ನರೇಗಲ್: ಸಮೀಪದ ಕೂತಬಾಳ ಗ್ರಾಮದ ಬಸವ ಬಳಗ ಜಾನಪದ ಸಾಂಸ್ಕೃತಿಕ ಕಲಾತಂಡ ಅಧ್ಯಕ್ಷ ಹಾಗೂ ಸಗರ ಕಲಾ ಚಕ್ರವರ್ತಿ ಪ್ರಶಸ್ತಿ ಪುರಸ್ಕೃತ ಬಸವರಾಜ ಪಾಗದ ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.
ಜನಪದ ಸಾಹಿತ್ಯದಲ್ಲಿ ತಮ್ಮದೇಯಾದ ವಿನೂತ ಶೈಲಿಯ ಹಾಸ್ಯದ ಮೂಲಕ ಪಾಗದ ಮನೆಮಾತಾಗಿದ್ದರು. ಮಿಮಿಕ್ರಿಯೆ, ವಿವಿಧ ಜನಾಂಗದ ವೇಷ ಭೂಷಣಗಳೂಂದಿಗೆ ಅಭಿನಯಿಸಿ ಜನಪದ ಸಾರವನ್ನು ಜನರಿಗೆ ತಲುಪಿಸಿದ ಕೀರ್ತಿ ಬಸವರಾಜ ಪಾಗದ ಅವರಿಗೆ ಸಲ್ಲುತ್ತದೆ.
ಪ್ರಸ್ತುತ ದಿನಮಾನದಲ್ಲಿ ಜಾನಪದ ಕಲೆಗೆ ತನ್ನದೇಯಾದ ಕೊಡುಗೆ ನೀಡುತ್ತಿರುವ ಕೊತಬಾಳ ಗ್ರಾಮದಲ್ಲಿ ಹಿರಿಯ ಜಾನಪದ ಕಲಾವಿದ ಶಂಕ್ರಣ್ಣ ಸಂಕಣ್ಣವರ್ ಅವರೊಂದಿಗೆ ಇಪ್ಟಾ, ಅರುಣೋದಯ ಕಲಾ ತಂಡಗಳ ಮೂಲಕ ಜಾನಪದ ಕ್ಷೇತ್ರಕ್ಕೆ ತಮ್ಮನ್ನು ಪರಿಚಯಿಸಿಕೊಂಡ ಪಾಗದ ನಿಧನ ಜಾನಪದ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳು, ಅಭಿಮಾನಿಗಳನ್ನು ಅಗಲಿದ್ದಾರೆ.