ಗದಗ: ನಗರದ ಡಿ.ಸಿ.ಮಿಲ್ ತಳಗೇರಿ ಓಣಿಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ ಆಯೋಜಿಸಲಾಯಿತು.

ಸಭೆಯಲ್ಲಿ ಶಹರ ಪೊಲೀಸ್ ಠಾಣೆ ಸಿಪಿಐ ಸಾಲಿಮಠ ಮಾತನಾಡಿ, ಪೋಲಿಸ್ ಅಂದರೆ ಭಯ ಅಲ್ಲ, ಭರವಸೆ ಎಂದು ಹೇಳಿದರು ಹಾಗೂ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.

ಪಿಎಸ್‌ಐ ಪ್ರಕಾಶ ಡಿ ಮಾತನಾಡಿ, ಶಿಕ್ಷಣದ ಅರಿವು ಮಕ್ಕಳಲ್ಲಿ ಮನೆ ಮಾಡಬೇಕು ಅದು ಅವರ ಪ್ರಗತಿಗೆ ಹಾಗೂ ಸಮಾಜಕ್ಕೆ ಹಿರಿಮೆ ತರುತ್ತದೆ ಎಂದು ಮಕ್ಕಳ ಮನವೊಲಿಸಿದರು.

ಓಣಿಯ ಹಿರಿಯರಾದ ಶಿಕ್ಷಕ ಪಿ.ಎಚ್.ತಳಗೇರಿ ಮಾತನಾಡಿ, ಯುವಕರು ಮಧ್ಯಪಾನ ದಾಸರಾಗಿದ್ದಾರೆ. ಅಂತಹ ಯುವಕರು ದುಶ್ಚಟಗಳಿಂದ ದೂರವಿರಬೇಕೆಂದು ಸಲಹೆ ನೀಡಿದರು.

 ಬಾಮ್ಸೇಫ್ ಅಂಗ ಸಂಘಟನೆಯಾದ ಭಾರತೀಯ ಯುವ ಮೋರ್ಚಾ ಜಿಲ್ಲಾ ಸಂಯೋಜಕ ವಿಶಾಲ ಗೋಶಾಲ್ಯನ್ನವರ್ ಮಾತನಾಡಿ, ಪ್ರೆöÊವೆಟ್ ಡಿಫೆನ್ಸ ಆ್ಯಕ್ಟ್ ಹಾಗೂ ಅನುಚ್ಛೇದ 17 ಅದರ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಕಾನೂನು ಮತ್ತು ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳಾಗಬೇಕು ಎಂದು ಪೊಲೀಸ್ ಇಲಾಖೆಯವರಿಗೆ ಮನವಿ ಮಾಡಿಕೊಂಡರು.

 ಈ ಸಂದರ್ಭದಲ್ಲಿ ವಿಜಯ ಕಲ್ಮನಿ, ವೀಣಾ ಕಡಬಿನ, ಮಂಜುಳಾ ಅಗಸಿನಕೊಪ್ಪ, ಯಮನವ್ವ ಕಲ್ಮನಿ, ಪೋಲಿಸರೊಂದಿಗೆ ಎಸ್.ಸಿ./ಎಸ್.ಟಿ. ಜನರ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಚರ್ಚೆ ಮಾಡಿದರು. ರಾಘವೇಂದ್ರ ನಾಗನಾಥನಹಳ್ಳಿಯವರು ದಲಿತ ಎಂಬ ಪದ ಬಳಸುವುದು ಸೂಕ್ತವಲ್ಲ ಇದು ಅಸಂವಿಧಾನಿಕ ಪದ ಎಂದು ಪೋಲಿಸ್ ಅಧಿಕಾರಿಗಳಿಗೆ ಮನವಿ ಮಾಡಿಕೊಟ್ಟರು.

 ಈ ಸಂದರ್ಭದಲ್ಲಿ ವಿಶಾಲ ಹಾದಿಮನಿ, ಸಂತೋಷ ಅಕ್ಕಿ, ರಾಘು ದೊಡ್ಡಮನಿ, ಶಿವಾನಂದ ಸಕ್ರಿ, ಬಸವರಾಜ ಕಟ್ಟಿಮನಿ, ವಿನಾಯಕ ಕಟ್ಟಿಮನಿ, ವಿನಾಯಕ ಕಲ್ಮನಿ, ವಿನಾಯಕ ಸಂಗಾಪೂರ, ಸಂಜಯ ಪರಾಪೂರ, ಅಭಿಷೇಕ ಸಂಗಾಪೂರ, ಗಣೇಶ ಅಕ್ಕಿ, ಸುರೇಶ ಸಂಗಾಪೂರ, ಪ್ರಮೋದ ಸಕ್ರಿ, ಮೋಹನ ಅಗಸಿನಕೊಪ್ಪ, ರಾಹುಲ ಜಂಬಲದಿನ್ನಿ, ಮಂಜುನಾಥ ಕಲ್ಲೂರ, ಸಾಗರ ಕಟ್ಟಿಮನಿ, ಅಭಿ ಬಳ್ಳಾರಿ, ಶ್ರೀಶೈಲ ಪರಾಪೂರ, ಯಮನೇಶ ಬೇವಿನಕಟ್ಟಿ, ಹಾಗೂ ಭಾರತೀಯ ಯುವ ಮೋರ್ಚಾ ಕಾರ್ಯಕರ್ತರು, ತಳಗೇರಿ ಓಣಿಯ ಹಿರಿಯರು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *

You May Also Like

ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಲ್ಲಿಕೆಗೆ ಇರುವ ನಿಯಮಗಳೇನು?

ಬೆಂಗಳೂರು: 2021-22ನೇ ಸಾಲಿನ ಆಯವ್ಯಯದಲ್ಲಿ ಕಾಲೇಜುಗಳಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಶೌಚಾಲಯಗಳನ್ನು ಗ್ರಾಮ ಪಂಚಾಯಿತಿಗಳ ಮೂಲಕ ಉನ್ನತೀಕರಿಸಲು ಹಾಗೂ ನೀರಿನ ಸಂಪರ್ಕ ಒದಗಿಸಲು ಮುಂದಿನ ಎರಡು ವರ್ಷಗಳಲ್ಲಿ 100 ಕೋಟಿ ರೂಗಳನ್ನು ಮೀಸಲಿಡುವುದಾಗಿ ಘೋಷಿಸಲಾಗಿದೆ.

ಎಬಿವಿಪಿಯಿಂದ ಕಾಲೇಜು ಕಟ್ಟಡದ ದುರಸ್ತಿಗಾಗಿ ಪ್ರತಿಭಟನೆ.

ಉತ್ತರ ಪ್ರಭ ಸುದ್ದಿರೋಣ : ಪಟ್ಟಣದ ಸರಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು…

ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಕಾಂಗ್ರೆಸ್ : ಬಿಜೆಪಿ ಟೀಕೆ

ಕಾಂಗ್ರೆಸ್ ಪಕ್ಷ ತಮ್ಮ ತಪ್ಪುಗಳನ್ನು ಸಮರ್ಥಿಸುವುದೇ ತನ್ನ ಸಿದ್ದಾಂತ ಎಂದುಕೊಂಡಿದೆ ಎಂದು ಬಿಜೆಪಿ ತಮ್ಮ ಟ್ವೀಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಟೀಕಿಸಿದೆ.

ನಿವೃತ್ತ ಪ್ರಾಚಾರ್ಯ ಡಿ.ಡಿ. ಕಡೇಮನಿ ನಿಧನ

ಗದಗ: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರು ಮತ್ತು ನೆಲ್ಸನ್…