ನರೇಗಲ್ಲ: ನಿಗದಿತ ಸಮಯಕ್ಕೆ ಮೇಲ್ಸೆತುವೆ ಕಾಮಗಾರಿ ಮುಕ್ತಾಯವಾಗದ ಕಾರಣ ಗ್ರಾಮಸ್ಥರ ಸ್ಥಿತಿ ಕೊಂಕಣಾ ಸುತ್ತಿ ಮೈಲಾರಕ್ಕೆ ಹೋದ್ರು ಅನ್ನುವಂತಾಗಿದೆ.

ಸಮೀಪದ ಹೊಸಳ್ಳಿ ಜಕ್ಕಲಿ ರಸ್ತೆಯ ಗಡ್ಡಿ ಹಳ್ಳಕ್ಕೆ ನಿರ್ಮಾಣ ಮಾಡುತ್ತಿರುವ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಅಂದಾಜು ಒಂದುವರೆ ವರ್ಷದಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ಕಾಮಗಾರಿ ಏನೋ ನಡೆದಿದೆ. ಆದ್ರೆ ಪರ್ಯಾಯ ರಸ್ತೆಯಿಲ್ಲದೆ ಸ್ಥಳೀಯರು ಸಂಚಾರಕ್ಕೆ ಪರದಾಡುವಂತಾಗಿದೆ.

ಈ ಯೋಜನೆ ಮಾಜಿ ಶಾಸಕ ಜ್ಞಾನದೇವ ದೂಡಮೇಟಿಯವರ ಕನಸಿನ ಕೂಸು ಎನ್ನುವುದು ಸ್ಥಳೀಯರ ಅಭಿಪ್ರಾಯ.

ಸೇತುವೆ ನಿರ್ಮಾಣದಿಂದ ನೇರ ಮಾರ್ಗ

ಮೇಲ್ಸೇತುವೆಯಿಂದ ಗದಗದಿಂದ ಗುಡೂರ ತಲುಪಲು ನೇರ ಮಾರ್ಗ ದೊರೆಯುತ್ತದೆ. ಕೂಟುಮಚಗಿ, ನರೇಗಲ್ಲ ಜಕ್ಕಲಿ, ಹೊಸಳ್ಳಿ, ಇಟಗಿಯಿಂದ ಗುಡೂರಿಗೆ ಸಂಪರ್ಕ ದೊರೆಯುತ್ತದೆ.

ಮಳೆಗಾಲದಲ್ಲಿ ಗಡ್ಡಿಹಳ್ಳ ತುಂಬಿ ಹರಿದರೆ ರಸ್ತೆಯ ಸಂಪರ್ಕ ಸಂಪೂರ್ಣ ಕಡಿತವಾಗುತ್ತದೆ. ಹೀಗಾಗಿ ಈ ಸೇತುವೆ ಕಾಮಗಾರಿಯಿಂದ ಸ್ಥಳೀಯರು ಸಂತಸ ಗೊಂಡಿದ್ದಾರೆ. ಆದರೆ ಕಾಮಗಾರಿ ವಿಳಂಬದಿಂದ ಆಗುತ್ತಿರುವ ತೊಂದರೆಗೆ ಇದೀಗ ಸಂಕಟವೂ ಪಡುತ್ತಿದ್ದಾರೆ.

ಒಂದ್-ಒಂದುವರಿ ವರ್ಷದ್ ಹೊತ್ತಾತ್ರಿ

ಒಂದ್-ಒಂದುವರಿ ವರ್ಷದ್ ಹೊತ್ತಾತ್ರಿ. ಮಳೆ ಬಂದ್ರ ಮನಿ ಸೇರೋದು ಕಷ್ಟ ಆಗೈತಿ. ಗದಗದಿಂದ 40 ಕಿಲೋಮೀಟರ್ ದಾಗ ಊರ ಸೇರತಿದ್ವಿ. ಈಗ ಕಾಮವಾರಿನೂ ಲಗೂನಾ ಮುಗಿವಲ್ದ 60 ಕಿಲೋಮೀಟರ್ ಸುತ್ ಹೊಡೆದ್ ಊರ ಸೇರಾಕುಂತಿವಿ. ಲಗೂನ ಸೇತುವೆ ಕೆಲ್ಸಾ ಮುಗಿಸಿ ನಮ್ ಸಮಸ್ಯೆ ಬಗೆಹರಿಸ್ರಿ.

