿಸುವ ಕುಟುಂಬ ವರದ್ದು. ಆದರೆ ಬಡತನದ ಬೇಗೆಯಲ್ಲಿ ಬೆಂದು ಬೆಳೆದವರಾದ ಮೂಕಪ್ಪ ಅವರಿಗೆ ಜೀವನದಲ್ಲಿ ಬಡತನವೇ ಬಹುದೊಡ್ಡ ಪಾಠ ಕಲಿಸಿದೆ. ಈ ಕಾರಣಕ್ಕಾಗಿ ಕೊರೊನಾದ ಸಂಕಷ್ಟದಲ್ಲಿ ಕೈಲಾದಷ್ಟಾದರೂ ಸ್ಪಂದಿಸಬೇಕು ಎನ್ನುವ ಕಾರ್ಯಕ್ಕೆ ಅಣಿಯಾಗಿದ್ದಾರೆ. ಮೂಕಪ್ಪ ಅವರ ಬಡವರ ಹಸಿವು ನಿಗಿಸುವ ಕಾರ್ಯ ವೈಖರಿ ಸಾರ್ವಜನಿಕರು ಮೆಚ್ಚುಗೆಗೆ ಪಾತ್ರರಾಗಿದ್ದಾನೆ.
ಒಟ್ಟಿನಲ್ಲಿ ದುಡಿಯುವ ಕೈ ಕಟ್ಟಿ ಹಾಕಿದ ಕರೋನ ಮಹಾಮಾರಿಯ ಹೊಡೆತಕ್ಕೆ ಎಷ್ಟೋ ಬಡ ಜೀವಿಗಳು ನಲುಗಿ ಹೋಗಿರುತ್ತವೆ. ಮದ್ಯೆ ಮೂಕಪ್ಪ ಹೂಗಾರ ತಮಗೆ ಯಾವುದೇ ಪ್ರಚಾರ ಬೇಡ. ಪ್ರಚಾರಕ್ಕಾಗಿ ಈ ಕಾರ್ಯ ಮಾಡುತ್ತಿಲ್ಲ ದು ಹೇಳಿದ್ದಾರೆ. ಇಂದು ಕೊರೊನಾ ವಿಚಾರ ಅದೆಷ್ಟೋ ಜನರಿಗೆ ಪ್ರಚಾರದ ದಾಳವಾಗಿರುವ ಸಂದರ್ಭದಲ್ಲಿ ಮೂಕಪ್ಪ ಅವರ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಕಾರ್ಉ ನಿಜಕ್ಕೂ ಮೆಚ್ಚುವಂತಹದ್ದು.


ಅವರ ಖುಷಿಯಲ್ಲಿ ತನ್ನ ಖುಷಿ ಕಂಡುಕೊಳ್ಳುವ ಮೂಕಪ್ಪ ದುಡಿಯುವ ಕೈ ಕಟ್ಟಿ ಹಾಕಿರುವ ಕರೋನ ಮಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರನ್ನು ಗುರುತಿಸಿ ಬಡತನದ ಹಸಿವು ಅರಿತ ಮೂಕಪ್ಪ ಹೂಗಾರ ತಾನು ದುಡಿದ ಅಲ್ಪ ಸ್ವಲ್ಪ ದುಡಿಮೆಯಿಂದ ಬಂದಂತಹ ಹಣದಲ್ಲಿ ದಿನಸಿ ಸಾಮಾನುಗಳನ್ನು ನೀಡಿ ಅವರ ಖುಷಿಯಲ್ಲಿ ತಾನು ಖುಷಿ ಕಂಡುಕೊಳ್ಳುತ್ತಾನೆ.

