ರೋಣ: ಕೊಟ್ಟಿದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ, ಕೊಟ್ಟು ಕೆಟ್ಟಿತೆನಬೇಡ, ಕೊಟ್ಟು ಕುದಿಯಲು ಬೇಡ, ಕೊಟ್ಟು ಹಂಗಿಸಬೇಡ… ಹೀಗೆ ದಾನದ ಬಗ್ಗೆ 12ನೇ ಶತಮಾನದಲ್ಲಿ ಶರಣರು ಸಾರಿ ಹೇಳಿದ್ದಾರೆ. ಆದರೆ ಪಟ್ಟಣದ ವ್ಯಕ್ತಿಯೊಬ್ಬರು ದುಡಿದ ಬೆವರಿನ ಫಲದಲ್ಲಿ ಸಂಕಷ್ಟದಲ್ಲಿರುವವರಿಗೆ, ನೊಂದವರಿಗೆ ನೆರವು ನೀಡಿ, ಶರಣರ ನಿಜ ನಡೆಯನ್ನು ಪಾಲಿಸುವ ಮೂಲಕ ಮಾದರಿಯಾಗಿದ್ದಾರೆ.
ನಮ್ಮ ನಗರದ ಸೂಡಿ ಕ್ರಾಸಿನಲ್ಲಿ ಹೂ ಮಾರಿಕೊಂಡು ಉಪಜೀವನ ಮಾಡುತ್ತಿರುವ ಮೂಕಪ್ಪ, ಬಡತನ ಎಂದರೆ ಏನೆಂಬುದನ್ನು ಅರಿತು ಬಡತನದ ಬೆಗೆಯಲ್ಲಿ ಬೆಂದು ಬೆಳದ ವ್ಯಕ್ತಿ. ತಾನು ಅಲ್ಪ ಸ್ವಲ್ಪ ದುಡಿದ ದುಡಿಮೆಯ ಫಲದಲ್ಲಿ ಕರೋನ ವಾರಿಯರ್ಸ್ ಗೆ ಒಂದು ದಿನ ಊಟೋಪಚಾರ ಮಾಡಿಸಿದರೆ, ಇನ್ನೊಂದು ಗುಡಿಸಲುಗಳಲ್ಲಿರುವ ಚನ್ನದಾಸರ ಕುಟುಂಬಗಳಿಗೆ ಪಹಾರ ನೀಡಿದ್ದರು.
ಅಷ್ಟೇ ಅಲ್ಲದೇ ಭಾನುವಾರ ತಾಡಪತ್ರೆ ಹೊಲೆದು ಬದುಕು ಕಟ್ಟಿಕೊಂಡಿರುವ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ನೀಡಿರುವುದು ಕಂಡು ಬಂದಿತು. ಯಾವುದೇ ಪ್ರಚಾರ ಹಂಗಿಲ್ಲದೇ ನಿಷ್ಕಲ್ಮಶ ಮನಸ್ಸಿನಿಂದ ಈ ಸೇವಾ ಕಾರ್ಯದ ಮೂಲಕ ಮೂಕಪ್ಪ ಮಾದರಿಯಾಗಿದ್ದಾರೆ. ಕೈಲಾದಷ್ಟು ಸಹಾಯ ಮಾಡುತ್ತಿರುವ ಮೂಕಪ್ಪ ಅವರೇನು ದೊಡ್ಡ ಶ್ರೀಮಂತರಲ್ಲ. ಹೂವು ಮಾರಿ ಜೀವನ ಸಾಗಿಸುವ ಕುಟುಂಬ ವರದ್ದು. ಆದರೆ ಬಡತನದ ಬೇಗೆಯಲ್ಲಿ ಬೆಂದು ಬೆಳೆದವರಾದ ಮೂಕಪ್ಪ ಅವರಿಗೆ ಜೀವನದಲ್ಲಿ ಬಡತನವೇ ಬಹುದೊಡ್ಡ ಪಾಠ ಕಲಿಸಿದೆ. ಈ ಕಾರಣಕ್ಕಾಗಿ ಕೊರೊನಾದ ಸಂಕಷ್ಟದಲ್ಲಿ ಕೈಲಾದಷ್ಟಾದರೂ ಸ್ಪಂದಿಸಬೇಕು ಎನ್ನುವ ಕಾರ್ಯಕ್ಕೆ ಅಣಿಯಾಗಿದ್ದಾರೆ. ಮೂಕಪ್ಪ ಅವರ ಬಡವರ ಹಸಿವು ನಿಗಿಸುವ ಕಾರ್ಯ ವೈಖರಿ ಸಾರ್ವಜನಿಕರು ಮೆಚ್ಚುಗೆಗೆ ಪಾತ್ರರಾಗಿದ್ದಾನೆ.
ಒಟ್ಟಿನಲ್ಲಿ ದುಡಿಯುವ ಕೈ ಕಟ್ಟಿ ಹಾಕಿದ ಕರೋನ ಮಹಾಮಾರಿಯ ಹೊಡೆತಕ್ಕೆ ಎಷ್ಟೋ ಬಡ ಜೀವಿಗಳು ನಲುಗಿ ಹೋಗಿರುತ್ತವೆ. ಮದ್ಯೆ ಮೂಕಪ್ಪ ಹೂಗಾರ ತಮಗೆ ಯಾವುದೇ ಪ್ರಚಾರ ಬೇಡ. ಪ್ರಚಾರಕ್ಕಾಗಿ ಈ ಕಾರ್ಯ ಮಾಡುತ್ತಿಲ್ಲ ದು ಹೇಳಿದ್ದಾರೆ. ಇಂದು ಕೊರೊನಾ ವಿಚಾರ ಅದೆಷ್ಟೋ ಜನರಿಗೆ ಪ್ರಚಾರದ ದಾಳವಾಗಿರುವ ಸಂದರ್ಭದಲ್ಲಿ ಮೂಕಪ್ಪ ಅವರ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಕಾರ್ಉ ನಿಜಕ್ಕೂ ಮೆಚ್ಚುವಂತಹದ್ದು.


