ತಿರುವನಂತಪುರ : ಬಾರ್ ನಲ್ಲಿ ನಡೆದ ಗಲಾಟೆಯೊಂದು ಮರ್ಮಾಂಗ ಕತ್ತರಿಸಿದ ಘಟನೆಯಲ್ಲಿ ಅಂತ್ಯವಾಗಿದೆ.
ಈ ವಿಚಿತ್ರ ಘಟನೆ ಕೇರಳದ ಕುನ್ನಾಥುರನಲ್ಲಿ ನಡೆದಿದೆ. ಶರೀಫ್(28) ಎಂಬ ಯುವಕ 55 ವರ್ಷದ ಸುಲೇಮಾನ್ ಎಂಬುವವರ ಮರ್ಮಾಂಗ ಕತ್ತರಿಸಿದ್ದಾನೆ. ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮರ್ಮಾಂಗ ಮರು ಜೋಡಣೆ ಮಾಡಿದ್ದಾರೆ.
ಬಾರ್ ಗೆ ತೆರಳುವುದಕ್ಕೂ ಮುನ್ನ ರಸ್ತೆಯಲ್ಲಿ ಶರೀಫ್ ಎಂಬಾತನ ಆಟೋ ಸುಲೇಮಾನ್ ರಿಹಾಇಶ್ ನ ಕಾರ್ ಗೆ ಡಿಕ್ಕಿ ಹೊಡೆದಿತ್ತು. ಈ ಕುರಿತು ಇಬ್ಬರ ನಡುವೆ ಸ್ಥಳೀಯ ಪಾರ್ಕ್ ನಲ್ಲಿ ಜಗಳ ನಡೆದಿತ್ತು. ಆದರೆ, ಮತ್ತೆ ಬಾರ್ ನಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮತ್ತೊಮ್ಮೆ ಜಗಳ ಶುರುವಾಗಿದೆ.
ಈ ಜಗಳ ವಿಕೋಪಕ್ಕೆ ತೆರಳಿ ಶರೀಫ್ ಕೋಪದಲ್ಲಿ ಸುಲೇಮಾನ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆ ನಂತರ ಮರ್ಮಾಂಗವನ್ನು ಹಲ್ಲಿನಿಂದ ಕಚ್ಚಿ ಕತ್ತರಿಸಿದ್ದಾನೆ. ಈ ಗಲಾಟೆಯಲ್ಲಿ ಬಾರ್ ಸಿಬ್ಬಂದಿಯ ಮೇಲೆಯೂ ಶರೀಫ್ ಹಲ್ಲೆ ನಡೆಸಿದ್ದಾನೆ. ಆನಂತರ ಬಾರ್ ಗ್ರಾಹಕರ ನೆರವಿನಿಂದ ಶರೀಫ್ ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.