ನವದೆಹಲಿ : ಕೊರೊನಾ ವೈರಸ್ ನ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದೆ. ಹೀಗಾಗಿ ಕಂಪನಿ ನೌಕರಸ್ಥರು ಇನ್ನೂ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಹಲವರು ಈಗಾಗಲೇ ವರ್ಕ್ ಫ್ರಮ್ ಹೋಮ್ ಮುಗಿಸಿದ್ದಾರೆ. ಆದರೆ, ವರ್ಕ್ ಫ್ರಮ್ ಹೋಮ್ ನಿಂದಾಗಿ ಯಾವ ಯಾವ ರೋಗಗಳು ಬರುತ್ತವೆ ಗೊತ್ತಾ?
ವರ್ಕ್ ಫ್ರಮ್ ಹೋಮ್ ನಿಂದಾಗಿ ನಿದ್ರಾ ಹೀನತೆ, ಬೆನ್ನುನೋವು, ಒತ್ತಡ, ಖಿನ್ನತೆ ಮತ್ತಿತರ ಅಡ್ಡ ಪರಿಣಾಮಗಳನ್ನು ಹಲವು ನೌಕರಸ್ಥರು ಎದುರಿಸಿದ್ದಾರೆ. ಇನ್ನೂ ಹಲವರು ಈಗಾಗಲೇ ಎದುರಿಸುತ್ತಿದ್ದಾರೆ.
ವರ್ಕ್ ಫ್ರಮ್ ಹೋಮ್ ನಲ್ಲಿರುವ ಬಹುತೇಕ ನೌಕರಸ್ಥರು, ಲ್ಯಾಪ್ ಟಾಪ್ ಪರದೆ ಅಥವಾ ಮೊಬೈಲ್ ಫೋನ್ ಮುಂಭಾಗ ಕಳೆದಿದ್ದಾರೆ ಹಾಗೂ ಹಲವರು ಕಳೆಯುತ್ತಿದ್ದಾರೆ. ಸದ್ಯ ಇವರ ಎಲ್ಲ ಕೆಲಸವೂ ಆನ್ ಲೈನ್ ಆಗಿದೆ. ಆಗಾಗ್ಗೆ ತಲೆನೋವು ಮತ್ತು ಬೆನ್ನುನೋವು ಬರುತ್ತದೆ ಎಂದು ವರ್ಕ್ ಫ್ರಮ್ ಹೋಮ್ ನಲ್ಲಿದ್ದವರು ಹೇಳುತ್ತಿದ್ದಾರೆ.
ವರ್ಕ್ ಫ್ರಮ್ ಹೋಮ್ ನಿಂದ ವೈಯಕ್ತಿಕ ಮತ್ತು ವೃತ್ತಿಜೀವನದ ಹಾದಿಯನ್ನು ಮಂಕಾಗಿಸುವುದರ ಜೊತೆಗೆ ನಿದ್ರಾಹೀನತೆಯನ್ನುಂಟು ಮಾಡಿದೆ ಎಂದು ಹಲವರು ಹೇಳುತ್ತಿದ್ದಾರೆ. ತಿನ್ನುವುದು ಸಮಯ ಮೀರಿದ್ದರಿಂದಾಗಿ ಹಾಗೂ ಆಗಾಗ ತಿಂದಿದ್ದ ಪರಿಣಾಮ ನಡೆಯುವುದನ್ನು ಕೂಡ ಹಲವರು ನಿಲ್ಲಿಸಿದ್ದಾರೆ. ಹೀಗಾಗಿ ಹಲವರು ದಪ್ಪವಾಗಿದ್ದಾರೆ. ಆದರೆ, ರಾತ್ರಿ ಹೊತ್ತು ನಿದ್ದೆ ಬರುತ್ತಿಲ್ಲ ಎಂದು ಹಲವರು ಹೇಳಿದ್ದಾರೆ.
ಅನೇಕ ದೊಡ್ಡ ಐಟಿ ಕಂಪನಿಗಳು ಸೇರಿದಂತೆ ಅಂದಾಜು 90ರಿಂದ 95 ರಷ್ಟು ಐಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮನಸ್ಸು ಹಾಗೂ ದೇಹವನ್ನು ಸಮತೋಲನದಲ್ಲಿ ಇಡಲು ವ್ಯಾಯಾಮ, ಧ್ಯಾನ ಮಾಡುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಆದರೆ, ಬಹುತೇಕರು ಇದನ್ನು ಮಾಡಿಲ್ಲ.
ದೈಹಿಕ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡದ ಹಿನ್ನೆಲೆಯಲ್ಲಿ ಇಂತಹ ಅನುಭವವಾಗುತ್ತಿರುತ್ತದೆ. ಉದ್ಯೋಗ ಭದ್ರತೆಯ ಆತಂಕದಿಂದ ಕೆಲವರಿಗೆ ನಿದ್ರಾ ಹೀನತೆ ಉಂಟಾಗುತ್ತಿದೆ.
ವರ್ಕ್ ಫ್ರಮ್ ಹೋಮ್ ನಿಂದ ದೇಹದ ಆಕಾರವೇ ಬದಲಾಗಿದೆ. ತೀವ್ರ ಬೆನ್ನುನೋವು, ಭೀತಿ, ವಿರಾಮವೇ ಇಲ್ಲದಂತಾಗಿದೆ ಎಂದು ಬಹು ಗುರಗಾಂವ್ ಮೂಲದ ಐಟಿ ಉದ್ಯೋಗಿ ರಾಹುಲ್ ಕುಮಾರ್ ಹೇಳುತ್ತಾರೆ. ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಉಪದ್ರವಕಾರಿ ಸುದ್ದಿ ಕೂಡಾ ಜನರ ಮಾನಸಿಕ ಆರೋಗ್ಯದ ಮೇಲೆ ಹಾನಿಯನ್ನುಂಟು ಮಾಡುತ್ತಿದೆ ಎಂದು ಕೆಲ ಆರೋಗ್ಯ ತಜ್ಞರು ಹೇಳುತ್ತಾರೆ.

