ಲಕ್ಷ್ಮೇಶ್ವರ: ಅತಿಥಿ ಸತ್ಕಾರಕ್ಕಾಗಿ ಪಟ್ಟಣದಲ್ಲಿ ನಿರ್ಮಿಸಿದ್ದ ಪ್ರವಾಸಿ ಮಂದಿರದ ಸಂರಕ್ಷಣೆಗೆ ನಿರ್ಲಕ್ಷ್ಯದಿಂದ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ವಿಶ್ರಾಂತಿಗಾಗಿ ಬಂದೀರಿ ಜೊಕೆ ಪ್ರವಾಸಿಗರೆ ಎನ್ನುವಂತಿದೆ ಗದಗ ಜಿಲ್ಲೆ ಲಕ್ಷ್ಮೆಶ್ವರ ಪಟ್ಟಣದಲ್ಲಿ ಪ್ರವಾಸಿ ಮಂದಿರ.

ಪಟ್ಟಣದಲ್ಲಿ ಪ್ರವಾಸಿ ಮಂದಿರ ನಿರ್ಮಿಸಿ ಬಹಳಷ್ಟು ವರ್ಷಗಳೇ ಗತಿಸಿವೆ. ಈಗಲೂ ಮಂದಿರದ ಕಟ್ಟಡ ಗಟ್ಟಿಮುಟ್ಟಾಗಿದೆ. ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಮ್ಮ ಹಾಗೂ ಶಾಸಕರು ಪಟ್ಟಣದ ಪ್ರವಾಸಿ ಮಂದಿರವನ್ನು ಸಂರಕ್ಷಣೆ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದಾರೆ.

ಪ್ರವಾಸಿ ಮಂದಿರದ ಕಟ್ಟಡ ಸುಣ್ಣ ಬಣ್ಣ ಕಾಣದೆ ಮೂಲ ಸೌಲಭ್ಯಗಳಿಲ್ಲದೆ ಬಿಕೋ ಎನ್ನುತ್ತಿದೆ. ಈ ಕಟ್ಟಡದಲ್ಲಿ ಹೋದರೆ ಸಾಕು ಭೂತದ ಭಂಗಲೆ ಹಾಗೆ ಭಾಸವಾಗುತ್ತದೆ. ಸುಸಜ್ಜಿತ ಪ್ರವಾಸಿ ಮಂದಿರದ ಕಟ್ಟಡ ಕಾಲ ಕಾಲಕ್ಕೆ ದುರಸ್ತಿ ಕಾಣದೆ ಬಿಕೋ ಎನ್ನುತ್ತಿದೇ. ಆದರೆ ಮತ್ತೆ ಅದೆ ಖಾಲಿ ಜಾಗದಲ್ಲಿ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ ಇಡೀ ಪ್ರವಾಸಿ ಮಂದಿರದ ಆವರಣ ಹಸಿರು ಕಾಣದೆ ಬಿಕೋ ಎನ್ನುತ್ತಿದೆ.

ಅಕಾರಿಗಳು ಗಮನ ಹರಿಸಬೇಕು

ಸರಿಯಾದ ನಿರ್ವಹಣೆಯಿಲ್ಲದೇ ಅತಿಥಿಗಳು ಪ್ರವಾಸಿ ಮಂದಿರಕ್ಕೆ ಬರಲು ಹಿಂದೆಟು ಹಾಕುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕು. ಜೊತೆಗೆ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ತೋರಬೇಕಿದೆ ಎಂದು ಮಹೇಶ್ ಹೊಗೆಸೊಪ್ಪಿನ್, ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ ಆಗ್ರಹಿಸಿದ್ದಾರೆ.

