ನರಗುಂದ: (ಕೊಣ್ಣೂರ) ಅತೀವೃಷ್ಟಿ ಮಹಾಪುರದಿಂದ ತತ್ತರಿಸಿದ ರೈತರಿಗೆ ಕೋವೀಡ್ 19 ಮಹಾಮಾರಿಯು ಶಾಪವಾಗಿ ಪರೀಣಮಿಸಿರುವದರಿಂದ ರೈತರ ಜನಜೀವನ ಚಿಂತಾಜನಕವಾಗಿದೆ. ಅದರಲ್ಲೂ ವಿಷೇಶವಾಗಿ ತಾಲೂಕಿನ ಕೊಣ್ಣೂರ, ಶಿರೋಳ, ವಾಸನ, ಹಿರೇಕೊಪ್ಪ, ಚಿಕ್ಕನರಗುಂದ ರೈತರು ಮಲಪ್ರಭಾ ನದಿದಡದಲ್ಲಿರುವದರಿಂದ ತೋಟಗಾರಿಕೆ ಬೆಳೆಯ ಮೇಲೆ ಹೆಚ್ಚು ಅವಲಂಭಿತರಾಗಿದ್ದಾರೆ. ಇಲ್ಲಿನ ಪೇರಲ ಹಣ್ಣು ಹೆಚ್ಚು ಪ್ರಾಮುಖ್ಯೆತೆ ಪಡೆದಿದ್ದು, ಕಳೆದ ಒಂದುವರೆ ವರ್ಷದಿಂದ ಪ್ರಾಕೃತಿಕವಾಗಿ ನಷ್ಟ ಅನುಭವಿಸಿದ ರೈತರಿಗೆ ಕೋವೀಡ್ ಮಹಾಮಾರಿ ಬರೆಯಾಗಿದೆ.
ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೋಂಡು ರಾಜ್ಯ ಸರಕಾರ ಹಣ್ಣು ಬೆಳೆಗಾರರಿಗೆ ಪರಿಹಾರ ಘೋಷಿಸಿದ್ದು ತಾಲೂಕಿನ ಎಫ್.ಐ.ಡಿ ನೋಂದಣಿಯಾದ ಕೊಣ್ಣೂರ, ಶಿರೋಳ, ವಾಸನ, ಹಿರೇಕೊಪ್ಪ, ಚಿಕ್ಕನರಗುಂದ ಒಳಗೊಂಡತೆ 383 ರೈತರಿಗೆ ಹೆಕ್ಟೇರಗೆ (2.1/2 ಎಕರೆ) ಜಮೀನಿಗೆ 10000, ರೂಪಾಯಿಗಳನ್ನು ನಿಡುತ್ತಿದೆ.
ಈ ಹಿಂದೆ ಜಿ.ಪಿ.ಎಸ್ ತಂತ್ರಾಂಶದ ಮೂಲಕ ಮಾಹಿತಿ ಸಂಗ್ರಹಿಸಿದ್ದು ಮೇ.24 ರ ಸರಕಾರದ ಆದೇಶದಂತೆ ತಾಲೂಕಿನ ಕೊಣ್ಣೂರ, ಶಿರೋಳ, ವಾಸನ, ಹಿರೇಕೊಪ್ಪ, ಚಿಕ್ಕನರಗುಂದ ಎಫ.ಐ.ಡಿ ನೋಂದಣೆಯಾದ 383 ಹಣ್ಣು ಬೆಳೆಯುವ ರೈತರು ಹಾಗೂ ಎರಡು ಹೂ ಬೆಳೆಯುವ ರೈತರ ಪಟ್ಟಿ ತಯಾರಿಸಿದ್ದು ಪ್ರತಿ ಹೆಕ್ಟೇರ್ ಗೆ 10000 ರೂಪಾಯಿಗಳನ್ನು ಕೊಡಲಾಗುತ್ತಿದೆ. ರೈತರ ಆಧಾರ ಕಾರ್ಡ ಜೋಡನೆ ಇರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗುವುದು ಎಂದು ತಾಲೂಕಾ ತೋಟಗಾರಿಕೆ ಇಲಾಖೆ ಅಧಿಕಾರಿ ಆನಂದ ರಾ ನರಸನ್ನವರ ತಿಳಿಸಿದರು.

Leave a Reply

Your email address will not be published. Required fields are marked *

You May Also Like

ವಲಸೆ ಕಾರ್ಮಿಕರನ್ನು ಕಳುಹಿಸಿಕೊಡುವ ಜವಾಬ್ದಾರಿ ನಮ್ಮದು: ಸುಧಾಕರ್

ಅಧಿಕೃತ ಚಿಕ್ಕಬಳ್ಳಾಪುರ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಅರಮನೆ ಮೈದಾನದಲ್ಲಿ ಜನದಟ್ಟಣೆ ಗಮನಿಸಿ, ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಿ, ಜನರಿಗೆ ವೈದ್ಯಕೀಯ ಶಿಕ್ಷಣ ಸಚಿವರು ಸಮಾಧಾನ ಹೇಳಿದ ಘಟನೆ ನಡೆಯಿತು.

ಕುಂದ್ರಳ್ಳಿ ವಿದ್ಯಾರ್ಥಿಗಳು ಶಾಲಿಗ್ಹೋಗಾಕ್ 3ಕಿಮಿ ನಡಿಬೇಕಂತ!

ಕೊರೊನಾದಿಂದಾಗಿ ಲಾಕ್‌ಡೌನ್ ಮಾಡಲಾಗಿತ್ತು. ಇದಾದ ನಂತರ ಇತ್ತಿಚೆಗಷ್ಟೆ ಶಾಲೆಗಳು ಆರಂಭಿಸಲಾಗಿದೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹರಸಾಹಸ ಪಡುವಂತಾಗಿದೆ. ಇದಕ್ಕೆ ಕಾರಣ ಬಸ್ ಸೌಲಭ್ಯ ಕೊರತೆ.

ಅನುದಾನ ರಹಿತ ಶಿಕ್ಷಕರು ಶಾಪಗ್ರಸ್ಥರೇ? ನಿಕೃಷ್ಟರೇ? ದೌರ್ಭಾಗ್ಯವಂತರೇ?

ಕೊರೋನಾ ವೈರಸ್ ಎಲ್ಲರಿಗೂ ಸರಿಸಮಾನವಾಗಿ ಬಿಡದೆ ಬೆನ್ನತ್ತಿದೆ. ಸರ್ಕಾರೇತರ ಶಿಕ್ಷಕರಿಗೆ ಅದರಲ್ಲೂ ಅಸಂಖ್ಯಾತ ಅನುದಾನರಹಿತ ಶಿಕ್ಷಕರಿಗೆ…