ಅವರ ಖುಷಿಯಲ್ಲಿ ತನ್ನ ಖುಷಿ ಕಂಡುಕೊಳ್ಳುವ ಮೂಕಪ್ಪ ದುಡಿಯುವ ಕೈ ಕಟ್ಟಿ ಹಾಕಿರುವ ಕರೋನ ಮಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರನ್ನು ಗುರುತಿಸಿ ಬಡತನದ ಹಸಿವು ಅರಿತ ಮೂಕಪ್ಪ ಹೂಗಾರ ತಾನು ದುಡಿದ ಅಲ್ಪ ಸ್ವಲ್ಪ ದುಡಿಮೆಯಿಂದ ಬಂದಂತಹ ಹಣದಲ್ಲಿ ದಿನಸಿ ಸಾಮಾನುಗಳನ್ನು ನೀಡಿ ಅವರ ಖುಷಿಯಲ್ಲಿ ತಾನು ಖುಷಿ ಕಂಡುಕೊಳ್ಳುತ್ತಾನೆ.

ಗಂಗಯ್ಯ ಗುಮಟಿ, ಸ್ಥಳೀಯರು


ಪ್ರಚಾರಕ್ಕಾಗಿ ಮಾಡುತ್ತಿಲ್ಲ ನಮಗೆ ಬಡತನದ ಹಸಿವು ಯಾವ ರೀತಿ ಇದೆ ಎಂಬ ಅನುಭವವಿದೆ. ದುಡಿಮೆ ಇಲ್ಲದೇ ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿರುವ ಕುಟುಂಬಗಳನ್ನು ಗುರುತಿಸಿ ಅಂತವರಿಗೆ ನಾವು ವ್ಯಾಪಾರ ಮಾಡಿ ಬಂದಂತಹ ಅಲ್ಪ ಲಾಭದಲ್ಲಿ ಆಹಾರ ಹಾಗೂ ದಿನಸಿ ಸಾಮಾನುಗಳನ್ನು ನೀಡುತ್ತಿದ್ದೇನೆ. ನನಗೆ ಯಾವುದೇ ಪ್ರಚಾರ ಬೇಡ. ನಾನು ಪ್ರಚಾರಕ್ಕಾಗಿ ಈ ಕಾರ್ಯ ಮಾಡುತ್ತಿಲ್ಲ.