ಸೌಲಭ್ಯ ವಂಚಿತ ಮಂದಿರ
ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಅತಿಥಿಗಳ ವಿಶ್ರಾಂತಿಗೆ ಭಂಗ ತರುವಂತಿರುವ ಅಸ್ವಚ್ಛತೆ, ಸೊಳ್ಳೆಗಳ ಕಾಟ, ಸಾಕಷ್ಟು ಪಿಠೋಪಕರಣಗಳ ಕೊರತೆ, ಅಡಿಗೆ ತಯಾರಿಸುವ ಕೊಣೆ ಇಲ್ಲ, ಮಳೆಗಾಲದಲ್ಲಿ ಮಳೆ ನೀರಿನಿಂದ ಸೋರುತ್ತಿದೆ, ಇನ್ನೂ ಹಲವಾರು ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿವೆ. ಅವ್ಯವಸ್ಥೆಗಳ ಆಗರವಾಗಿರುವ ಈ ಪ್ರವಾಸಿ ಮಂದಿರಕ್ಕೆ ಪ್ರವಾಸಿಗರು ಬಂದರೆ ಪರದಾಟ ನಿಶ್ಚಿತ ಎನ್ನುವಂತಿದೆ.

Leave a Reply

Your email address will not be published. Required fields are marked *

You May Also Like

ಕಂಟೆನ್ಮೆಂಟ್ ಜೋನ್ ಹಾಗೂ ಬಫರ್ ವಲಯಗಳ ಬಗ್ಗೆ ಪರಿಷ್ಕೃತ ಮಾರ್ಗಸೂಚಿ

ರಾಜ್ಯದಲ್ಲಿ ಕೋವಿಡ್-19 ವಿಕಸಿಸುತ್ತಿರುವ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ಅಕ್ಕ-ಪಕ್ಕದಲ್ಲಿರುವ/ಹತ್ತಿರದಲ್ಲಿಯೇ ಇರುವ ಮನೆಗಳು ಅಥವಾ ಅಪಾರ್ಟ್ಮೆಂಟ್/ ವಸತಿ ಸಮುಚ್ಛಯಗಳಲ್ಲಿ ವರದಿಯಾಗುತ್ತಿವೆ. ಇದರಿಂದ ಕಂಟೇನ್ಮೆಂಟ್ ವಲಯಗಳ ಸಂಖ್ಯೆಯು ಮಿತಿ ಮೀರಿದ್ದು, ಪ್ರಾಧಿಕಾರಿಗಳಿಗೆ ಸರ್ವೇಕ್ಷಣಾ ಚಟುವಟಿಕೆಗಳನ್ನು ಸುಲಭವಾಗಿ ಕೈಗೊಳ್ಳಲು ಅಡ್ಡಿಯಾಗುವುದೇ ಅಲ್ಲದೇ, ಪರಿಧಿ ವಲಯ ನಿಯಂತ್ರಣವನ್ನೂ ಸಹ ಖಚಿತಪಡಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.

ರಾಜ್ಯದಲ್ಲಿಂದು 442 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 442 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 10,560 ಕ್ಕೆ ಏರಿಕೆಯಾದಂತಾಗಿದೆ.

ಬೈಕ್ ಡಿಕ್ಕಿ: ಪಾದಚಾರಿ ಸಾವು

ಹಿಂದಿನಿಂದ ಬಂದ ಬೈಕ್ ಹರಿದು ವಾಯುವಿಹಾರಿ ಸ್ಥಳದಲ್ಲೇ ಸಾವಿನಪ್ಪಿದ ಘಟನೆ ತಾಲೂಕಿನ ರಾಮಗೇರಿ ಗ್ರಾಮದಲ್ಲಿ ನಡೆದಿದೆ. ಶನಿವಾರ ಬೆಳಗಿನ ಸಮಯದಲ್ಲ್ಲಿ ವಾಯುವ ವಿಹಾರಕ್ಕೆ ತೆರಳಿದ್ದ ಹನಮಂತಪ್ಪ ಕಾಳೆ(52) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

7 ದಿನಗಳಿಂದ ಗ್ರಾ.ಪಂ ನೌಕರರ ಕಾರ್ಯ ಸ್ಥಗಿತ ; ಸಾರ್ವಜನಿಕರಿಗೆ ಪರದಾಟ ; ಧರಣಿ ‘ಕೈ’ ಬಿಡದ ಗ್ರಾ.ಪಂ ಒಕ್ಕೂಟ..!

ಉತ್ತರಪ್ರಭ ಗದಗ :ಕಳೆದ 7 ದಿನಗಳಿಂದ ರಾಜ್ಯಾದ್ಯಂತ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತನ…