ಗಜೇಂದ್ರಗಡ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ, ಗಾಂಧಿವಾದಿ ಎಚ್.ಎಸ್. ದೊರೆಸ್ವಾಮಿಯವರನ್ನು ಕಳೆದುಕೊಳ್ಳುವ ಮೂಲಕ ದೇಶದ ಪ್ರಜಾಪ್ರಭುತ್ವ ಇಂದು ಬಡವಾಗಿದೆ ಎಂದು ಮಾಜಿ ಪುರಸಭೆ ಸದಸ್ಯ ಎಂ.ಎಸ್.ಹಡಪದ ಹೇಳಿದರು.
ಪಟ್ಟಣದಲ್ಲಿ ಡಿವೈಎಫ್‌ಐ ಹಾಗೂ ಎಸ್‌ಎಫ್‌ಐ ಸಂಘಟನೆಗಳ ವತಿಯಿಂದ ನಡೆದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ, ಗಳಿಸಿದ ಸ್ವಾತಂತ್ರ್ಯದ ಉಳಿವಿಗಾಗಿ ಹಾಗೂ ಸ್ವಾತಂತ್ರ್ಯದ ಆಶಯಗಳಿಗೆ ಧಕ್ಕೆ ಬಂದಾಗಲೆಲ್ಲಾ ಜೀವನದುದ್ದಕ್ಕೂ ಆಳುವ ಸರ್ಕಾರಗಳ ವಿರುದ್ಧ ರಾಜೀರಹಿತ ಹೋರಾಟ ನಡೆಸಿ, ಜನಸಾಮಾನ್ಯರ ಪರ ದ್ವನಿ ಎತ್ತಿದ ದೊರೆಸ್ವಾಮಿಯವರ ಚಿಂತನೆ ಅಮೋಘ. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಭಾರತದ ಸಮಸ್ಯೆಗಳನ್ನು ತುಂಬಾ ಹತ್ತಿರದಿಂದ ಕಂಡವರಾಗಿದ್ದರು. ಸರ್ಕಾರಗಳು ಸ್ವಾತಂತ್ರ್ಯ ಯೋಧರಿಗೆ ನೀಡುವ ಹಣಕಾಸು ಸಹಯ, ಸವಲತ್ತುಗಳಿಗೆ, ಗೌರವಗಳಿಗೆ ಕೈಚಾಚಿ ನಿಂತವರಲ್ಲ. ಬದಲಿಗೆ ಯಾವುದೇ ಸರ್ಕಾರಗಳು ಜನವಿರೋಧಿ ನೀತಿಗಳನ್ನು ಜಾರಿಗೆ ತಂದಾಗ ಅವರು ಪಕ್ಷ ಬೇದವೆನ್ನದೆ ಜನರ ನಡುವೆ ಬಂದು ಬೀದಿಯಲ್ಲಿ ಕುಳಿತು ಅನ್ಯಾಯದ ವಿರುದ್ಧ ಹೋರಾಟ ಮಾಡಿದವರು. ಅವರ ಹೋರಾಟ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.
ಡಿವೈಎಫ್‌ಐ ಮುಖಂಡ ಫಯಾಜ್ ತೋಟದ ಮಾತನಾಡಿ, ಮೂಲತಃ ಜಾತ್ಯಾತೀತರು ಹಿಂದುತ್ವ ರಾಜಕಾರಣದ ಕೋಮುವಾದಿ ಪ್ಯಾಸಿಸ್ಟ ಕಾರ್ಯಾಸೂಚಿಯನ್ನು ವಿರೋಧಿಸಿದ್ದರು. ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿಯಿಂದ ಮೈಲಿದೂರ ಸರಿದು ಕಾಂಗ್ರೆಸ್ ಅಥವಾ ಇತರೆ ಯಾವುದೇ ಪಕ್ಷವಾಗಲೀ ಅವರನ್ನು ತರಾಟೆಗೆ ತೆಗೆದುಕೊಳ್ಳುವುದನ್ನ ಬಿಡುತ್ತರಲಿಲ್ಲ. ದೇಶ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದರಿಂದ ದೇಶಕ್ಕೆ ಎರಡನೇಯ ಸ್ವಾತಂತ್ರ್ಯ ಹೋರಾಟದ ಅಗತ್ಯವಿದೆ ಎಂದು ಅವರು ದೃಡವಾಗಿ ನಂಬಿದವರಾಗಿದ್ದರು. ಹಲವು ತಲೆಮಾರುಗಳ ನಂತರ ಇಂತಹ ಮನುಷ್ಯ ಈ ಭೂಮಿಯ ಮೇಲೆ ಜೀವಂತವಾಗಿ ನಡೆದಾಡಿದ್ದಾನೆ ಎಂಬುದನ್ನು ನಂಬುವುದು ಕಷ್ಟವಾಗಬವುದು. ಆ ರೀತಿಯಲ್ಲಿ ಬದುಕು ಸಾಗಿಸಿದ ಮಹಾನ್ ವ್ಯಕ್ತಿತ್ವ ಅವರದಾಗಿತ್ತು ಎಂದರು.
ಬಾಲು ರಾಠೋಡ, ಮೈಬುಸಾಬ ಹವಾಲ್ದಾರ, ಫೀರು ರಾಠೋಡ ಇದ್ದರು.

