ತಿರುವನಂತಪುರ :  ಬಾರ್ ನಲ್ಲಿ ನಡೆದ ಗಲಾಟೆಯೊಂದು ಮರ್ಮಾಂಗ ಕತ್ತರಿಸಿದ ಘಟನೆಯಲ್ಲಿ ಅಂತ್ಯವಾಗಿದೆ.

ಈ ವಿಚಿತ್ರ ಘಟನೆ ಕೇರಳದ ಕುನ್ನಾಥುರನಲ್ಲಿ ನಡೆದಿದೆ. ಶರೀಫ್(28) ಎಂಬ ಯುವಕ 55 ವರ್ಷದ ಸುಲೇಮಾನ್ ಎಂಬುವವರ ಮರ್ಮಾಂಗ ಕತ್ತರಿಸಿದ್ದಾನೆ. ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮರ್ಮಾಂಗ ಮರು ಜೋಡಣೆ ಮಾಡಿದ್ದಾರೆ. 

ಬಾರ್ ಗೆ ತೆರಳುವುದಕ್ಕೂ ಮುನ್ನ ರಸ್ತೆಯಲ್ಲಿ ಶರೀಫ್ ಎಂಬಾತನ ಆಟೋ ಸುಲೇಮಾನ್ ರಿಹಾಇಶ್ ನ ಕಾರ್ ಗೆ ಡಿಕ್ಕಿ ಹೊಡೆದಿತ್ತು. ಈ ಕುರಿತು ಇಬ್ಬರ ನಡುವೆ ಸ್ಥಳೀಯ ಪಾರ್ಕ್ ನಲ್ಲಿ ಜಗಳ ನಡೆದಿತ್ತು. ಆದರೆ, ಮತ್ತೆ ಬಾರ್ ನಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮತ್ತೊಮ್ಮೆ ಜಗಳ ಶುರುವಾಗಿದೆ.

ಈ ಜಗಳ ವಿಕೋಪಕ್ಕೆ ತೆರಳಿ ಶರೀಫ್ ಕೋಪದಲ್ಲಿ ಸುಲೇಮಾನ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆ ನಂತರ ಮರ್ಮಾಂಗವನ್ನು ಹಲ್ಲಿನಿಂದ ಕಚ್ಚಿ ಕತ್ತರಿಸಿದ್ದಾನೆ. ಈ ಗಲಾಟೆಯಲ್ಲಿ ಬಾರ್ ಸಿಬ್ಬಂದಿಯ ಮೇಲೆಯೂ ಶರೀಫ್ ಹಲ್ಲೆ ನಡೆಸಿದ್ದಾನೆ. ಆನಂತರ ಬಾರ್ ಗ್ರಾಹಕರ ನೆರವಿನಿಂದ ಶರೀಫ್ ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. 

Leave a Reply

Your email address will not be published. Required fields are marked *

You May Also Like

ರಾಜ್ಯಸಭೆ ಕಲಾಪಕ್ಕೆ ಸರಕಾರವೇ ಹೊಣೆ: ಮಲ್ಲಿಕಾರ್ಜುನ ಖರ್ಗೆ

“ನಮ್ಮ ಧ್ವನಿಯನ್ನು ಹತ್ತಿಕ್ಕಲು ನಾವು ಬಿಡುವುದಿಲ್ಲ. ಇದಕ್ಕೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ ಮತ್ತು ನಾವು ಮೋದಿಜಿ ಯವರ ಯಾವುದೇ ಸರ್ವಾಧಿಕಾರಕ್ಕೆ ಅವಕಾಶ ನೀಡುವುದಿಲ್ಲ.”

ಕೊರೊನಾದಂತಹ ಗಂಡಾಂತರಗಳು ಇನ್ನೂ ಇವೆಯಂತೆ!

ಬೆಂಗಳೂರು : ಐದು ವರ್ಷಗಳ ಹಿಂದೆಯೇ ಕೊರೊನಾ ವೈರಸ್ ನಂತಹ ಗಂಡಾಂತರದ ಬಗ್ಗೆ ಎಚ್ಚರಿಕೆ ನೀಡಿದ್ದ ಉದ್ಯಮಿ ಬಿಲ್ ಗೇಟ್ಸ್ ಈಗ ಮತ್ತೆ ಎರಡು ಗಂಡಾಂತರಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಪಾಕ್, ಅಪ್ಘಾನಿಸ್ತಾನ ರಾಷ್ಟ್ರಗಳ ಮುಂದೆ ಕೊರೊನಾ ವಿಷಯದಲ್ಲಿ ನಾವು ಸೋತಿದ್ದೇವೆ – ರಾಹುಲ್

ನವದೆಹಲಿ : ಕೊರೊನಾ ವಿಷಯದಲ್ಲಿ ನಾವು ಸೋಲು ಕಂಡಿದ್ದೇವೆ. ನಮ್ಮ ಶತೃ ರಾಷ್ಟ್ರ ಪಾಕ್ ವಿರುದ್ಧ ನಮಗೆ ಮುಖಭಂಗವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕೊರೊನಾ ಬಲಿ: ಜಾಗತಿಕ ಮಟ್ಟದಲ್ಲಿ ಸಾವಿನ ಸಂಖ್ಯೆ ಎಷ್ಟು ಗೊತ್ತಾ..?

ನ್ಯೂಯಾರ್ಕ್: ಜಾಗತಿಕ ಮಟ್ಟದಲ್ಲಿ ಕೊರೊನಾ ಭಾರೀ ವಿನಾಶಕ್ಕೆ ಕಾರಣವಾಗಿದೆ. ಜಗತ್ತಿನಲ್ಲಿ ಒಟ್ಟು 4.25 ಲಕ್ಷ ಜನ…