ಉಡುಪಿ: ಕುಡುಕರ ನಶೆಗೆ ಮೂರು ಬೈಕ್ ಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಈ ಘಟನೆ ತಾಲೂಕಿನ ಕೊಳಲಗಿರಿಯಲ್ಲಿ ನಡೆದಿದೆ.
ಕೊಳಲಗಿರಿ ಸರ್ಕಾರಿ ಶಾಲೆಯ ಹತ್ತಿರ ರಾತ್ರಿ ಜಗಳ ನಡೆದಿತ್ತು. ಉಪ್ಪೂರಿನ ಸೂರಜ್, ಅಲ್ವಿನ್, ಮೋಹಿತ್, ಬಾಲಕೃಷ್ಣ, ಮಣಿಕಂಠ ಹಾಗೂ ಪಪ್ಪು ಮದ್ಯಪಾನ ಮಾಡಿ ಜಗಳವಾಡಿದ್ದರು. ಮಾತಿಗೆ ಮಾತು ಬೆಳೆದು ಹೊಡೆದಾಟ ಆರಂಭವಾಗಿದೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.