Leave a Reply

Your email address will not be published. Required fields are marked *

You May Also Like

ಬಿಡುವೆನೆಂದರೂ ಬಿಡದಂತೆ ಕಾಡುತ್ತಿರುವ ಆಕೆ ಹೋಗಿದ್ದಾರೂ ಎಲ್ಲಿಗೆ..?

ಅದ್ಯಾಕೋ ಗೊತ್ತಿಲ್ಲ ನಾನು ಅವಳಿಗೆ ಫಿದಾ ಆಗಿಬಿಟ್ಟಿದ್ದೆ. ಕ್ಷಣವೂ ಬಿಟ್ಟಿರದಷ್ಟು ಗಾಢ ಪ್ರೀತಿ ಬೆಳೆದಿತ್ತು. ನಮ್ಮಿಬ್ಬರ ಪ್ರೀತಿಯ ಬೆಸುಗೆಗೆ ಮೂರು ವರ್ಷವಾಗಿತ್ತು. ನನ್ನ ಹೃದಯದ ಭಾಷೆ ಅವಳಿಗೆ ಗೊತ್ತು.

ನಾಟಕಕಲೆ ವಿಲಾಸಕ್ಕಲ್ಲ ವಿಕಾಸಕ್ಕೆ

ಆಂಗಿಕ ಭುವನಂ ಯಸ್ಯ ವಾಚಿಕಂ ಸರ್ವಾಂಜ್ಞಮಯA ಆಚಾರ್ಯಂ ಚಂದ್ರಿತಾರಾದಿತA ನಮಃ ಸಾತ್ವಿಕಂ ನಟೇಶಂ ಎಂದು ಆ ನಟವರನಾದ ಶಿವನ ಸ್ತುತಿಯನ್ನು ಕೃತಿ ಆರಂಭದಲ್ಲಿಯೇ ಮಾಡಿದಂತೆ ನಟನ ಆಂಗಿಕ ಅಭಿನಯ ಸಂಭಾಷಣೆ, ವೇಷಭೂಷಣದೊಂದಿಗೆ ಮಾನವನ ನಿತ್ಯ ಬದುಕಿನಲ್ಲಾದ ಭಾವನೆಯನ್ನು ಕಲಾವಿದನ ಅಭಿವ್ಯಕ್ತಿಯನ್ನು ರಂಭೂಮಿಯ ಮೂಲಕ ವ್ಯಕ್ತಪಡಿಸುವ ಮಾಧ್ಯಮವೇ ನಾಟಕ.

I Love You ಅಂತಹೇಳಿದ್ದ ಗೆಳೆಯಾಗ ಗೆಳತಿ ಕೊಟ್ಟಿದ್ದೇನು ಗೊತ್ತಾ..?

ತನ್ನ ಭಾಳ್ ದಿನದ್ ಗೆಳತಿಗೆ ಆತ, ಐಲೌಯು ಅಂತ ಹೇಳಬೇಕು ಅಂದ್ಕೊಂಡಿದ್ನಂತ. ಆದ್ರ ಅವನಿಗೊಂದು ಹುಚ್ಚು. ತಾನು ಐಲೌಯು ಅಂತ ಹೇಳಿದ್ ಕೂಡ್ಲೆ ತನ್ನ ಗೆಳತಿಗೆ ಫುಲ್ ಥ್ರಿಲ್ ಆಗಬೇಕು. ಆಕಿ ಜೀವನದಾಗ ಈ ಘಟನಾ ಮರಿಲಾರದಂತ ಅನುಭವ ಆಗಬೇಕು. ಅಂಥ ಸರ್ಪ್ರೈಜ್ ಕೊಡಬೇಕು ಅನ್ನೋ ಖಯಾಲಿಯೊಳಗ ಒಂದು ಪ್ಲ್ಯಾನ್ ಮಾಡಿದ್ನಂತ. ಐಲೌಯು ಅಂತ ಹೇಳಿದ್ ಕೂಡ್ಲೆ ಮುಂದೇನಾತು ಅನ್ನೋದಾ ಆತ ಮಾಡಿದ ಪ್ಲ್ಯಾನ್ ನ ಕಥಿ ನೋಡ್ರಿ..

ಕೊರೋನಾ : ನಗರ ಪ್ರದೇಶಗಳ ಆತಂಕ

ನವದೆಹಲಿ : ಕೊರೊನಾದಿಂದಾಗಿ ನಗರ ಪ್ರದೇಶಗಳು ಅಕ್ಷರಶಃ ಆತಂಕದಲ್ಲಿ ಇವೆ. ಕೊರೊನಾದಿಂದಾಗಿ ನಿರುದ್ಯೋಗ, ಬಡತನ, ಅಸಮಾನತೆ…