ಗದಗ: ಬಿಜೆಪಿ ಮುಖಂಡ ಅನೀಲ್ ಮೆಣಸಿನಕಾಯಿ ಅವರು ಸಣ್ಣತನದ ರಾಜಕಾರಣ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಮಾಡಬಾರದು ಎಂದು ಎಚ್.ಕೆ.ಪಾಟೀಲ್ ಅಭಿಮಾನಿ ಬಳಗದ ವೆಂಕನಗೌಡ ಗೋವಿಂದಗೌಡ್ರ ಕಿಡಿಕಾರಿದ್ರು.

ಈ ಕುರಿತು ಗುರುವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಶಾಸಕ ಎಚ್.ಕೆ.ಪಾಟೀಲ್ ಸರ್ಕಾರದ ಆಹಾರದ ಕಿಟ್ ಗಳನ್ನು ಹುಲಕೋಟಿಯ ಕೆ.ವಿ.ಕೆಯಲ್ಲಿ ಇಟ್ಟಿದ್ದಾರೆ ಎಂಬ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದರು.

ಕೊರಾನಾ ಸಮಯದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ 50 ಸಾವಿರ ಕಿಟ್ ಗಳನ್ನು ವಿತರಿಸಿದ್ದಾರೆ. ಅಂತಹ ವ್ಯಕ್ತಿತ್ವ ರುವ ಒಬ್ಬ ನಾಯಕರು 3000 ಕಿಟ್ ಗಳನ್ನು ಏಕೆ ಒಯ್ದಿಟ್ಟುಕೊಳ್ಳುತ್ತಾರೆ. ಅದರಲ್ಲೂ ಎಚ್.ಕೆ.ಪಾಟೀಲ್ ಅವರು ತಮ್ಮ ಸ್ವಂತ ಹಣದಲ್ಲಿ ಕಿಟ್ ವಿತರಿಸಿದ್ದಾರೆಯೇ ಹೊರತು ಬೇರೆಯವರ ಹಣದಲ್ಲಿ ಅಲ್ಲ. ಆದರೆ ಶಾಸಕ ಎಚ್.ಕೆ.ಪಾಟೀಲ ಅವರ ಹೆಸರನ್ನು ಬಳಸಿ ಅನಿಲ್‌ ಮೆಣಸಿನಕಾಯಿ ಅವರು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಇಂತಹ ಸಣ್ಣತನ ಬಿಟ್ಟು ನಾಯಕರಂತೆ ವರ್ತಸಿಸುವಯದನ್ನು ಕಲಿಯಲಿ ಎಂದು ಸಲಹೆ ನೀಡಿದರು.

ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರನ್ನು ತೆಗೆಸಿರುವ ಕುರಿತು ಅನೀಲ್ ಅವರು ಆರೋಪಿಸಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗ ಹಾಗೂ ಆಡಳಿತ ವ್ಯವಸ್ಥೆ ಯಾರ ಕೈಯಲ್ಲಿದೆ ಎನ್ನುವುದನ್ನು ಸ್ವತಃ ಅನೀಲ್ ಅವರು ತಿಳಿದುಕೊಳ್ಳಬೇಕು. ಮಾತೆತ್ತಿದರೆ ಮಿಷನ್-30 ಎಂದು ಹೇಳುತ್ತಿದ್ದರು. ಆದರೆ ಈಗ ಮಿಷನ್ -13 ಕೂಡ ಬರಲ್ಲ ನ್ನುವುದು ಖಾತ್ರಿಯಾದ ಮೇಲೆ ಒಂದು ವೇಳೆ ಮುಂದಿನ ಸೋಲನ್ನು ಮತದಾರರ ಪಟ್ಟಿಯ ಹಣೆಗೆ ಕಟ್ಟುವ ಉದ್ದೇಶದಿಂದ  ಆರೋಪ ಮಾಡುತ್ತಿದ್ದಾರೆ ಎಂದರು.

ಮತದಾರರ ಪಟ್ಟಿ ಕುರಿತು ನಿಜವಾಗಿಯೂ ಆರೋಪಿಸಬೇಕಾಗಿದ್ದು ನಾವು. ಸರ್ಕಾರ ಅವರದ್ದೇ ಇರುವಾಗ ಬಿಜೆಪಿ ಮುಖಂಡರೊಬ್ಬರು ಈ ರೀತಿ ಆರೋಪ ಮಾಡಿದರೆ ಜನ ಸುಮ್ಮನಿರುವುದಿಲ್ಲ. ಜನ ಜಾಣರಿದ್ದಾರೆ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ನಮ್ಮ ಕುಟುಂಬದಲ್ಲಿಯೇ ಮತದಾರರ ಪಟ್ಟಿಯಲ್ಲಿ ವಾರ್ಡ್ ಸಂಖ್ಯೆಗಳ ಬದಲಾವಣೆಯಾಗಿವೆ. ಹಾಗಾದರೆ ಈ ಬಗ್ಗೆ ನಾನು ಯಾರ ಮೇಲೆ ಆರೋಪ ಮಾಡಬೇಕು ಎಂದು ಪ್ರಶ್ನಿಸಿದರು.

