ನವದೆಹಲಿ : ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್ ಮತ್ತು ಫೇಸ್ ಬುಕ್, ವಾಟ್ಸ್ ಆಯಪ್ ಮುಂತಾದ ಸಾಮಾಜಿಕ ಜಾಲತಾಣಗಳು ನೆಲದ ನಿಯಮವನ್ನು ಪಾಲಿಸಬೇಕು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ತಿಳಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ದ್ವೇಷ ಹರಡುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದರು.

ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ರವಿಶಂಕರ್ ಪ್ರಸಾದ್, ‘ಅದರ ಟ್ವಿಟರ್, ಫೇಸ್ ಬುಕ್, ಲಿಂಕ್ಡ್ ಇನ್ ಅಥವಾ ವಾಟ್ಸ್ ಆಪ್ ಆಗಿರಲಿ, ಅವರಿಗೆ ಭಾರತದಲ್ಲಿ ಕೆಲಸ ಮಾಡಲು ಸ್ವಾಗತ. ಅವರಿಗೆ ಕೋಟಿ ಕೋಟಿ ಅನುಯಾಯಿಗಳು ಇದ್ದಾರೆ, ಆದರೆ ಅವರು ಭಾರತದ ಸಂವಿಧಾನ ಮತ್ತು ಕಾನೂನುಗಳಿಗೆ ಬದ್ಧರಿರಬೇಕು’ ಎಂದು ಹೇಳಿದರು.

ಅಮೆರಿಕದ ಕ್ಯಾಪಿಟಲ್ ಹಿಲ್ ಹಾಗೂ ಕೆಂಪುಕೋಟೆಯಲ್ಲಿ ನಡೆದ ಘಟನೆಗಳ ಬಗ್ಗೆ ಕೆಲವು ಮೈಕ್ರೋ ಬ್ಲಾಗಿಂಗ್ ವೇದಿಕೆಗಳು ದ್ವಂದ್ವ ಮಾನದಂಡಗಳನ್ನು ಹಾಕಿವೆ ಎಂದು ರವಿಶಂಕರ್ ಪ್ರಸಾದ್ ವಾಗ್ದಾಳಿ ಮಾಡಿದ್ದಾರೆ.

‘ಕ್ಯಾಪಿಟಲ್ ಹಿಲ್ ಸಮಯದಲ್ಲಿ, ನೀವು ಪೊಲೀಸರ ಕಾರ್ಯಾಚರಣೆ ಪರವಾಗಿ ನಿಂತಿದ್ದರೆ ಮತ್ತು ಕೆಂಪುಕೋಟೆಯಲ್ಲಿ ಹಿಂಸಾಚಾರದಲ್ಲಿ ನೀವು ವಿಭಿನ್ನ ನಿಲುವನ್ನು ತೋರಿದ್ದೀರಿ’ ಎಂದು ಟ್ವಿಟರ್ ವಿರುದ್ದ್ಗ ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣ ದೈತ್ಯರಿಗೆ ಎಚ್ಚರಿಕೆ ನೀಡಿದ ಅವರು ‘ಸಾಮಾಜಿಕ ಜಾಲತಾಣಗಳನ್ನು ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿ ಹರಡಿಸಲು ಬಳಸಿದರೆ. ನಾವು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು. ತಪ್ಪು ಮಾಹಿತಿ ಪತ್ತೆ ಹಚ್ಚಲು ವೇದಿಕೆ ಯನ್ನು ಮಾಡಿದ್ದೇವೆ ಮತ್ತು ಎಲ್ಲಾ ಫೇಕ್ ನ್ಯೂಸ್ ಐಟಂಗಳನ್ನು ಸಿಸ್ಟಂ ನಿಂದ ತೆಗೆಯಲಾಗುವುದು ಎಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣಗಳ ಹ್ಯಾಂಡಲ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಟ್ವಿಟರ್ ಗೆ ಮನವಿ ಮಾಡಿದ ನಂತರ ಈ ಹೇಳಿಕೆ ಹೊರ ಬಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್, ಸರ್ಕಾರದ ದೂರಿಗೆ ಅನುಗುಣವಾಗಿ ಕ್ರಮ ಕೈಗೊಳ್ಳುವುದಾಗಿ ಬ್ಲಾಗ್ ನಲ್ಲಿ ಪ್ರಕಟಿಸಿದೆ.