-ಮೂಕಪ್ಪ ಹೂಗಾರ, ಸ್ಥಳೀಯರು

Leave a Reply

Your email address will not be published. Required fields are marked *

You May Also Like

ಕರುಳ ಕುಡಿಯ ಜೋಗುಳದಲಿ

ನೋವು! ಯಾತನೆ! ಯಮಯಾತನೆ! ಇಡೀ ದೇಹವನ್ನೇ ಒಳ್ಳಲ್ಲಿ ಹಾಕಿ ಕುಟ್ಟಿದ ಅನುಭವ. ಸಾಕಪ್ಪ ಸಾಕು ಈ ಜೀವನ ಎನಿಸುವಷ್ಟು ವೈರಾಗ್ಯ.ಈ ಬದುಕೇ ಬೇಡ. ತಡೆದುಕೊಳ್ಳಲಾರೆ… ಸಹಿಸಲಾರೆ… ಅನುಭವಿಸಲಾರೆ. ಕಣ್ಣು ಬಿಡಲೂ ತ್ರಾಣವಿಲ್ಲ. ಯಾವುದೋ ಕೈಗಳು ಬಂದು ತಡವುತ್ತಿವೆ. ಹಣೆ ಮುಟ್ಟಿ ನೋಡಿದ ಸ್ಪರ್ಶದ ಅನುಭವ. ಆದರೂ ಕಣ್ಗಳು ಮೆತ್ತಿಕೊಂಡಿವೆ. ನರಳುವುದು, ಮುಲುಗುವುದು, ಒದ್ದಾಡುವುದ ಬಿಟ್ಟರೆ ಏನೂ ಮಾಡಲಾಗದ ಅಸಹಾಯಕತೆ.

ನಂಬಿದ್ರ ನಂಬ್ರಿ-ಬಿಟ್ರಬಿಡ್ರಿ: 66 ವರ್ಷದ ಹೆಣ್ಮಗಳಿಗೆ 18 ತಿಂಗಳದಾಗ 8 ಮಕ್ಕಳು ಹುಟ್ಟ್ಯಾವು!

ಸತ್ತವ್ರು ಬದಕಿದ್ದು, ಬದುಕಿದವರು ಸತ್ತಿದ್ದು ಇಂಥ ಅದೆಷ್ಟ್ ಘಟನಾ ನಾವು ಕೇಳಿವಿ, ನೋಡಿವಿ. ಆದ್ರ ಎಂತೆಂಥ ಚಿತ್ರ-ವಿಚಿತ್ರ ಘಟನೆನಾ ನಾವು ಕೇಳಿವಿ, ನೋಡಿವಿ. ಆದ್ರ ಈ ಘಟನಾ ಮಾತ್ರ ನಾವು ಎಂದು ಕಾಣದ್ದು, ಕೇಳದ್ದು ಅಂದ್ರು ತಪ್ಪಾಗ್ಲಿಕ್ಕಿಲ್ಲ.

ಕೊರೊನಾ ಸಮಯದಲ್ಲಿ ನಿಮ್ಮ ತಲೆನೋವಿನ ಸಮಸ್ಯೆಯನ್ನು ಹಗುರವಾಗಿ ಪರಿಗಣಿಸಬೇಡಿ! (ಉತ್ತರ ಪ್ರಭ ವಿಶೇಷ)

ಬೆಂಗಳೂರು : ಜಗತ್ತಿನಾದ್ಯಂತ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಇದರಿಂದಾಗಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇದು ತೊಡ್ಡ ಆತಂಕಕ್ಕೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲದೇ, ದಿನದಿಂದ ದಿನಕ್ಕೆ ಸೋಂಕಿನ ಲಕ್ಷಣಗಳು ಕೂಡ ಬದಲಾಗುತ್ತಿವೆ.

ದುಗೂಡದ ಮದ್ಯೆಯೂ ಪರೀಕ್ಷೆ ಬರೆದ ವಿದ್ಯಾರ್ಥಿಗಳು..!: ಪರೀಕ್ಷೆ ಮುಗಿಸಿದ ಸಿದ್ದಪ್ಪ ಮನೆಗೆ ಮರಳಲೇ ಇಲ್ಲ..!

ಮುಂಡರಗಿ: ಗೆಳೆಯರಿಗೆ ಅಚ್ಚುಮೆಚ್ಚಾಗಿದ್ದಾತ. ನಿನ್ನೆಯಷ್ಟೆ ಭವಿಷ್ಯದ ನಿರ್ಣಾಯಕ ಘಟ್ಟದ ಮೊದಲ ಪರೀಕ್ಷೆ ಮುಗಿಸಿದ್ದ. ಸಹಪಾಠಿಗಳೊಂದಿಗೆ ಕೂಡಿ…