     ಅನೀಲ್ ಮೆಣಸಿನಕಾಯಿ ಅವರಿಗೆ ಶಾಸಕ ಎಚ್.ಕೆ.ಪಾಟೀಲ್ ಅವರ ಹೆಸರು ತೆಗೆದುಕೊಳ್ಳದಿದ್ದರೇ ನಿದ್ದೇ ಬರುವಂತೆ ಕಾಣುತ್ತಿಲ್ಲ. ಇವರು ಎಚ್.ಕೆ.ಪಾಟೀಲ್ ಅವರ ಮೇಲೆ ಆರೋಪಿಸಿ ಮನವಿ ನೀಡಿದರೂ ಸ್ವತಃ ಜಿಲ್ಲಾಧ್ಯಕ್ಷರೇ ಪಾಲ್ಗೊಂಡಿಲ್ಲ. ಇವರಲ್ಲಿಯೇ ನಾಲ್ಕು ಗುಂಪುಗಳಿವೆ. ಮೆಣಸಿನಕಾಯಿ ಅವರಿಗೆ ಒಳ್ಳೆಯ ಭವಿಷ್ಯವಿದೆ. ಆದರೆ ಇಂತಹ ಸಣ್ಣತನದ ರಾಜಕಾರಣ ಬಿಡಬೇಕು. ಒಬ್ಬ ಶಾಸಕರು ಬಂದ ಕಿಟ್ ಗಳನ್ನು ವಿತರಿಸಲು ತಮಗೆ ಅನುಕೂಲವಾಗುವ ಪ್ರದೇಶದಲ್ಲಿಟ್ಟಿರಬಹುದು. ಈ ಬಗ್ಗೆ ಸ್ವತಃ ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಪಷ್ಟಿಕರಣ ನೀಡಿದ್ದಾರೆ. ಆದರೆ ಶಾಸಕ ಎಚ್.ಕೆ.ಪಾಟೀಲ್ ಅವರು ಇಂತಹ ಯಾವುದೇ ಆರೊಪಕ್ಕೆ ಕಿವಿಗೊಡುವುದಿಲ್ಲ. ಜೊತೆಗೆ ಪ್ರತಿಕ್ರೀಯೇ ಕೂಡ ಕೊಡುವುದಿಲ್ಲ. ದನ್ನೆ ಬಂಡವಾಳವಾಗಿಸಿಕೊಂಡು ಈ ರೀತಿ ದೊಡ್ಡವರ ಹೆಸರು ಬಳಸಿಕೊಂಡು ಸಣ್ಣತನದ ರಾಜಕಾರಣ ಮಾಡಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿನಾಯಕ ಬಳ್ಳಾರಿ, ಪ್ರಕಾಶ ನಿಡಗುಂದಿ, ಚಂದ್ರು ಕರಿಸೋಮನಗೌಡ್ರ, ರಮೇಶ್ ಕಟ್ಟಿಮನಿ, ರಾಜು ಅಣ್ಣೀಗೇರಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಐಪಿಎಲ್ ಬೆಟ್ಟಿಂಗ್ – ಧಾರವಾಡದಲ್ಲಿ ನಾಲ್ವರ ಬಂಧನ!

ಧಾರವಾಡ : ಅವಳಿ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ಮಾಡಿದ ಪೊಲೀಸರು ನಾಲ್ವರನ್ನು ಬಂಧಿಸಲಾಗಿದೆ.

ಉಡುಪಿಯಲ್ಲಿ ಆತಂಕ ಹೆಚ್ಚಿಸಿದ ಕೊರೊನಾ!

ಉಡುಪಿ ಜನರಿಗೆ ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಬಂದು ಕ್ವಾರಂಟೈನ್ನಿಲ್ಲಿ ಇರುವವರಲ್ಲಿ ಹೆಚ್ಚು ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುತ್ತಿದೆ. ಇಂದು ಕೂಡ ಬರೋಬ್ಬರಿ 25 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.

ಅ.25ರಂದು ನೀಲಾನಗರ ದುರ್ಗಾದೇವಿ ಜಾತ್ರೆ ಸರಳವಾಗಿ ಆಚರಣೆ

ಸಮೀಪ ನೀಲಾನಗರದ ದುರ್ಗಾದೇವಿ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಬಂಜಾರ ಪೀಠಾಧಿಪತಿ ಕುಮಾರ ಮಹಾರಾಜ ತಿಳಿಸಿದರು.

ವಿದ್ಯುತ್ ಸ್ಪರ್ಷ: ಯುವಕ ಸಾವು

ವಿದ್ಯುತ್ ಸ್ಪರ್ಷದಿಂದ ಯುವಕ ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ಕದಡಿ ಗ್ರಾಮದಲ್ಲಿ ನಡೆದಿದೆ. ಕದಡಿ ಗ್ರಾಮದ ಬಸನಗೌಡ ರಾಮನಗೌಡ ಸಣಗೌಡ್ರ (25) ಸಾವನ್ನಪ್ಪಿದ ದುರ್ದೈವಿ.