ಗಂಗಯ್ಯ ಗುಮಟಿ, ಸ್ಥಳೀಯರು


ಪ್ರಚಾರಕ್ಕಾಗಿ ಮಾಡುತ್ತಿಲ್ಲ ನಮಗೆ ಬಡತನದ ಹಸಿವು ಯಾವ ರೀತಿ ಇದೆ ಎಂಬ ಅನುಭವವಿದೆ. ದುಡಿಮೆ ಇಲ್ಲದೇ ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿರುವ ಕುಟುಂಬಗಳನ್ನು ಗುರುತಿಸಿ ಅಂತವರಿಗೆ ನಾವು ವ್ಯಾಪಾರ ಮಾಡಿ ಬಂದಂತಹ ಅಲ್ಪ ಲಾಭದಲ್ಲಿ ಆಹಾರ ಹಾಗೂ ದಿನಸಿ ಸಾಮಾನುಗಳನ್ನು ನೀಡುತ್ತಿದ್ದೇನೆ. ನನಗೆ ಯಾವುದೇ ಪ್ರಚಾರ ಬೇಡ. ನಾನು ಪ್ರಚಾರಕ್ಕಾಗಿ ಈ ಕಾರ್ಯ ಮಾಡುತ್ತಿಲ್ಲ.

-ಮೂಕಪ್ಪ ಹೂಗಾರ, ಸ್ಥಳೀಯರು

Leave a Reply

Your email address will not be published. Required fields are marked *

You May Also Like

ಮುಳಗುಂದದಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕದಲ್ಲಿ ತಾಡಪತ್ರಿ ಕಳ್ಳತನ.

ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯ್ತಿಯ ಘನತ್ಯಾಜ್ಯ ವೈಜ್ಞಾನಿಕ ನಿರ್ವಹಣೆಗಾಗಿ ಅಳವಡಿಸಿದ್ದ ಎಚ್.ಟಿ.ಪಿ ತಾಡಪತ್ರಿ ಒಂದು ಭಾಗದಲ್ಲಿ ಕತ್ತರಿಸಿ ಕಳ್ಳತನ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪಾನ ನಿಷೇಧ ಒಂದು ವಿಶ್ಲೇಷಣೆ

ಈಗ ನಲವತ್ತು ದಿವಸದಿಂದ ಬಂದ್ ಆಗಿದ್ದ ಮದ್ಯ ಮಾರಾಟ ಈಗ ಪುನರಾರಂಭವಾಗಿದೆ. ಈಗ ಕೆಲವರು ರಾಜಕೀಯ, ಕೆಲವರು ಸಾಮಾಜಿಕ ಕಳಕಳಿಯಿಂದ ಮತ್ತೆ ಕೆಲವರು ಸುಮ್ಮನೆ ಪ್ರಚಾರದ ಕಾರಣ ಪಾನ ನಿಷೇಧ ಮಾಡಿರಿ ಎಂದು ಸರಕಾರಕ್ಕೆ ಹೇಳುತ್ತಿದ್ದಾರೆ. ಈ ಬಗ್ಗೆ ಧಾರವಾಡದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್.ಎಚ್.ಮಿಟ್ಟಲಕೊಡ ಅವರ ವಿಶ್ಲೇಷಣೆ ಇಲ್ಲಿದೆ…

ಇಂಧನ ಬೆಲೆ ಮತ್ತು ಹಣದ ಮೌಲ್ಯ ಒಂದೇ ನಾಣ್ಯದ ಮುಖಗಳು

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಇಂಧನ ದರ ಏರಿಕೆ ಆರಂಭಗೊAಡಿದೆ. ಯಾವುದೇ ಚುನಾವಣೆ ನಂತರ ಇಂಧನ ಬೆಲೆ ಏರಿಸುವದು ಸಾಮಾನ್ಯ. ಈ ಸಂಪ್ರದಾಯ ಇಂದು-ನಿನ್ನೆಯದಲ್ಲ, ಹಲವು ದಶಕಗಳ ಸಂಪ್ರದಾಯ ಈಗಲೂ ಅಷ್ಟೇ ಅಚ್ಚು ಕಟ್ಟಾಗಿ ಎಲ್ಲಾ ಸರ್ಕಾರಗಳು ಪಾಲಿಸುತ್ತಿವೆ.

ಬೆಟ್ಟದ ಹೂವಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ

ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಇಂದು ಘೊಷಿಸಿದ್ದಾರೆ.ಇಂದು ಅರಮನೆ ಮೈದಾನದಲ್ಲಿ ನಡೆದ ಪುನೀತ್ ನಮನ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವರು ಈ ಘೊಷಣೆ ಮಾಡಿದ್ದಾರೆ