ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಯುವರಾಜ್ ಖಾತೆಯಿಂದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮಧ್ಯಾಹ್ನ ತುರ್ತು ಸುದ್ದಿಗೋಷ್ಠಿ ನಡೆಸಿದ ರಾಧಿಕಾ, ಯುವರಾಜ್ ಕಡೆಯಿಂದ ನಮಗೆ ಯಾವುದೇ ಹಣ ಬಂದಿಲ್ಲ, ತಮ್ಮ ಮೇಲಿನ ಆರೋಪ ಶುದ್ಧ ಸುಳ್ಳು ಎಂದು ಪ್ರತಿಕ್ರಿಯಿಸಿದರು.

ಯುವರಾಜ್ ಹಾಗೂ ತಮಗೂ ಬಹಳ ವರ್ಷದಿಂದ ಪರಿಚಯವಿದೆ. ಐತಿಹಾಸಿಕ ಸಿನಿಮಾ ನಿರ್ಮಾಣ ಮಾಡುವುದಕ್ಕೆ ನಾನು ಅವರು ಮಾತನಾಡಿದ್ದೇವು. ಆದರೆ, ಅವರು ಎರಡು ಬ್ಯಾನರ್‌ನಲ್ಲಿ ಸಿನಿಮಾ ಮಾಡುವುದಾಗಿ ಹೇಳಿದ ಕಾರಣ ನಾನು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಸಿನಿಮಾ ನಿಂತುಹೋಯಿತು. ಇನ್ನೂ ದೊಡ್ಡ ದೊಡ್ಡವರಿಗೇ ಯುವರಾಜ್ ಅವರು ಯಾಮಾರಿಸಿದ್ದಾರೆ. ಇನ್ನೂ ನನಗೆ ಯಾಮಾರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ನಾನು ಯಾರಿಗೂ ಮೋಸ ಮಾಡಿಲ್ಲ. ಬದಲಿಗೆ ನನಗೆ ಮೋಸ ಮಾಡಿರುವವರು ಬಹಳಷ್ಟು ಜನರಿದ್ದಾರೆ ಎಂದರು.

ಯುವರಾಜ್ ಕಷ್ಟದ ಸಮಯದಲ್ಲಿ ನಮ್ಮ ತಂದೆಯವರು, ಅವರಿಗೆ ಸಹಾಯ ಮಾಡಿದ್ದರು. ಹಲವು ದಿನಗಳ ಬಳಿಕ ನಮ್ಮನ್ನು ಭೇಟಿಯಾಗಿ ಯುವರಾಜ್ ಸಿನಿಮಾ ಪ್ರಪೋಸಲ್ ಇಟ್ಟಿದ್ದರು ಎಂದು ತಿಳಿಸಿದರು.

ಯುವರಾಜ್ ನಮ್ಮ ಕುಟುಂಬದ ಬಗ್ಗೆ ಭವಿಷ್ಯ ಹೇಳಿದ್ದರು. ನನ್ನ 16ನೇ ವಯಸ್ಸಿನಲ್ಲಿ ನನ್ನ ಜೀವನದಲ್ಲಿ ಆಗಲಿರುವ ಅನೇಕ ಬದಲಾವಣೆಗಳ ಬಗ್ಗೆ, ನನಗೆ ಹೆಣ್ಣು ಮಗುವಾಗುವ ಬಗ್ಗೆ ಕೂಡ ಆತ ಹೇಳಿದ್ದ. ಹೀಗಾಗಿ ಆತ ಸಿನಿಮಾ ನಿರ್ಮಾಣ ಮಾಡಬೇಕು ಅಂತ ಹೇಳಿದ್ದ ವೇಳೆಯಲ್ಲಿ ಒಪ್ಪಿಕೊಂಡಿದ್ದೇವು ಎಂದು ಹೇಳಿದರು.

ನಾನು ಎಲ್ಲೂ ಓಡಿ ಹೋಗಿಲ್ಲ, ಬೆಂಗಳೂರಿನಲ್ಲಿ ಇದ್ದೇನೆ. ನನ್ನ ಸಹೋದರ ಕೂಡ ಹಣಕಾಸಿನ ಸಂಬಂಧ ಹೊಂದಿಲ್ಲ. ಇದಲ್ಲದೇ ಯುವರಾಜ್ ಅವರೇ ನಮ್ಮನ್ನು ಭೇಟಿ ಮಾಡಿದರೇ ಹೊರತು ನಾವು ಅವರನ್ನು ಹುಡುಕಿಕೊಂಡು ಹೋಗಿ ಸಿನಿಮಾ ಮಾಡುವಂತೆ ಮನವಿ ಮಾಡಿಕೊಂಡಿಲ್ಲ ಎಂದು ಹೇಳಿದರು.

ನನ್ನ ಮೇಲಿನ ಆರೋಪಗಳನ್ನು ನಾನು ಎದುರಿಸಲು ಸಿದ್ದವಾಗಿದ್ದು, ನನ್ನ ತಾಯಿ ಇದರಿಂದ ತೀವ್ರವಾಗಿ ನೊಂದುಕೊಂಡಿದ್ದಾರೆ. ಆದರೆ, ಇದನ್ನು ನಾವು ಸಮರ್ಥವಾಗಿ ನಿಭಾಯಿಸುವೆ ಎಂದರು.

Leave a Reply

Your email address will not be published. Required fields are marked *

You May Also Like

ಬಿಗ್ ಬಿ ಮನೆಯಲ್ಲಿ ಕೌನ್ ಬನೇಗಾ ಕರೋಡಪತಿ ಪ್ರೋಮೊ ಶೂಟ್

ಬಾಲಿವುಡ್ ಖ್ಯಾತ ನಟ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಮನೆಯಿಂದಲೇ ಪ್ರೊಮೊ ವಿಡಿಯೊವನ್ನು ಚಿತ್ರೀಕರಿಸಲಾಗಿದ್ದು ಅದನ್ನು ಡಿಜಿಟಲ್ ಮೂಲಕ ದಂಗಲ್ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಚಿತ್ರೀಕರಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಇದ್ಯಾವ ಚಿತ್ರಕರಣ ಅಂತ ಕುತೂಹಲಾನಾ?

ಟಾಲಿವುಡ್ ನ ಈ ಪ್ರಿನ್ಸ್ ಗಳಿಗೆ ಇಂದು ಸುದಿನವಂತೆ! ಏಕೆ ಗೊತ್ತಾ?

ಹೈದರಾಬಾದ್ : ನಟ ಮಹೇಶ್ ಬಾಬು ಹಾಗೂ ಸ್ವೀಟಿ ಅನುಷ್ಕಾ ಶೆಟ್ಟಿ ಅವರಿಗೆ ಇಂದು ವಿಶೇಷ ದಿನವಂತೆ. ಈ ನಿಟ್ಟಿನಲ್ಲಿ ಇಬ್ಬರೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಅವನೇ ಶ್ರೀಮನ್ನಾರಾಯಣನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ!

ಬೆಂಗಳೂರು: ಅವನೇ ಶ್ರೀಮನ್ನಾರಾಯಣ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಲಾಕ್ ಡೌನ್ ಹಿನ್ನೆಲೆಯಲ್ಲಿ…

ಪಾಕ್ ರೂಪದರ್ಶಿಗೆ ಟ್ರೋಲ್ ಮಾಡುತ್ತಿರುವ ಕಿಡಿಗೇಡಿಗಳು!

ಕರಾಚಿ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಪಾಕ್ ರೂಪದರ್ಶಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.