Leave a Reply

Your email address will not be published. Required fields are marked *

You May Also Like

ದಾವಣಗೆರೆ ಜಿಲ್ಲೆಯಲ್ಲಿ 21 ಕೊರೋನಾ ಪಾಸಿಟಿವ್: ರಾಜ್ಯದಲ್ಲಿ 642ಕ್ಕೆ ಏರಿಕೆ

ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗುತ್ತಿದೆ.

ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ಅಲ್ಪಾವಧಿ ಕೃಷಿ ಸಾಲ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ…

ರಾಜ್ಯದಲ್ಲಿಂದು 515 ಕೊರೊನಾ ಸೋಂಕಿತರಲ್ಲಿ 482 ಕೇಸ್ ಗೆ ಅಂತರಾಜ್ಯ ಹಿನ್ನೆಲೆ: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 515 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 4835 ಕ್ಕೆ ಏರಿಕೆಯಾದಂತಾಗಿದೆ.

ಸೂರಿಲ್ಲದೆ ಬೀದಿಗೆ ಬಂದ ಬದುಕು : ಪರಿಹಾರದ ನೀರಿಕ್ಷೆಯಲ್ಲಿ ಬಡ ಕುಟುಂಬ

ಉತ್ತರಪ್ರಭ ಸುದ್ದಿ ಲಕ್ಷ್ಮೇಶ್ವರ: ಪಟ್ಟಣದ ಬಸ್ತಿಕೆರೆಯ ಓಣಿಯ ನಿವಾಸಿ ಬಸವರಾಜ ನಿಂಗಪ್ಪ ಮಡಿವಾಳರ ಎಂಬ ವ್ಯಕ್ತಿಗೆ…