ನರಗುಂದ: (ಕೊಣ್ಣೂರ) ಅತೀವೃಷ್ಟಿ ಮಹಾಪುರದಿಂದ ತತ್ತರಿಸಿದ ರೈತರಿಗೆ ಕೋವೀಡ್ 19 ಮಹಾಮಾರಿಯು ಶಾಪವಾಗಿ ಪರೀಣಮಿಸಿರುವದರಿಂದ ರೈತರ ಜನಜೀವನ ಚಿಂತಾಜನಕವಾಗಿದೆ. ಅದರಲ್ಲೂ ವಿಷೇಶವಾಗಿ ತಾಲೂಕಿನ ಕೊಣ್ಣೂರ, ಶಿರೋಳ, ವಾಸನ, ಹಿರೇಕೊಪ್ಪ, ಚಿಕ್ಕನರಗುಂದ ರೈತರು ಮಲಪ್ರಭಾ ನದಿದಡದಲ್ಲಿರುವದರಿಂದ ತೋಟಗಾರಿಕೆ ಬೆಳೆಯ ಮೇಲೆ ಹೆಚ್ಚು ಅವಲಂಭಿತರಾಗಿದ್ದಾರೆ. ಇಲ್ಲಿನ ಪೇರಲ ಹಣ್ಣು ಹೆಚ್ಚು ಪ್ರಾಮುಖ್ಯೆತೆ ಪಡೆದಿದ್ದು, ಕಳೆದ ಒಂದುವರೆ ವರ್ಷದಿಂದ ಪ್ರಾಕೃತಿಕವಾಗಿ ನಷ್ಟ ಅನುಭವಿಸಿದ ರೈತರಿಗೆ ಕೋವೀಡ್ ಮಹಾಮಾರಿ ಬರೆಯಾಗಿದೆ.
ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೋಂಡು ರಾಜ್ಯ ಸರಕಾರ ಹಣ್ಣು ಬೆಳೆಗಾರರಿಗೆ ಪರಿಹಾರ ಘೋಷಿಸಿದ್ದು ತಾಲೂಕಿನ ಎಫ್.ಐ.ಡಿ ನೋಂದಣಿಯಾದ ಕೊಣ್ಣೂರ, ಶಿರೋಳ, ವಾಸನ, ಹಿರೇಕೊಪ್ಪ, ಚಿಕ್ಕನರಗುಂದ ಒಳಗೊಂಡತೆ 383 ರೈತರಿಗೆ ಹೆಕ್ಟೇರಗೆ (2.1/2 ಎಕರೆ) ಜಮೀನಿಗೆ 10000, ರೂಪಾಯಿಗಳನ್ನು ನಿಡುತ್ತಿದೆ.
ಈ ಹಿಂದೆ ಜಿ.ಪಿ.ಎಸ್ ತಂತ್ರಾಂಶದ ಮೂಲಕ ಮಾಹಿತಿ ಸಂಗ್ರಹಿಸಿದ್ದು ಮೇ.24 ರ ಸರಕಾರದ ಆದೇಶದಂತೆ ತಾಲೂಕಿನ ಕೊಣ್ಣೂರ, ಶಿರೋಳ, ವಾಸನ, ಹಿರೇಕೊಪ್ಪ, ಚಿಕ್ಕನರಗುಂದ ಎಫ.ಐ.ಡಿ ನೋಂದಣೆಯಾದ 383 ಹಣ್ಣು ಬೆಳೆಯುವ ರೈತರು ಹಾಗೂ ಎರಡು ಹೂ ಬೆಳೆಯುವ ರೈತರ ಪಟ್ಟಿ ತಯಾರಿಸಿದ್ದು ಪ್ರತಿ ಹೆಕ್ಟೇರ್ ಗೆ 10000 ರೂಪಾಯಿಗಳನ್ನು ಕೊಡಲಾಗುತ್ತಿದೆ. ರೈತರ ಆಧಾರ ಕಾರ್ಡ ಜೋಡನೆ ಇರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗುವುದು ಎಂದು ತಾಲೂಕಾ ತೋಟಗಾರಿಕೆ ಇಲಾಖೆ ಅಧಿಕಾರಿ ಆನಂದ ರಾ ನರಸನ್ನವರ ತಿಳಿಸಿದರು.

Leave a Reply

Your email address will not be published. Required fields are marked *

You May Also Like

ಮಾಸ್ಕ್ ಧರಿಸದ್ದಕ್ಕೆ ಪ್ರಶ್ನೆ – ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಕಿಡಿಗೇಡಿಗಳು!

ಬೆಂಗಳೂರು : ಮಾಸ್ಕ್ ಧರಿಸದವರ ವಿರುದ್ಧ ದೂರು ದಾಖಲಿಸುತ್ತಿದ್ದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಮೂವರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಡಿಕೆಶಿ ಮಗಳ ಮದುವೆ; ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯ-ಅಮರ್ಥ್ಯ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಮಗ ಅಮರ್ಥ್ಯ ಹೆಗ್ಡೆ ಪ್ರೇಮಿಗಳ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ದೂರಿಯಾಗಿ ನಡೆದ ಮದುವೆಯಲ್ಲಿ ಶಾಸ್ತ್ರೋಕ್ತವಾಗಿ ಇಬ್ಬರೂ ಸಪ್ತಪದಿ ತುಳಿದಿದ್ದಾರೆ. ಎಸ್.ಎಂ.ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗ್ಡೆ ಹಾಗೂ ಡಿ.ಕೆ.ಶಿವಕುಮಾರ್ ಪುತ್ರಿಯ ಮದುವೆಯಲ್ಲಿ ಇಂದು ಕಾಂಗ್ರೆಸ್, ಬಿಜೆಪಿ ರಾಜಕೀಯ ನಾಯಕರೂ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇಂದಿನ ಮದುವೆಗೆ ಒಟ್ಟು ೮೦೦ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ನಗರ ಸಭೆ ಚುನಾವಣೆ: 4ನೇ ವಾರ್ಡಿನಲ್ಲಿ ಕಾಂಗ್ರೇಸ್   ಮತ್ತು 28ನೇ ವಾರ್ಡಿನಲ್ಲಿ ಬಿಜೆಪಿ

ಗದಗ ಬೇಟಗೇರಿ:ನಗರ ಸಭೆ 4 ಮತ್ತು  28 ನೇ ವಾರ್ಡನ ಮತ  ಎಣಿಕೆ ಮುಕ್ತಾಯ ,…

ಗಡಿಬಿಡಿಯ ಲಾಕ್ ಡೌನ್ ಜಾರಿ: ಗಲಿಬಿಲಿಯಲ್ಲಿ ಉತ್ಪಾದನಾ ಫ್ಯಾಕ್ಟರಿ

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಹಲವು ಜಿಲ್ಲೆ ಮತ್ತು ನಗರಗಳಲ್ಲಿ ದಿಢೀರ್ ಲಾಕ್ ಡೌನ್ ಹೇರಿದ್ದರಿಂದ ಕೈಗಾರಿಕಾ ಉತ್ಪಾದನಾ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ.