ಲಕ್ಷ್ಮೇಶ್ವರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಮನೆ-ಮನೆಗೆ ತಲುಪಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಧಾರವಾಡ ವಿಭಾಗೀಯ ಬಿಜೆಪಿ ಸಂಘಟನಾ ಪ್ರಭಾರಿ ಲಿಂಗರಾಜ್ ಪಾಟೀಲ್ ಹೇಳಿದರು.
ಅವರು ಪಟ್ಟಣದ ಬಿಸಿಎನ್ ಪಾಲಿಟೆಕ್ನಿಕ್ ನಲ್ಲಿ ನಡೆದ ಬಿಜೆಪಿ ಶಿರಹಟ್ಟಿ ಮಂಡಲದ 2 ದಿನದ ಪ್ರಶಿಕ್ಷಣ ವರ್ಗದಲ್ಲಿ ಮಾತನಾಡಿ ಪ್ರತಿ ಹಳ್ಳಿ, ಶಹರದಲ್ಲಿ ಭೂತ್ ಮಟ್ಟದಿಂದ ನಮ್ಮ ಪಕ್ಷ ಸಂಘಟನೆಯಾಗಬೇಕು ಎಂದರು.
ಎರಡು ದಿನಗಳ ಪ್ರಶಿಕ್ಷಣ ವರ್ಗದಲ್ಲಿ ಹತ್ತು ವಿಷಯಗಳ ಕುರಿತು ಪದಾಧಿಕಾರಿಗಳಿಗೆ ವಿವಿಧ ತರಬೇತಿ ನೀಡಿ, ಪಕ್ಷದ ಕಾರ್ಯಕ್ಕೆ ಸಜ್ಜುಗೊಳಿಸಲಾಯಿತು.
ಶಿರಹಟ್ಟಿ ಮಂಡಲದ ಅಧ್ಯಕ್ಷ ಫಕೀರೇಶ ರಟ್ಟಿಹಳ್ಳಿ, ವಿಭಾಗೀಯ ಪ್ರಭಾರಿ ನಾರಾಯಣ್ ಜರ್ತಾರ್ಕರ್, ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಪ್ರಶಿಕ್ಷಣ ವರ್ಗದ ಸಂಚಾಲಕ ಶ್ರೀಪತಿ ಉಡುಪಿ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಗಂಗಾಧರ ಮೆಣಸಿನಕಾಯಿ ಪ್ರವೀಣ್ ಪಾಟೀಲ್, ನಗರ ಘಟಕದ ಅಧ್ಯಕ್ಷ ದುಂಡೇಶ ಕೊಟಗಿ, ಪರುಶುರಾಮ್ ಇಮ್ಮಡಿ, ನಾಗರಾಜ ಕುಲಕರ್ಣಿ, ವಿಜಯ ಕುಂಬಾರ, ಪ್ರಕಾಶ ಮಾದ್ನೂರ, ಅರುಣ್ ಪಾಟೀಲ್, ಸಂತೋಷ್ ಜಾವೂರ, ಉಳುವೇಶ ಬಸವರಾಜ ಚಕ್ರಸಾಲಿ, ಹಾಲಪ್ಪ ಸುರಣಗಿ, ಜಿಪಂ ಹಾಗೂ ತಾಪಂ ಸದಸ್ಯರು, ಪುರಸಭೆ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.