ಸಂಗಮೇಶ್ ಮೆಣಸಗಿ, ರಾಜೇಂದ್ರ ಜಕ್ಕಲಿ, ಸ್ಥಳೀಯರು.

1.74 ಕೋಟಿ ಮೊತ್ತದ ಕಾಮಗಾರಿ

ಶಾಸಕ ಕಳಕಪ್ಪ ಬಂಡಿ ಅವರು 2018ರಲ್ಲಿ 1.74 ಕೋಟಿ ಮೊತ್ತದ ಈ ಕಾಮಗಾರಿಗೆ ಚಾಲನೆ ನೀಡಿದ್ದರು. ಶೇ.50 ಮಾತ್ರ ಕಾಮಗಾರಿ ಮುಗಿದಿದ್ದು ಉಳಿದ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಸೇತುವೆ ಕಾಮಗಾರಿ ಸಂದರ್ಭದಲ್ಲಿ ಪರ್ಯಾಯ ರಸ್ತೆ ನಿರ್ಮಾಣ ಮಾಡದೆ ಕಾಮಗಾರಿ ಪ್ರಾರಂಭ ಮಾಡಿದ್ದರಿಂದಾಗಿ ಸ್ವಲ್ಪ ಮಳೆಯಾದರೆ ಸಾಕು ಸಂಚಾರ ಸ್ಥಗಿತವಾಗುತ್ತದೆ.

ಮಳೆಗಾಲ ಮುಗಿದ ನಂತರ ಕಾಮಗಾರಿ

ಹೊಸಳ್ಳಿ-ಜಕ್ಕಲಿ ಗಡ್ಡಿ ಹಳ್ಳದ ಮೇಲ್ಸೇತುವೆ ಕಾಮಗಾರಿ ಮಳಗಾಲವಿದ್ದರಿಂದ ಸ್ಥಗಿತಗೊಂಡಿದೆ. ದೊಡ್ಡ ಪ್ರಮಾಣದ ಕ್ರೇನ್ ಬಳಸಿ ಸೇತುವೆ ನಿರ್ಮಾಣ ಮಾಡಬೇಕಾಗಿದೆ. ಆದ್ದರಿಂದ ಮಳೆಗಾಲ ಕಳೆದ ಮೇಲೆ ಕಾಮಗಾರಿ ಮುಂದುವರೆಸುತ್ತೆವೆ. – ರಾಜಶೇಖರ, ಪ್ರೊಜೆಕ್ಟ್ ಮ್ಯಾನೇಜರ್

40 ಕಿಮಿ ರಸ್ತೆಗೆ 60 ಕಿಮಿ ಸುತ್ತು

ಗದಗದಿಂದ ಹೊಸಳ್ಳಿಗೆ 40 ಕಿಮಿ ಅಂತರವಿದೆ. ಆದರೆ ಈಗ ಕಾಮಗಾರಿ ನಡೆದಿರುವುದರಿಂದ ಇಲ್ಲಿನ ಜನರು ರೋಣ ಮಾರ್ಗವಾಗಿಯೇ ಊರು ಸೇರಬೇಕಿದೆ. ಇದರಿಂದ 20 ಕಿಮಿ ಹೆಚ್ಚುವರಿಯಾಗಿ ಅಂದರೆ 60 ಕಿಮಿ ದೂರವಾಗುತ್ತದೆ. ಇದರಿಂದ ಪ್ರಯಾಣಿಕರ ಸಮಯ ಹಾಗೂ ಹೆಚ್ಚು ಹಣ ವ್ಯಯವಾಗುತ್ತದೆ. ಇನ್ನು ಮಳೆಯಾದರೆ ಸಾಕು ಜಮೀನಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಕಾಮಗಾರಿ ಯಾವಾಗ ಮುಗಿಯಿತ್ತೂ ಅಂತಾ ಗ್ರಾಮಸ್ಥರ ಒತ್ತಾಯಿಸುತ್ತಿದ್ದಾರೆ.