Leave a Reply

Your email address will not be published. Required fields are marked *

You May Also Like

ಟೀಕಾಕಾರರಿಗೆ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ: ಕೆ.ಸುಧಾಕರ್

ನಮ್ಮ ಬಗ್ಗೆ ವ್ಯಂಗ್ಯದ ಮಾತುಗಳನ್ನು ಆಡಿದ್ದವರಿಗೆ ಕ್ರಿಯಾಶೀಲ ಕಾರ್ಯ ಚಟುವಟಿಕೆಗಳ ಮೂಲಕ ಪ್ರತ್ಯುತ್ತರ ನೀಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ. ಎಂಟು ತಿಂಗಳ ರಾಜಕೀಯ ಗ್ರಹಣದ ಬಳಿಕ ಸಚಿವರಾದ ನಮ್ಮನ್ನು ಪ್ರತಿಪಕ್ಷದ ಕೆಲವರು ಲೇವಡಿ ಮಾಡಿದ್ದರು. ಇವರು ಏನು ಮಾಡುತ್ತಾರೋ ನಾವು ನೋಡುತ್ತೇವೆ ಎಂದು ಟೀಕೆಗಳ ಸುರಿಮಳೆ ಗೈದಿದ್ದರು. ಈಗ ಅವರಿಗೆಲ್ಲ ಉತ್ತರ ಸಿಕ್ಕಿರಬೇಕು ಎಂದು ಭಾವಿಸಿದ್ದೇನೆ ಎಂದರು.

ತಾಯಿಯನ್ನು ಜೀವಂತವಾಗಿಯೇ ಹೂತಿದ್ದ ಪಾಪಿ ಮಗ!

ಪಾಪಿ ಮಗನೊಬ್ಬ ತನ್ನ 79 ವರ್ಷದ ತನ್ನ ತಾಯಿಯನ್ನು ಜೀವಂತವಾಗಿಯೇ ಸಮಾಧಿ ಮಾಡಿರುವ ಘಟನೆ ನಡೆದಿದೆ.

80 ವರ್ಷದ ವೃದ್ಧಗ 80 ಕೋಟಿ ಕರೆಂಟ್ ಬಿಲ್ ಬಂದೈತಿ!

ಮನ್ಯಾಕ್ ಕಾಡೋ ಮಕ್ಕಳ್ ಕೈಯಾಗ್ ರೂಪಾಯಿ, ಎರಡ ರೂಪಾಯಿ ಕೊಡಾಕ ನಾವು ಹಿಂದ್-ಮುಂದ್ ನೋಡತಿವಿ. ಅಂಥಾದ್ರಾಗ‌ ಏಕಾಎಕಿ ತಿಂಗಳಿಗೊಮ್ಮೆ ಕಟ್ಟೋ ಬಿಲ್ ಕೋಟಿಗಟ್ಟಲೇ ಬಂದ್ರ ಬಿಲ್ ನೋಡಿದವ್ರ ಸ್ಥಿತಿ ಹ್ಯಾಂಗಾಗಿರಬಾರ್ದು.

ಈ ಮಹಿಳಾ ಪೇದೆಯ ಧೈರ್ಯಕ್ಕೆ ಇಡೀ ದೇಶವೇ ತಲೆ ಬಾಗುತ್ತಿದೆ!

ಹೈದರಾಬಾದ್ : ಚಲಿಸುತ್ತಿದ್ದ ರೈಲಿನಿಂದ ಕಾಲುಜಾರಿ ಬೀಳುತ್ತಿದ್ದ ವ್ಯಕ್ತಿಯನ್ನು ಮಹಿಳಾ ಪೊಲೀಸರೊಬ್ಬರು ಕಾಪಾಡಿರುವ ಘಟನೆ ಆಂಧ್ರ ಪ್ರದೇಶದ ವಿಶಾಕಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.