Leave a Reply

Your email address will not be published. Required fields are marked *

You May Also Like

ಕೊರೊನಾ ಖರ್ಚು ವೆಚ್ಚದ ಕುರಿತು ಶ್ವೇತಪತ್ರ ಹೊರಡಿಸಿ: ಸಿದ್ದರಾಮಯ್ಯ

ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ಕರ್ನಾಟಕ ಸಿಎಂ ಬಿ.ಎಸ್.ಯಡಿಯೂರಪ್ಪ ಕೈಗೊಂಡ ಕ್ರಮಗಳು ಮತ್ತು ಮಾಡಿರುವ ಖರ್ಚು-ವೆಚ್ಚಗಳು…

ಗದಗ ಎಸ್ಪಿ ಯತೀಶ ಎನ್ ವರ್ಗಾವಣೆ

ಉತ್ತರಪ್ರಭ ಸುದ್ದಿ ಗದಗ: ಗದಗ ಜಿಲ್ಲೆಗೆ ನೂತನ ಎಸ್ಪಿ ಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಪ್ರಕಾಶ್ ದೇವರಾಜು ಅವರನ್ನು ನೂತನ ಪೋಲಿಸ್ ವರಿಷ್ಠಾಧಿಕಾರಿಗಳಾಗಿ ಆಗಮಿಸಲಿದ್ದು .ಎನ್ ಯತೀಶರವರನ್ನು ಮಂಡ್ಯ ಜಿಲ್ಲೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ .ಎನ್ ಯತೀಶರವರು ಕೊವಿಡ್ ಸಮಯದಲ್ಲಿ ಮಾಡಿದ ಕಾರ್ಯ ಗದುಗಿನ ಜನತೆ ಮರೆಯಲಾರರು.

ಚುನಾವಣೆ ಎಫೆಕ್ಟ್ – ಶಿರಾದಲ್ಲಿ ಶೇ. 20ರಷ್ಟು ಜನರಲ್ಲಿ ಕಂಡು ಬಂದ ಸೋಂಕು!

ತುಮಕೂರು : ಶಿರಾದಲ್ಲಿ ಉಪಚುನಾವಣೆ ಜರುಗಿದ ಕಾರಣ ಜನದಟ್ಟಣೆ ಉಂಟಾಗಿ ಶೇ. 20ರಷ್ಟು ಜನರಲ್ಲಿ ಸೋಂಕು ಕಂಡು ಬಂದಿದೆ ಎನ್ನಲಾಗುತ್ತಿದೆ.

ಅರಣ್ಯಗಳ ಅಂಚಿನಲ್ಲಿ 650 ಕಿ.ಮೀ ರೈಲ್ವೆ ಬ್ಯಾರಿಕೇಡ್ ಹಾಕುವ ಗುರಿ : ಅರಣ್ಯ ಸಚಿವ ಆನಂದ್ ಸಿಂಗ್

ಕಾಡಂಚಿನ ಗ್ರಾಮಗಳಲ್ಲಿ ಪದೆ ಪದೇ ಜಾನುವಾರಗಳ ಮೇಲೆ ಹುಲಿ ದಾಳಿ ನಡೆಸುತ್ತಿರುವ ಹಿನ್ನಲೆಯಲ್ಲಿ ಇಂದು ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ಪರಿಶೀಲಿಸಿದರು.